Friday, March 19, 2010

chaamunDi taayi aaNe - aaptarakshaka

ಚಿತ್ರ: ಆಪ್ತರಕ್ಷಕ
ಗಾಯನ: ಎಸ್ ಪಿ ಬಿ
ನಟರು: ಸಾಹಸ ಸಿಂಹ ವಿಷ್ಣು ವರ್ಧನ್, ಲಕ್ಷ್ಮಿ ಗೋಪಾಲಸ್ವಾಮಿ 
ಸಾಹಿತ್ಯ - ಕವಿರಾಜ್
ಸಂಗೀತ - ಗುರುಕಿರಣ್

ಚಾಮುಂಡಿ ತಾಯಿ ಆಣೆ ನಾನೆಂದು ನಿಮ್ಮವನೇ
ಇನ್ನೆಲ್ಲಾ ಜನ್ಮದಲ್ಲೂ ಹುಟ್ಟೋದು ಇಲ್ಲೇನೇ
ಪ್ರೀತ್ಸೋದು ಎಂದೂ ನಿಮ್ಮನ್ನೇ

ಯಾರನ್ನೂ ನೋಯಿಸಬೇಡ , ಮೋಸವಾ ಮಾಡಲೇಬೇಡ
ನಿನ್ನಾಗ ಕಾಯುತ್ತಾನೆ ತಾನೇ ಭಗವಂತ
ಬಿಟ್ಟರೆ ನಿನ್ನ ಸ್ವಾರ್ಥ , ಎಲ್ಲರೂ ನಿಂಗೆ ಸ್ವಂತ
ಒಂದಾಗಿ ಬಾಳು ಎಂದೂ ಹಂಚಿ ತಿನ್ನುತಾ
ಉಪ್ಪನ್ನು ತಿಂದ ಮೇಲೆ ನೀರನ್ನ ಕುಡಿಲೇಬೇಕು
ತಪ್ಪನ್ನ ಮಾಡೋರೆಲ್ಲಾ ದಂಡಾನಾ ತೆರಲೇಬೇಕು

ಭೂಮಿಯೇ ಒಂದು ಊರು , ಎಲ್ಲಕೂ ಬಾನೇ ಸೂರು
ನಡುವಲ್ಲಿ ಬಾಳೋ ಮಂದಿ , ಎಲ್ಲಾ ನಮ್ಮೋರು
ಎತ್ತರಾ ಎಷ್ಟೇ ಏರು , ಮಣ್ಣಲ್ಲಿ ಇರಲಿ ಬೇರು
ನೋಡದೆ ಅವರು ಇವರು , ವಿನಯವ ನೀ ತೋರು
ಈ ಬಾಳು ಬೇವು ಬೆಲ್ಲಾ , ಎಲ್ಲಾನೂ ನೀ ಸವಿಬೇಕು
ಅಂದಂತೆ ಆಗೋದಿಲ್ಲಾ ಬಂದಂತೇ ನೀನಿರಬೇಕು

No comments: