Thursday, December 31, 2009

baanu kempaadante - abhay

ಚಿತ್ರ: ಅಭಯ್
ನಟರು: ದರ್ಶನ್, ಆರತಿ
ಗಾಯನ: ಸುನೀತಾ ಗೋಪರಾಜು 

ಬಾನು ಕೆಂಪಾದಂತೆ ಗಾಳಿ ಇಂಪಾದಂತೆ
ತಾಜಾ ಅನುರಾಗ ಶುರುವಾಗುವ ಲಕ್ಷಣವೇ
ನೀನು ನೆನಪಾದಂತೆ ಜೀವ ನವಿರಾದಂತೆ
ತಾಜಾ ಅನುರಾಗ ಶುರುವಾಗುವ ಲಕ್ಷಣವೇ
ಅತಿಯಾಗಿ ಸುಳಿವಂತ ಹಿತವಾಗಿ ಕಾಡುವಂತ
ಆತಂಕವಾದಿಯೇ ನಿನಗಾಗಿ ಕಾಯುವೆ

ಕಳೆದು ಹೋದೆ ನೋಡು ಹೇಗೆ ನಿನ್ನ ಧ್ಯಾನದಲ್ಲಿ ನಾನು
ಕನಸಿನಲ್ಲಿ ನನ್ನ ಹೀಗೆ ಎಳೆದುಕೊಂಡು ಹೋಗು ನೀನು
ಒಂದು ಚೂರೆ ಕಾಯಿಸು, ಬಂದು ಚೆಂದಗಾಣಿಸು
ಮಿತಿಮೀರಿ ಹಚ್ಚಿಕೊಂಡು ಬಲವಾಗಿ ಮೆಚ್ಚಿಕೊಂಡು
ಮನಸೊಂದೆ ಆದಮೇಲೆ ಮರೆಯಾಗಿ ದೂರ....ಇರಲಾರೆ ಇರಲಾರೆ

ಒಂದೆ ಮಾತು ನೂರು ಬಾರಿ ಹೇಳಬೇಕು ಎಂಬ ಆಸೆ
ಆದರು ಸಾಲದಾಗಿ ಹೋಯಿತೀಗ ನನ್ನ ಭಾಷೆ
ಮೌನ ಕೂಡ ಮಲ್ಲಿಗೆ ಸೋಕಿದಾಗ ಮೆಲ್ಲಗೆ
ಹೊಸ ರೆಕ್ಕೆ ಮೂಡಿ ಬಂತು ಹೃದಯಕ್ಕೆ ಈಗ ತಾನೇ
ಜೊತೆಯಲ್ಲೇ ಇಂದು ನಿನ್ನ ಖುಷಿಯಾಗಿ ಹಾರಿ.....ಬರಲೇನು ಬರಲೇನು

ಬಾನು ಕೆಂಪಾದಂತೆ ಗಾಳಿ ಇಂಪಾದಂತೆ
ತಾಜಾ ಅನುರಾಗ ಶುರುವಾಗಿದೆ ಈ ಕ್ಷಣವೇ
ಅತಿಯಾಗಿ ಸುಳಿವಂತ ಹಿತವಾಗಿ ಕಾಡುವಂತ
ಆತಂಕವಾದಿಯೇ ನಿನಗಾಗಿ ಕಾಯುವೆ.....

kuDi notave - parichaya

ಚಿತ್ರ: ಪರಿಚಯ
ನಟರು: ತರುಣ್, ರೇಖ
ಗಾಯನ: ಶ್ರೇಯ ಗೋಶಲ್, ಶಾನ್

ಕುಡಿ ನೋಟವೇ ಮನಮೋಹಕ
ಒಡನಾಟವೇ ಬಲು ರೋಚಕ
ಹುಡುಕಾಟವೇ ರೋಮಾಂಚಕ ಆ ಆ .....

ನೀ ಬಂದು ಹೋದ ಜಾಗ ಉಸಿರಾಡಿದೆ ಉಸಿರಾಡಿದೆ
ಬೆರಳೆಲ್ಲ ಓಲೆ ಗೀಚಿ ಮಸಿಯಾಗಿದೆ ಮಸಿಯಾಗಿದೆ
ಕನಸೊಂದು ಕುಲುಕುತ ಕೈಯ
ತುಸು ದೂರ ಚಲಿಸಿದೆ ಎಲ್ಲೋ
ಮನವೀಗ ಮರೆಯುತ ಮೈಯ
ಗುರುತನ್ನೇ ಅರಸಿದೆ ಎಲ್ಲೋ
ನಿನ್ನ ಕಂಡಾಗಲೇ ಜೀವ ಮೂಕ

ಅನುರಾಗಕ್ಕೀಗ ಮಾತೆ ಮಿತಿಯಾಗಿದೆ ಮಿತಿಯಾಗಿದೆ
ಜೊತೆಯಾದ ಮೇಲೆ ಪ್ರೀತಿ ಅತಿಯಾಗಿದೆ ಅತಿಯಾಗಿದೆ
ಮರೆಮಾಚಿ ಕರೆಯಲು ನೀನು
ಮನಸಾರೆ ಪರವಶ ನಾನು
ನೆನಪಾಗಿ ಸುಳಿಯಲು ನೀನು
ನವಿರಾದ ಪರಿಮಳವೇನು
ನೀನೆ ಈ ಜೀವದ ಭಾವಲೋಕ

ಕುಡಿನೋಟವೇ .....

Friday, December 25, 2009

nee sanihake bandare - maLeyalli jotheyalli

ಚಿತ್ರ: ಮಳೆಯಲ್ಲಿ ಜೊತೆಯಲ್ಲಿ
ನಟರು: ಗಣೇಶ್, ಯುವಿಕ ಚೌದರಿ, ಅಂಜನ ಸುಖಾನಿ
ಗಾಯನ: ಸೋನು ನಿಗಮ್

ನೀ ಸನಿಹಕೆ ಬಂದರೆ ಹೃದಯದ ಗತಿಯೇನು ಹೇಳು ನೀನು, ನೀನೆ ಹೇಳು
ಇನ್ನು ನಿನ್ನ ಕನಸಿನಲ್ಲಿ ಕರೆ ನೀನು ಶುರು ನಾನು
ನಿನ್ನೊಲವಿಗೆ ಮಿಡಿಯದ ಹೃದಯದ ಉಪಯೋಗ ಏನು ಹೇಳು, ಹೇಳು ನೀನು

ಸಮೀಪ ಬಂತು ಬಯಕೆಗಳ ವಿಶೇಷವಾದ ಮೆರವಣಿಗೆ
ಇದೀಗ ನೋಡು ಬೆರಳುಗಳ ಸರಾಗವಾದ ಬರವಣಿಗೆ
ನಿನ್ನ ಬಿಟ್ಟು ಇಲ್ಲ ಜೀವ ಎಂದೂ ಕೂಡ ಒಂದು ಘಳಿಗೆ
ನಿನ್ನ ಮಾತು ಏನೇ ಇರಲಿ ನಿನ್ನ ಮೌನ ನಂದೇ ಏನು
ನೀ ಸನಿಹಕೆ ಬಂದರೆ.....

ನನ್ನ ಎದೆಯ ಸಣ್ಣ ತೆರೆಯ ಧಾರಾವಾಹಿ ನಿನ್ನ ನೆನಪು
ನೆನ್ನೆ ತನಕ ಎಲ್ಲಿ ಅಡಗಿ ಇತ್ತು ನಿನ್ನ ಕಣ್ಣ ಹೊಳಪು
ಉಸಿರು ಹಾರಿ ಹೋಗುವ ಹಾಗೆ ಬಿಗಿದು ತಬ್ಬಿ ಕೊಲ್ಲು ನೀನು
ಮತ್ತೆ ಮತ್ತೆ ನಿನ್ನುಸಿರು ನೀಡುತ ಉಳಿಸು ನನ್ನನು 
ದಾರಿಯಲ್ಲಿ ಬುತ್ತಿ ಹಿಡಿದು ನಿಂತ ಸಾಥಿ ನೀನೆ ಏನು
ನೀ ಸನಿಹಕೆ ಬಂದರೆ.....