Thursday, December 31, 2009

baanu kempaadante - abhay

ಚಿತ್ರ: ಅಭಯ್
ನಟರು: ದರ್ಶನ್, ಆರತಿ
ಗಾಯನ: ಸುನೀತಾ ಗೋಪರಾಜು 

ಬಾನು ಕೆಂಪಾದಂತೆ ಗಾಳಿ ಇಂಪಾದಂತೆ
ತಾಜಾ ಅನುರಾಗ ಶುರುವಾಗುವ ಲಕ್ಷಣವೇ
ನೀನು ನೆನಪಾದಂತೆ ಜೀವ ನವಿರಾದಂತೆ
ತಾಜಾ ಅನುರಾಗ ಶುರುವಾಗುವ ಲಕ್ಷಣವೇ
ಅತಿಯಾಗಿ ಸುಳಿವಂತ ಹಿತವಾಗಿ ಕಾಡುವಂತ
ಆತಂಕವಾದಿಯೇ ನಿನಗಾಗಿ ಕಾಯುವೆ

ಕಳೆದು ಹೋದೆ ನೋಡು ಹೇಗೆ ನಿನ್ನ ಧ್ಯಾನದಲ್ಲಿ ನಾನು
ಕನಸಿನಲ್ಲಿ ನನ್ನ ಹೀಗೆ ಎಳೆದುಕೊಂಡು ಹೋಗು ನೀನು
ಒಂದು ಚೂರೆ ಕಾಯಿಸು, ಬಂದು ಚೆಂದಗಾಣಿಸು
ಮಿತಿಮೀರಿ ಹಚ್ಚಿಕೊಂಡು ಬಲವಾಗಿ ಮೆಚ್ಚಿಕೊಂಡು
ಮನಸೊಂದೆ ಆದಮೇಲೆ ಮರೆಯಾಗಿ ದೂರ....ಇರಲಾರೆ ಇರಲಾರೆ

ಒಂದೆ ಮಾತು ನೂರು ಬಾರಿ ಹೇಳಬೇಕು ಎಂಬ ಆಸೆ
ಆದರು ಸಾಲದಾಗಿ ಹೋಯಿತೀಗ ನನ್ನ ಭಾಷೆ
ಮೌನ ಕೂಡ ಮಲ್ಲಿಗೆ ಸೋಕಿದಾಗ ಮೆಲ್ಲಗೆ
ಹೊಸ ರೆಕ್ಕೆ ಮೂಡಿ ಬಂತು ಹೃದಯಕ್ಕೆ ಈಗ ತಾನೇ
ಜೊತೆಯಲ್ಲೇ ಇಂದು ನಿನ್ನ ಖುಷಿಯಾಗಿ ಹಾರಿ.....ಬರಲೇನು ಬರಲೇನು

ಬಾನು ಕೆಂಪಾದಂತೆ ಗಾಳಿ ಇಂಪಾದಂತೆ
ತಾಜಾ ಅನುರಾಗ ಶುರುವಾಗಿದೆ ಈ ಕ್ಷಣವೇ
ಅತಿಯಾಗಿ ಸುಳಿವಂತ ಹಿತವಾಗಿ ಕಾಡುವಂತ
ಆತಂಕವಾದಿಯೇ ನಿನಗಾಗಿ ಕಾಯುವೆ.....

kuDi notave - parichaya

ಚಿತ್ರ: ಪರಿಚಯ
ನಟರು: ತರುಣ್, ರೇಖ
ಗಾಯನ: ಶ್ರೇಯ ಗೋಶಲ್, ಶಾನ್

ಕುಡಿ ನೋಟವೇ ಮನಮೋಹಕ
ಒಡನಾಟವೇ ಬಲು ರೋಚಕ
ಹುಡುಕಾಟವೇ ರೋಮಾಂಚಕ ಆ ಆ .....

ನೀ ಬಂದು ಹೋದ ಜಾಗ ಉಸಿರಾಡಿದೆ ಉಸಿರಾಡಿದೆ
ಬೆರಳೆಲ್ಲ ಓಲೆ ಗೀಚಿ ಮಸಿಯಾಗಿದೆ ಮಸಿಯಾಗಿದೆ
ಕನಸೊಂದು ಕುಲುಕುತ ಕೈಯ
ತುಸು ದೂರ ಚಲಿಸಿದೆ ಎಲ್ಲೋ
ಮನವೀಗ ಮರೆಯುತ ಮೈಯ
ಗುರುತನ್ನೇ ಅರಸಿದೆ ಎಲ್ಲೋ
ನಿನ್ನ ಕಂಡಾಗಲೇ ಜೀವ ಮೂಕ

ಅನುರಾಗಕ್ಕೀಗ ಮಾತೆ ಮಿತಿಯಾಗಿದೆ ಮಿತಿಯಾಗಿದೆ
ಜೊತೆಯಾದ ಮೇಲೆ ಪ್ರೀತಿ ಅತಿಯಾಗಿದೆ ಅತಿಯಾಗಿದೆ
ಮರೆಮಾಚಿ ಕರೆಯಲು ನೀನು
ಮನಸಾರೆ ಪರವಶ ನಾನು
ನೆನಪಾಗಿ ಸುಳಿಯಲು ನೀನು
ನವಿರಾದ ಪರಿಮಳವೇನು
ನೀನೆ ಈ ಜೀವದ ಭಾವಲೋಕ

ಕುಡಿನೋಟವೇ .....

Friday, December 25, 2009

nee sanihake bandare - maLeyalli jotheyalli

ಚಿತ್ರ: ಮಳೆಯಲ್ಲಿ ಜೊತೆಯಲ್ಲಿ
ನಟರು: ಗಣೇಶ್, ಯುವಿಕ ಚೌದರಿ, ಅಂಜನ ಸುಖಾನಿ
ಗಾಯನ: ಸೋನು ನಿಗಮ್

ನೀ ಸನಿಹಕೆ ಬಂದರೆ ಹೃದಯದ ಗತಿಯೇನು ಹೇಳು ನೀನು, ನೀನೆ ಹೇಳು
ಇನ್ನು ನಿನ್ನ ಕನಸಿನಲ್ಲಿ ಕರೆ ನೀನು ಶುರು ನಾನು
ನಿನ್ನೊಲವಿಗೆ ಮಿಡಿಯದ ಹೃದಯದ ಉಪಯೋಗ ಏನು ಹೇಳು, ಹೇಳು ನೀನು

ಸಮೀಪ ಬಂತು ಬಯಕೆಗಳ ವಿಶೇಷವಾದ ಮೆರವಣಿಗೆ
ಇದೀಗ ನೋಡು ಬೆರಳುಗಳ ಸರಾಗವಾದ ಬರವಣಿಗೆ
ನಿನ್ನ ಬಿಟ್ಟು ಇಲ್ಲ ಜೀವ ಎಂದೂ ಕೂಡ ಒಂದು ಘಳಿಗೆ
ನಿನ್ನ ಮಾತು ಏನೇ ಇರಲಿ ನಿನ್ನ ಮೌನ ನಂದೇ ಏನು
ನೀ ಸನಿಹಕೆ ಬಂದರೆ.....

ನನ್ನ ಎದೆಯ ಸಣ್ಣ ತೆರೆಯ ಧಾರಾವಾಹಿ ನಿನ್ನ ನೆನಪು
ನೆನ್ನೆ ತನಕ ಎಲ್ಲಿ ಅಡಗಿ ಇತ್ತು ನಿನ್ನ ಕಣ್ಣ ಹೊಳಪು
ಉಸಿರು ಹಾರಿ ಹೋಗುವ ಹಾಗೆ ಬಿಗಿದು ತಬ್ಬಿ ಕೊಲ್ಲು ನೀನು
ಮತ್ತೆ ಮತ್ತೆ ನಿನ್ನುಸಿರು ನೀಡುತ ಉಳಿಸು ನನ್ನನು 
ದಾರಿಯಲ್ಲಿ ಬುತ್ತಿ ಹಿಡಿದು ನಿಂತ ಸಾಥಿ ನೀನೆ ಏನು
ನೀ ಸನಿಹಕೆ ಬಂದರೆ.....

Tuesday, November 24, 2009

preetige janma - excuse me

ಚಿತ್ರ: ಎಕ್ಸ್ಕ್ಯೂಸ್ ಮಿ
ಹಾಡಿದವರು: ಹೇಮಂತ್
ನಟರು: ಅಜಯ್ ರಾವ್, ಸುನಿಲ್ ರಾವ್, ರಮ್ಯ 

ಪ್ರೀತಿಗೆ ಜನ್ಮ ನೀಡಿದ ಬ್ರಹ್ಮ 
ಭೂಮಿಗೆ ತಂದು ಎಸೆದ
ಹಂಚಲು ಹೋಗಿ ಬೇಸರವಾಗಿ 
ಹಂಚಿಕೋ ಹೋಗಿ ಎಂದ
ಕೊನೆಗೂ ಸಿಗದೇ ಪ್ರೀತಿ

ಬದುಕು ರಣಭೂಮಿ
ಜಯಿಸಲಿ ಪ್ರೇಮಿ 

ಅವನ ಅವಳ ಬದುಕು ಮುಗಿದರೂನು
ಅವರ ಪ್ರೀತಿ ಗುರುತು ಸಾಯದಿನ್ನು
ಬಿರುಗಾಳಿಗೆ ಸೂರ್ಯ ಹಾರಿ ಹೋದರು 
ಪ್ರೀತಿಯು ಹಾರದು 
ಈ ಜಗದ ಎಲ್ಲ ಗಡಿಯಾರ ನಿಂತರು 
ಪ್ರೀತಿಯು ನಿಲ್ಲದು 

ಬದುಕು ಸುಡುಭೂಮಿ
ನಡುಗನು ಪ್ರೇಮಿ

ಯಮನು ಶರಣು ಎನುವ ಪ್ರೀತಿ ಮುಂದೆ
ಧನಿಕ ತಿರುಕ ಪ್ರೀತಿ ಮುಂದೆ ಒಂದೆ
ಹಳೆ ಗಾದೆ ವೇದಾಂತ ಬೂದಿಯಾದರು
ಪ್ರೀತಿಯು ಸಾಯದು
ತಿರುಗಾಡುವ ಭೂಮಿಯು ನಿಂತೆ ಹೋದರು
ಪ್ರೀತಿಯು ನಿಲ್ಲದು

ಬದುಕು ಮರುಭೂಮಿ
ಮಳೆ ಹನಿ ಪ್ರೇಮಿ

preetse preetse - preetse

ಚಿತ್ರ: ಪ್ರೀತ್ಸೇ
ನಟರು: ಉಪೇಂದ್ರ, ಸೊನಾಲಿ ಬೇಂದ್ರೆ
ಹಾಡಿದವರು: ಹೇಮಂತ್

ಪ್ರೀತ್ಸೇ ಪ್ರೀತ್ಸೇ ಕಣ್ಣು ಮುಚ್ಚಿ ನನ್ನ ಪ್ರೀತ್ಸೇ
ಮನಸು ಬಿಚ್ಚಿ ನನ್ನ ಪ್ರೀತ್ಸೇ
ಪ್ರೀತ್ಸೇ ಪ್ರೀತ್ಸೇ ಕಣ್ಣು ಮುಚ್ಚಿ ನನ್ನ ಪ್ರೀತ್ಸೇ
ಮನಸು ಬಿಚ್ಚಿ ನನ್ನ ಪ್ರೀತ್ಸೇ
ಉಸಿರಾಗಿ ಪ್ರೀತ್ಸೇ ಬದುಕಾಗಿ ಪ್ರೀತ್ಸೇ
ನನಗಾಗಿ ಪ್ರೀತ್ಸೇ ನಿನಗಾಗಿ ಪ್ರೀತ್ಸೇ
ಓ ಕಿರಣ ಓ ಕಿರಣ ನೀ ನನ್ನ ಪ್ರೀತಿ ಕಿರಣ
ಕಿರಣ ಕಿರಣ.....

ಸಾವಿರಾರು ದಿನಗಳ ಕೆಳಗೆ
ನನ್ನೆದೆಯ ಗರ್ಭದ ಒಳಗೆ
ಉಸಿರಾಡಿತು ಆಸೆಯ ಭ್ರೂಣ
ಪಡೆಯಿತು ಪ್ರಾಣ
ಬೆಳೆಯಿತು ಕಲಿಯಿತು ಮುದ್ದಿನ ಮಾತೊಂದ
ಪ್ರೀತ್ಸೇ ಪ್ರೀತ್ಸೇ ಪ್ರೀತ್ಸೇ
ಪ್ರೀತ್ಸೇ ನನ್ನೇ ಪ್ರೀತ್ಸೇ
ಮಾತಾಡ್ತಾ ಪ್ರೀತ್ಸೇ ಮುದ್ದಾಡ್ತಾ ಪ್ರೀತ್ಸೇ
ಕಣ್ಣೊರೆಸಿ ಪ್ರೀತ್ಸೇ ಮಗು ಅಂತ ಪ್ರೀತ್ಸೇ
ಓ ಕಿರಣ ಓ ಕಿರಣ ನೀ ನನ್ನ ಪ್ರೀತಿ ಕಿರಣ
ಕಿರಣ ಕಿರಣ.......

ನಿನ್ನಂದಕೆ ನಾ ಅಭಿಮಾನಿ
ನನ್ನೆದೆಗೆ ನೀ ಯಜಮಾನಿ
ನೀನಿಲ್ಲದ ಲೋಕ ಶೂನ್ಯ ಬಾಳು ಬರಡು
ಜನ್ಮ ದಂಡ ಸೃಷ್ಟಿಯ ಅದ್ಭುತವೇ
ಪ್ರೀತ್ಸೇ ಪ್ರೀತ್ಸೇ ಪ್ರೀತ್ಸೇ
ಪ್ರೀತ್ಸೇ ನನ್ನೇ ಪ್ರೀತ್ಸೇ
ದಯಮಾಡಿ ಪ್ರೀತ್ಸೇ ಕೃಪೆ ತೋರಿ ಪ್ರೀತ್ಸೇ
ಪ್ರೇಮಿಗಾಗಿ ಪ್ರೀತ್ಸೇ ಪ್ರೀತಿಗಾಗಿ ಪ್ರೀತ್ಸೇ
ಓ ಕಿರಣ ಓ ಕಿರಣ
ನೀ ನನ್ನ ಪ್ರೀತಿ ಕಿರಣ...
ಕಿರಣ ಕಿರಣ.......

nannaaseya hoove - naa ninna mareyalaare

ಚಿತ್ರ: ನಾ ನಿನ್ನ ಮರೆಯಲಾರೆ
ನಟರು: ರಾಜ್ ಕುಮಾರ್, ಲಕ್ಷ್ಮಿ
ಹಾಡಿದವರು: ರಾಜ್ ಕುಮಾರ್

ನನ್ನಾಸೆಯ ಹೂವೆ ಬೆಳದಿಂಗಳ ಚೆಲುವೆ
ಇನ್ನೇತಕೆ ಅಳುವೆ ಏಕಾಂತದಿ ಭಯವೆ
ನಿನ್ನೊಲವಿಗೆ ಸೋತೆನು ಬಂದೆನು ನಾ

ಈ ಮೌನವೇನು ನಿನ್ನಲ್ಲಿ 
ಈ ಕೋಪವೇಕೆ ನನ್ನಲ್ಲಿ 
ನೀ ದೂರ ಹೋದರೆ ಹೀಗೆ 
ನಾ ತಾಳೆ ಈ ವಿರಹದ ಬೇಗೆ 
ಅಹಹ ಅಹಹ ಆಹಾ.....

ಕಾಣದಿರೆ ನೋಡುವ ಆಸೆ
ನೋಡುತಿರೆ ಸೇರುವ ಆಸೆ 
ಸೇರಿದರೆ ಚಿನ್ನ ನಿನ್ನ 
ಕೆಂಪಾದ ಚೆಂದುಟಿಯ ಆಸೆ 

ನನ್ನಾಸೆಯ.....

ಆಹಾ ....ಲಲಲ......

ಬಾನಲ್ಲಿ ನೀಲಿ ಬೆರೆತಂತೆ
ಹೂವಲ್ಲಿ ಜೇನು ಇರುವಂತೆ
ನನ್ನಲ್ಲಿ ನೀನೊಂದಾಗಿ
ಇರುವಾಗ ಏಕೆ ಈ ಚಿಂತೆ

ಕಣ್ಣಲ್ಲಿ ಕಣ್ಣ ನೀ ಬೆರೆಸು  
ಲತೆಯಂತೆ ನನ್ನ ಮೈ ಬಳಸು
ನೂರೆಂಟು ಸುಂದರ ಕನಸು
ಆ ನಿಮಿಷ ಬಾಳಿಗೆ ಸೊಗಸು

ನನ್ನಾಸೆಯ ಹೂವೆ......

naariya seere kadda - daari tappida maga

ಚಿತ್ರ: ದಾರಿ ತಪ್ಪಿದ ಮಗ
ನಟರು: ರಾಜ್ ಕುಮಾರ್, ಮಂಜುಳ, ಆರತಿ, ಕಲ್ಪನಾ
ಹಾಡಿದವರು: ರಾಜ್ ಕುಮಾರ್


ಕೃಷ್ಣ....ಮುರಾರಿ.....ಯಮುನಾ ತೀರ ವಿಹಾರಿ
ಗೋಪಿ ಮಾನಸ ಹಾರಿ....ಶೌರಿ....ಶೌರಿ
ಬೋಲೋ ಶ್ರೀ ಕೃಷ್ಣ ಪರಮಾತ್ಮಕಿ

ನಾರಿಯ ಸೀರೆ ಕದ್ದ ರಾಧೆಯ ಮನವ ಗೆದ್ದ
ಕಳ್ಳರ ಕಳ್ಳ ಕೃಷ್ಣನು ಬಂದ
ಮೋಹದ ಮೋಡಿ ಹಾಕಿದ
ಕೃಷ್ಣ  .........ಮುರಾರಿ......

ಮಗುವಾಗಿರುವಾಗ ಬೆಣ್ಣೆಯ ಕದ್ದ
ಮಣಿಯೊಡನೆ ರಮಣಿ ಭಾಮೆಯ ಗೆದ್ದ
ಮದುವೆ ಮನೆಗೆ ನುಗ್ಗಿ, ಏನ್ ಮಾಡ್ದ ಗೊತ್ತೇ
ರುಕ್ಮಿಣಿಯ ಕದ್ದ
ನರಕಾಸುರನ ಕೊಂದು ಹದಿನಾರು ಸಾವಿರ ನಾರಿಯರ ಗೆದ್ದ
ಅಹಹ...ಹುದಪ್ಪ
ಕದ್ದ ಗೆದ್ದ, ಗೆದ್ದ ಕದ್ದ.....

ನಾರಿಯ.....

ಯಮುನಾ ತೀರದಲಿ ತಣ್ಣನೆ ಗಾಳಿಯಲಿ
ರಾಧೆ ಕಾದಿರಲು ಮೆಲ್ಲನೆ
ಕೊಳಲನೂದುತಲಿ ಮನವ ಕೆಣಕುತಲಿ
ಕಂಡು ಕಾಣಿಸದೆ ಮೋಹನ
ಆಡಿ ಓಡಿದನು
ಬೋಲೋ ಶ್ರೀ ಕೃಷ್ಣ ಪರಮಾತ್ಮಕಿ

ನಾರಿಯ.....

ಕೃಷ್ಣ ಎಲ್ಲಿರುವೆ ಏಕೆ ಕಾಡಿರುವೆ
ವಿರಹದಿ ನೊಂದಿರುವೆ ಕಾಣದೆ
ರಾಧ ಮೋಹನನೆ ಬಾರೋ ಮಾಧವನೆ
ಎಂದು ಕೂಗಿರಲು ಬಂದು 
ತನುವ ಬಳಸಿ ನಿಂದನು 

ನಾರಿಯ ಸೀರೆ.....

ಕೃಷ್ಣ ಎನ್ನಿ ರಾಮ ಎನ್ನಿ
ಮುಕುಂದ ಎನ್ನಿ ಗೋವಿಂದ ಎನ್ನಿ
ರಾಧೆ ಕೃಷ್ಣ ಜೈ ಜೈ ಕೃಷ್ಣ ......

Tuesday, November 17, 2009

keLisade kallu kallinali - beLLi kaalungura

ಚಿತ್ರ: ಬೆಳ್ಳಿ ಕಾಲುಂಗುರ
ಹಾಡಿದವರು: ಎಸ್ ಪಿ ಬಿ
ನಟರು: ಮಾಲಾಶ್ರಿ, ಸುನಿಲ್, ತಾರ

ಓ...

ಕೇಳಿಸದೆ ಕಲ್ಲು ಕಲ್ಲಿನಲ್ಲಿ ಕನ್ನಡ ನುಡಿ ಕನ್ನಡ ನುಡಿ
ಕಾಣಿಸದೆ ಹೊನ್ನ ಚರಿತೆಯಲಿ ಹಂಪೆಯ ಗುಡಿ
ಹಂಪೆಯ ಗುಡಿ
ವೈಭವದ ತವರು ಕೂಗಿದೆ
ಪ್ರೀತಿಸುವ ಹೃದಯ ಬೇಡಿದೆ
ಕೇಳು ನೀನು

ಧೂರಮೆಯ ಆಧಾರ ಈ ಕಲೆಯ ಸಿಂಗಾರ
ಬಂಗಾರ ತೇರೇರಿ ಮೂಡಣವೇ ಸಿಂಧೂರ
ದಿನ ದಿನ ದಿನ ಹೊಸದಾಗಿದೆ
ಇಂದಿಗೂ ಜೀವಂತ ಶಿಲೆಯೊಳಗೆ ಸಂಗೀತ
ಸ್ವರ ಸ್ವರದ ಏರಿಳಿತ ತುಂಗೆಯಲಿ ಶ್ರೀಮಂತ
ಕಣ ಕಣ ಕಣ ಕಣ ಕರೆ ನೀಡಿದೆ
ನೀನೊಮ್ಮೆ ಬಂದಿಲ್ಲಿ ಹಿತವಾಗಿ ಹಾಡು

ಕೇಳಿಸದೆ .....

ಗಾಳಿಯೇ ಆದೇಶ ಮೇಘವೇ ಸಂದೇಶ
ಪ್ರೇಮಕೆ ಸಂಕೇತ ಹೊಂಬಣ್ಣದಾಕಾಶ 
ಋತು ಋತುಗಳು ನಿನ್ನ ಕಾದಿವೆ
ನೀನಿರೆ ರಂಗೋಲಿ ಸಂಗಾತಿ ಸುವ್ವಾಲಿ
ನವರಸವು ಮೈತಾಳಿ ಜೀವನದ ಜೋಕಾಲಿ
ಯುಗಯುಗದಲು ನಿನ್ನ ಕಾಯುವೆ
ನೀನೊಮ್ಮೆ ಬಂದಿಲ್ಲಿ ಬೆಳಕನ್ನು ನೀಡು

ಕೇಳಿಸದೆ.....

beLLi kaalungura - beLLi kaalungura

ಚಿತ್ರ: ಬೆಳ್ಳಿ ಕಾಲುಂಗುರ
ಹಾಡಿದವರು: ಎಸ್ ಜಾನಕಿ, ??
ನಟರು: ಮಾಲಾಶ್ರಿ, ಸುನಿಲ್, ತಾರ

ಬೆಳ್ಳಿ ಕಾಲುಂಗುರ ಶ್ರೀಮತಿಗೆ ಸುಂದರ
ಬೆಳ್ಳಿ ಕಾಲುಂಗುರ ಶ್ರೀಮತಿಗೆ ಸುಂದರ
ಓ.....
ಲಾಲಾ.....

ಈ ಮಿಂಚುಗಳಲ್ಲೇ ಸಾರವಿದೆ
ಸಾರದಲ್ಲೇ ಸಂಸಾರವಿದೆ
ಅಂಗುಲಿಯಲ್ಲೇ ಮಂಗಳದ ಬಂಧನವಾಗಿದೆ ಬಂಧನವಾಗಿದೆ

ಬೆಳ್ಳಿ ಕಾಲುಂಗುರ ಶ್ರೀಮತಿಗೆ ಸುಂದರ

ಬಾಳ ಕಡಲಲಿ ಪ್ರೇಮ ನದಿಗಳ ಸಂಧಿ ಸಮಯದಲಿ
ಮಿಂಚುವ ಮಿನುಗುವ ಸಾಕ್ಷಿ ಈ ಕಾಲುಂಗುರ
ನಾದಗಡಲಲಿ ವೇದ ಘೋಷದ ಸಪ್ತಪದಿಗಳಲಿ
ಬದುಕಿನ ಬಂಡಿಗೆ ಸಾರಥಿ ಕಾಲುಂಗುರ
ಶುಕವ ತರುವ ಸತಿ ಸುಖವ ಕೊಡುವ
ಮನ ಮನೆಯ ನೆಲದಲಿ ಗುನುಗುವ ಒಡವೆಯೋ

ಬೆಳ್ಳಿ ಕಾಲುಂಗುರ ಶ್ರೀಮತಿಗೆ ಸುಂದರ

ಆದಿ ಕಾಲದ ವೇದ ಮೂಲದ ಸತಿಯ ಆಭರಣ
ಚೆಲುವಿಗೆ ಒಲವಿಗೆ ಗೌರವ ಕಾಲುಂಗುರ 
ಐದು ಮುತ್ತುಗಳಾರು ಮುಡಿವಳೋ ಅವಳೆ ಮುತ್ತೈದೆ 
ಸಿಂಧೂರ ಮಾಂಗಲ್ಯ ಮೂಗುತಿ ಓಲೆ ಕಾಲುಂಗುರ 
ಹೃದಯ ತೆರೆದು ಉಸಿರೊಡೆಯ ತರದು 
ಗಂಡು ಹೆಣ್ಣಿಗೆ ನೀಡುವ ಆಣೆಯ ಉಡುಗೊರೆ

ಬೆಳ್ಳಿ ಕಾಲುಂಗುರ.......     

nagu endide manjina bindu - pallavi anupallavi

ಚಿತ್ರ: ಪಲ್ಲವಿ ಅನುಪಲ್ಲವಿ
ಹಾಡಿದವರು: ಎಸ್ ಜಾನಕಿ
ನಟರು: ಲಕ್ಷ್ಮಿ, ಅನಿಲ್ ಕಪೂರ್

ನಗು ಎಂದಿದೆ ಮಂಜಿನ ಬಿಂದು
ನಲಿ ಎಂದಿದೆ ಗಾಳಿ ಇಂದು

ಚಿಲಿ ಪಿಲಿ ಎಂದು ಹಕ್ಕಿಯು ಹೇಳಿದೆ ಈಗ ಬಾ ಬಾ
ಜೊತೆಯಲಿ ಕೂಡಿ ನಮ್ಮಂತೆ ಹಾರು ನೀ ಬೇಗ ಬಾ ಬಾ
ಹಾರಲು ಆಗದೆ ಸೋತಿರಲು
ಬಾಳಿಗೆ ಗೆಳೆಯನು ಬೇಕಿರಲು
ಬಯಸಿದೆ ಅರಸಿದೆ ನಾ
ಕಂಡೆ ಈಗಲೇ ನಾ
ನನ್ನ ಸ್ನೇಹಿತನ....

ಇದೆ ನಗುವ ಮನದ ಸ್ಪಂದ
ಸವಿ ಮಧುರ ಮಮತೆ ಬಂಧ

ಆ....ತನನ....

ಹಾಡುವ ಬಾ ಬಾ ನದಿ ಅಲೆ ಕೊಡುವುದು ಜಾಗ ಈಗ
ಕುಣಿಯುವ ಬಾ ಬಾ ಮಳೆ ಹನಿ ತರುವುದು ತಾಳ ಮೇಳ
ಪ್ರಕೃತಿಯು ಬರೆದ ಕವನವಿದು
ಮಮತೆಯ ಸೊಗಸಿನ ಪಲ್ಲವಿಯು
ಸುಂದರ ಸ್ನೇಹವಿದು
ಇಂತ ಅನುಬಂಧ ಎಂತ ಆನಂದ

ಇದೆ ನಗುವ ಮನದ ಸ್ಪಂದ
ಸವಿ ಮಧುರ ಮಮತೆ ಬಂಧ

Friday, November 13, 2009

sadaa kaNNale - kaviratna kaaLidaasa

ಚಿತ್ರ: ಕವಿರತ್ನ ಕಾಳಿದಾಸ
ಹಾಡಿದವರು: ರಾಜ್ ಕುಮಾರ್, ವಾಣಿ ಜಯರಾಂ
ನಟರು: ರಾಜ್ ಕುಮಾರ್, ಜಯಪ್ರದ

ಆ.......

ಸದಾ ಕಣ್ಣಲೆ ಪ್ರಣಯದ ಕವಿತೆ ಹಾಡುವೆ
ಸದಾ ನನ್ನಲಿ ಒಲವಿನ ಬಯಕೆ ತುಂಬುವೆ

ಕಣ್ಣೆರಡು ಕಮಲಗಳಂತೆ ಮುಂಗುರುಳು ದುಂಬಿಗಳಂತೆ
ನಾಸಿಕವು ಸಂಪಿಗೆಯಂತೆ ನೀ ನಗಲು ಹೂ ಬಿರಿದಂತೆ
ನಡೆಯುತಿರೆ ನಾಟ್ಯದಂತೆ ರತಿಯೇ ಧರೆಗಿಳಿದಂತೆ
ಈ ಅಂದಕೆ ಸೋತೆನು ಸೋತೆ ನಾನು

ಗುಡುಗುಗಳು ತಾಳದಂತೆ ಮಿಂಚುಗಳು ಮೇಳದಂತೆ
ಸುರಿವ ಮಳೆ ನೀರೆಲ್ಲ ಪನ್ನೀರ ಹನಿಹನಿಯಂತೆ
ಜೊತೆಯಾಗಿ ನೀನಿರೆ ಸಾಕು ಭೂಲೋಕ ಸ್ವರ್ಗದಂತೆ
ಈ ಪ್ರೇಮಕೆ ಸೋತೆನು ಸೋತೆ ನಾನು

ಸದಾ ಕಣ್ಣಲೆ.......

roadigiLi raadhika - excuse me

ಚಿತ್ರ: ರೋಡಿಗಿಳಿ ರಾಧಿಕ
ನಟರು: ಅಜಯ್ ರಾವ್, ಸುನಿಲ್ ರಾವ್, ರಮ್ಯ

ರೋಡಿಗಿಳಿ ರಾಧಿಕ ಚಿಂದಿ ಮಾಡೇ ಚಂದ್ರಿಕಾ
ಟಪಾನ್ಗುಚಿ ಆಡು ಬಾರೆ

ಲೌ ಅವ್ನ್ ಬಾಯ್ಗೊಸಿ ನೀರ್ ಬಿಡ್ರಲ
ನಿಗರ್ಕೊಂಬುಟಾನು
ಲೌ ಹಾಡ್ನಾಗೆ ವಸಿ ದಂ ಇರ್ಲಿ ರಿದಂ ಇರ್ಲಿ!!
ಸಿಸ್ಯ ಎರ್ಡೆಟ್ ಹಾಕಲೇ

ಸೌಟು ಗೀಟು ಎಲ್ಲ ಮೂಲೆಗಿಟ್ಟು
ಸೀರೆ ಸೆರಗು ವಸಿ ಮ್ಯಾಲೆತ್ತಿ ಕಟ್ಟು
ಸಿಲ್ಕು ಮುಮ್ತಾಜನ್ನು ಮನಸಲ್ಲಿಟ್ಟು
ಸುವ್ವಾಲಿ ಜೋಲಾಲಿ ಸೈಡಲ್ಲಿ ಬಿಟ್ಟು

ರೋಡಿಗಿಳಿ ರಾಧಿಕ...ಅರೆ....ಚಿಂದಿ ಮಾಡೇ ಚಂದ್ರಿಕಾ
ಟಪಾನ್ಗುಚಿ ಆಡು ಬಾರೆ

ಇದು ಹಾರ್ಟು ಕರಿಯೋ ಗ್ಯಾಂಗು ನೀ ಆಗಬೇಡ ರಾಂಗು
ಡೈಲಿ ಡವ್ ಹೊಡಿ ಅನ್ನುವ ಪೋಕರಿಗಳಿಗೆ ಸ್ಮೈಲನ್ನು ಬಿಸಾಕು
16 ಆಗಿದ್ರು ಸಾಕು ಲವ್ ಸಿಂಬಲ್ಗೆ ವೋಟು ಹಾಕು
ಇದು ಹೋಲಿ ಡೇ ಹಾಲಿಡೆ ಜಾಲಿಡೆ ಲವ್ ಮಾಡೇ ಗೋಳನ್ನು ಬಿಟ್ಟಾಕು

ಲವು ಗಿವು ಅಂತ ಅಂದರೆ ಹೋ ಮೂತಿಗೆಟ್ಟು ಹೋಗೋ ತೊಂದರೆ
ಲೈಕು ಮಾಡುತೀವಿ ಲೈನು ಹಾಕುತೀವಿ ಲೈಫು ನೀಡುತೀವಿ ಬಾರಮ್ಮ
ಲವು ಗಿವು ಅಂತ ಅಂದರೆ ಹೋ ಮೂತಿಗೆಟ್ಟು ಹೋಗೋ ತೊಂದರೆ
ಲೈಕು ಮಾಡುತೀವಿ ಲೈನು ಹಾಕುತೀವಿ ಲೈಫು ನೀಡುತೀವಿ ಬಾ

ಸೌಟು ಗೀಟು ಎಲ್ಲ ಮೂಲೆಗಿಟ್ಟು
ಸೀರೆ ಸೆರಗು ವಸಿ ಮ್ಯಾಲೆತ್ತಿ ಕಟ್ಟು
ಸಿಲ್ಕು ಮುಮ್ತಾಜನ್ನು ಮನಸಲ್ಲಿಟ್ಟು
ಸುವ್ವಾಲಿ ಜೋಲಾಲಿ ಸೈಡಲ್ಲಿ ಬಿಟ್ಟು

ರೋಡಿಗಿಳಿ ರಾಧಿಕ...ಅರೆ....ಚಿಂದಿ ಮಾಡೇ ಚಂದ್ರಿಕಾ

ಟಪಾನ್ಗುಚಿ ಆಡು ಬಾರೆ

ನೀನ್ ಕೋಟಿ ಬಣ್ಣದ ಚಿಟ್ಟೆ ನಿನ್ ಕಣ್ಣಿನ ನೋಟಕ್ಕೆ ಕೆಟ್ಟೆ
ನಮ್ಮ ನಿದ್ದೆ ಕೆಡಿಸಿ ತಣ್ಣೀರ್ ಕುಡಿಸೋ ಬಿಂಕದ ವೈಯಾರಿ
ಇದು ಟಾರು ಇರುವ ರೋಡು ಉಳ್ಕೊಲ್ಲ ಸೊಂಟ ಆಡು
ನಿನ್ನ ಚಮಕ್ಕು ಗಿಮಿಕ್ಕು ಎಲ್ಲಾರು ನೋಡಲಿ ಚಂದಿರ ಚಕೋರಿ!!

ಊರ ಮೇಲೆ ಊರು ಬಿದ್ದರು ನಾನ್ ಕುಣಿಯಲಾರೆ ಕೋಟಿ ಕೊಟ್ಟರು
ಬೀದಿ ಬೀದಿಯಲ್ಲಿ ಬ್ಯಾಂಡು ಹೊಡಿತಿವಿ ಒಂದು ಸ್ಟೆಪ್ಪು ಹಾಕು ಬಾರಮ್ಮ
ಊರ ಮೇಲೆ ಊರು ಬಿದ್ದರು ನಾನ್ ಕುಣಿಯಲಾರೆ ಕೋಟಿ ಕೊಟ್ಟರು
ಬೀದಿ ಬೀದಿಯಲ್ಲಿ ಬ್ಯಾಂಡು ಹೊಡಿತಿವಿ ಒಂದು ಸ್ಟೆಪ್ಪು ಹಾಕು ಬಾ

ಬಾ ಬಾರೆ....ಲೇಯ್ ಅದ್ ನನ್ ಡವ್ವೋ

ಸೌಟು ಗೀಟು ಎಲ್ಲ ಮೂಲೆಗಿಟ್ಟು
ಸೀರೆ ಸೆರಗು ವಸಿ ಮ್ಯಾಲೆತ್ತಿ ಕಟ್ಟು
ಸಿಲ್ಕು ಮುಮ್ತಾಜನ್ನು ಮನಸಲ್ಲಿಟ್ಟು
ಸುವ್ವಾಲಿ ಜೋಲಾಲಿ ಸೈಡಲ್ಲಿ ಬಿಟ್ಟು

ರೋಡಿಗಿಳಿ ರಾಧಿಕ...ಅರೆ....ಚಿಂದಿ ಮಾಡೇ ಚಂದ್ರಿಕಾ
ಟಪಾನ್ಗುಚಿ ಆಡು ಬಾರೆ

raaga anuraaga - sanaadi appanna

ಚಿತ್ರ: ಸನಾದಿ ಅಪ್ಪಣ್ಣ
ಹಾಡಿದವರು: ರಾಜಕುಮಾರ್, ಎಸ್ ಜಾನಕಿ
ನಟರು: ರಾಜಕುಮಾರ್, ಜಯಪ್ರದ

ರಾಗ ಅನುರಾಗ ಶುಭಯೋಗ ಸೇರಿದೆ  
ತಂದ ಅನುಬಂಧ ಆನಂದ ತಂದಿದೆ....ರಾಗ.....

ರಾಗ ತಾಳ ಮಿಲನ ಸಂಗೀತವಾಗಿದೆ
ನಾದ ಲಾಸ್ಯ ಮಿಲನ ಹೊಸ ಭಾವ ಮೂಡಿದೆ
ಹೊಸ ಗೀತೆ ಹಾಡಿದೆ
ಹೂವು ಗಂಧದಂತೆ ನಮ್ಮ ಜೀವ ಜೀವ ಸೇರಿ
ಉಯ್ಯಾಲೆಯಾಡಿದೆ

ಹೃದಯ ವೀಣೆ ಮೀಟಿ ಹೊಸ ತಾನ ನುಡಿಸಿದೆ
ಗಾನ ಗಂಗೆಯಲ್ಲಿ ತೇಲಾಡಿದಂತಿದೆ
ಸುರಲೋಕ ಕಂಡಿದೆ
ಗಂಗ ಶಿವನ ವರಿಸಿ ಶಿಲವೇರಿದಂತೆ
ನನ್ನ ಬಾಳಿಂದು ಆಗಿದೆ  

ಬಾಳನದಿಯು ಇಂದು ಹೊಸ ಹಾದಿ ಹಿಡಿದಿದೆ
ಪ್ರಣಯವೆಂಬ ವನವ ಹಾಯಾಗಿ ಬಳಸಿದೆ
ಆ....ಪ್ರಣಯವೆಂಬ ವನವ ಹಾಯಾಗಿ ಬಳಸಿದೆ  
ಉಲ್ಲಾಸ ತಂದಿದೆ
ಹರುಷವೆಂಬ ಕಡಲ ಅಲೆಅಲೆಯು ತೇಲಿ ಬಂದು
ಈ ನದಿಯ ಸೇರಿದೆ  

ರಾಗ.....

bidalaare endu ninna - premada kaaNike

ಚಿತ್ರ: ಪ್ರೇಮದ ಕಾಣಿಕೆ
ಹಾಡಿದವರು: ರಾಜಕುಮಾರ್, ವಾಣಿ ಜಯರಾಂ
ನಟರು: ರಾಜಕುಮಾರ್, ಆರತಿ

ನಾ ಬಿಡಲಾರೆ ಎಂದು ನಿನ್ನ
ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು
ನಾನೆಂದೂ ಬಾಳೆನು
ಓ... ನಾ ಸೂರ್ಯಕಾಂತಿಯಂತೆ
ನೀ ಸೂರ್ಯ ದೇವನಂತೆ
ನಾ ನಿನ್ನ ಬಾಳ ಜೋಡಿ
ನೀನೆ ನನ್ನ ಜೀವ ನಾಡಿ

ನಾನೇ ರಾಗ ನೀನೆ ಭಾವ ಎಂದೆಂದೂ
ನಾನೇ ದೇಹ ನೀನೆ ಪ್ರಾಣ ಇನ್ನೆಂದು
ನಾನೇ ಕಣ್ಣು ನೀನೆ ನೋಟ ಎಂದೆಂದೂ
ನಾನೇ ಜ್ಯೋತಿ ನೀನೆ ಕಾಂತಿ ಇನ್ನೆಂದು
ಬಾಳೆಂಬ ದೋಣಿಯೇರಿ ಸಂತೋಷ ಎಲ್ಲೆ ಮೀರಿ
ಇಲ್ಲಿಂದ ದೂರ ಸಾಗಿ ಪ್ರೇಮ ಲೋಕ ಸೇರುವ

ಆಹಾ ಮೈ ಮಾಟವು ಈ ಸವಿ ನೋಟವು
ಜೀವ ಕವಲಾಗಿ ಮೈ ತುಂಬೋ ಈ ಅಂದವು
ಬಂತು ಇಂಥ ಅಂದ ಚಂದ ನಿನ್ನ ಪ್ರೇಮದಿಂದ
ನಾಳೆ ನಮ್ಮ ಲಾಲಿ ಹಾಡು ಕೇಳೋ ಕಂದ ಜನ್ಮ 
ಇನ್ನು ನೀ ತಂದ ಸುಖಕ್ಕಿಂತ ಬೇರೆ ಭಾಗ್ಯ ಕಾಣೆ ನಲ್ಲ 

nenapugaLa maatu madhura - chandramukhi praaNasakhi

ಚಿತ್ರ: ಚಂದ್ರಮುಖಿ ಪ್ರಾಣಸಖಿ
ಹಾಡಿದವರು: ಎಸ್ ಪಿ ಬಿ, ಚಿತ್ರ
ನಟರು: ರಮೇಶ್, ಪ್ರೇಮ, ಭಾವನ

ನೆನಪುಗಳ ಮಾತು ಮಧುರ
ಮೌನಗಳ ಹಾಡು ಮಧುರ
ಕನಸೇ ಇರಲಿ ನನಸೆ ಇರಲಿ
ಪ್ರೀತಿ ಕೊಡುವ ಕನಸೇ ಮಧುರ

ಸಾವಿರ ಹೂಗಳ ಹುಡುಕಿದರೂ
ಚಂದ ಬೇರೆ ಗಂಧ ಬೇರೆ ಸ್ಪರ್ಶ ಒಂದೆ 
ಸಾವಿರ ಹೃದಯವ ಹುಡುಕಿದರೂ 
ಅಳತೆ ಬೇರೆ ಸೆಳೆತ ಬೇರೆ ಪ್ರೀತಿಯೊಂದೆ
ತಿಂಗಳ ಬೆಳಕನು ಹಿಡಿದು ಗಾಳಿಗೆ ಸವರೋ ಪ್ರೀತಿ
ಗಾಳಿಯ ಗಂಧವ ಕಡೆದು ಅಂದವ ಹೆಣೆಯೋ ಪ್ರೀತಿ
ಸಂಖ್ಯೆ ಇರದೇ ಗುಣಿಸೋ ಪ್ರೀತಿ
ನಿದ್ದೆ ನುಂಗಿ ಕುಣಿಸೋ ಪ್ರೀತಿ 
ಶಬ್ದವಿರಲಿ ಶಬ್ದವಿರಲಿ ಪ್ರೀತಿ ಕೊಡುವ ಶಬ್ದ ಮಧುರ 

ಸಾವಿರ ಹಾಡನು ಹುಡುಕಿದರೂ
ತಾಳ ಬೇರೆ ಮೇಳ ಬೇರೆ ಸ್ವರಗಳೊಂದೆ   
ಸಾವಿರ ಪ್ರೇಮಿಯ ಹುಡುಕಿದರೂ
ತವಕ ಬೇರೆ ಪುಳಕ ಬೇರೆ ಪ್ರೀತಿಯೊಂದೆ
ನದಿಗಳ ಕಲರವಗಳಲಿ ಅಲೆಗಳು ತೊಯೋ ಪ್ರೀತಿ
ಅಲೆಗಳ ಹೊಸತನ ಕಡೆದು ಕಲೆಗಳ ಹೆಣೆಯೋ ಪ್ರೀತಿ
ಚಿಲುಮೆಯಂತೆ ಚಿಮ್ಮೋ ಪ್ರೀತಿ
ಒಲುಮೆಯೊಳಗೆ ಕಾಯ್ಸೋ ಪ್ರೀತಿ
ಸ್ವಾರ್ಥವಿರಲಿ ಸ್ವಾರ್ಥವಿರಲಿ ಪ್ರೀತಿ ಕೊಡುವ ಸ್ವಾರ್ಥ ಮಧುರ     

Thursday, November 12, 2009

hey dinakara - om

ಚಿತ್ರ: ಓಂ
ಹಾಡಿದವರು: ಡಾ. ರಾಜಕುಮಾರ್
ನಟರು: ಶಿವ್ ರಾಜಕುಮಾರ್, ಪ್ರೇಮ

ಓಂ.....ಓಂ......
ಓಂ..ಬ್ರಹ್ಮಾನಂದ ಓಂಕಾರ ಆತ್ಮಾನಂದ ಸಾಕಾರ
ಓಂ..ವೇದಾಂತರ್ಯ ಝೇಂಕಾರ ಆಧ್ಯಾತ್ಮಾಭಿ ಮಧುಸಾರ

ಹೇ ದಿನಕರ ಶುಭಕರ ಧರೆಗೆ ಬಾ
ಈ ಧರಣಿಯ ದೇಗುಲ ಬೆಳಗು ಬಾ
ನೀಗಿಸು ಬಾಳಿನ ಅಹಂ ಅಹಂ ಅಹಂ ಅಹಂ
ಮಾನಸ ಮಂದಿರ ತುಂಬು ಓಂಕಾರ ನಾದವೊಂ ಓಂ.....

ನಗುವ ಮನಸೆ ಸಾಕು ನಮಗೆ ಹಗಲುಗನಸೆ ಬೇಡ
ಮನೆಯ ತುಂಬ ಪ್ರೀತಿ ಸಾಕು ಬೆಳ್ಳಿ ಚಿನ್ನ ಬೇಡ
ತಂದೆ ತಾಯೆ ದೈವ ಗುರುವೇ ನಮ್ಮ ಜೀವ
ಎಂಬ ದಿವ್ಯ ಮಂತ್ರ ನಮ್ಮ ಹೃದಯ ತುಂಬಿಸು......
ಹೇ ದಿನಕರ......

ಸತ್ಯ ಹೇಳೋ ಕನ್ನಡಿಯಂತೆ ಅಂತರಂಗ ಮಾಡು
ದಯೆ ತೋರೋ ಧರಣಿಯಂತ ಮನೋಧರ್ಮ ನೀಡು
ನೊಂದ ಎಲ್ಲ ಜೀವ ನನ್ನದೆಂಬ ಭಾವ
ಬಾಳಿನಲ್ಲಿ ತುಂಬೋ ವಿದ್ಯೆ ವಿನಯ ಕರುಣಿಸೋ
ಆ.........
ಹೇ ದಿನಕರ......

om....om......
om....brahmaananda omkaara aatmaananda saakaara
om....vedaantarya jhenkaara aadhyaatmaabhi madhusaara

hey dinakara shubhakara dharege baa
ee dharaNiya degula beLagu baa
neegisu baaLina aham aham aham
maanasa mandira tumbu omkara naadavom om......

naguva manase saaku namage hagaluganase beDa
maneya tumba preeti saaku beLLi chinna beDa
tande taayi daiva guruve namma jeeva
emba divya mantra namma hrudaya tumbisu.....
hey dinakara.....

satya heLo kannaDiyante antaranga maaDu
daye toro dharaNiyante manodharma neeDu
nonda ella jeeva nannademba bhaava
baaLinalli tumbo vidye vinaya karuNiso
aa......

hey dinakara.........

aralu hunnime - chandramukhi praaNasakhi

ಚಿತ್ರ: ಚಂದ್ರಮುಖಿ ಪ್ರಾಣಸಖಿ
ಹಾಡಿದವರು: ಎಸ್ ಪಿ ಬಿ
ನಟರು: ರಮೇಶ್, ಪ್ರೇಮ, ಭಾವನ


ಆ...............

ಅರಳು ಹುಣ್ಣಿಮೆ ಹರಳು ಹುಣ್ಣಿಮೆ
ನೀ ಅರುಳು ಮರುಳು ಮಾಡೋ ಹುಣ್ಣಿಮೆ
ಅರಳು ಹುಣ್ಣಿಮೆ ಹರಳು ಹುಣ್ಣಿಮೆ
ನೀ ಕನಸು ಹೀರಿ ಹಾಡೋ ಹುಣ್ಣಿಮೆ
ಯೌವ್ವನ ನಿನ್ನ ನೆರಳಿನಲ್ಲಿದೆ
ಆಕರ್ಷಣೆ ತುದಿ ಬೆರಳಿನಲ್ಲಿದೆ
ನಿನ್ನ ಮುಂದೆ ಸೊನ್ನೆ ಹುಣ್ಣಿಮೆ


ಓ.... ಈ ಕಣ್ಣಿಗೆ ಸರಿದೂಗೋ ಕಣ್ಣುಗಳಿಲ್ಲ
ಈ ಹೊಳಪಿಗೆ ಸರಿದೂಗೋ ಬೆಳಕುಗಳಿಲ್ಲ
ನಿನ್ನ ಕಾಂತಿ ಪ್ರಕೃತಿಗೆ ಮೈಕಾಂತಿ
ಈ ನಗುವ ಕಲೆ ಹಾಕೋ ಕೈಗಳು ಇಲ್ಲ
ವೈಯಾರಕೆ ತಲೆ ಹಾಕೋ ನಾಲಿಗೆಯಿಲ್ಲ
ನಿನ್ನ ಸೊಗಸೇ ಈ ವೊಗಸಿಗೆ ಮನಶಾಂತಿ 
ನಿನ್ನ ಭಂಗಿಯ ಆ..... ಪ್ರಫುಲ್ಲ ಲಲ್ಲೆಯ ಓ.... 
ತಾಕೋದೆ ಸಾಹಿತ್ಯ ತೂಗೋದೆ ಸಂಗೀತ


ಓ...ಈ ಒನಪನು ಮರೆಮಾಚೋ ರೇಶಿಮೆಯಿಲ್ಲ
ಈ ತಂಪನು ತುಸು ಮಾಸುವ ಮಾಸಗಳಿಲ್ಲ 
ನಿನ ಸ್ಪರ್ಶ ಹೂಗಳಲಿ ಮೃದುವಾಸ 
ಈ ನಡಿಗೆಯ ಕದಲಿಸೋ ನರ್ತನವಿಲ್ಲ
ಈ ಸ್ಫೂರ್ತಿಯ ಬದಲಿಸೋ ಶಕ್ತಿಗಳಿಲ್ಲ 
ನಿನ್ನ ಇರುವಿಕೆ ಹೆಣ್ಗಳಿಗೆ ಉಪವಾಸ 
ಸುಮ್ಮನೇತಕೆ...ಆ...ಸುಳ್ಳು ಹೋಲಿಕೆ....ಓ... 
ನೀನಿರುವ ಸುಳ್ಳಲ್ಲು  ನಾನಿರುವೆ ನಿಜವಾಗಲೂ   

mussanje rangalli - psycho

ಚಿತ್ರ: ಸೈಕೋ
ಹಾಡಿದವರು: ಸೈಂಧವಿ

ಮುಸ್ಸಂಜೆ ರಂಗಲ್ಲಿ ನಿನ್ನ ಪ್ರೀತಿ ರಂಗಲ್ಲಿ ತೇಲಿ ಹೋದೆ
ನೀ ಯಾರೋ ಯಾವೂರೋ ಕಾಣೆ ಹೇಗೋ ನನ್ನಲ್ಲಿ ಸೇರಿ ಹೋದೆ
ಹೃದಯವೇ ನೀ ಬಾ ಬೇಗ, ನಮದಾಗಲಿ ಪ್ರೇಮ ಸಂಯೋಗ

ಬಾನಲ್ಲಿ ಸಂತೋಷದಿ ಹಾರಿದ್ದ ಬೆಳ್ಳಕ್ಕಿ ನಾ
ಇರಲಿಲ್ಲ ನನಗ್ಯಾವ ಬೇನೆ
ನೀ ಪ್ರೀತಿ ಮಾತಾಡುತ ಬಲೆ ಬೀಸೆ ನಾ ಸಿಕ್ಕಿದೆ
ಹೊಸ ಪ್ರೇಮ ಸವಿಜಾಲದಲ್ಲಿ
ರವಿ ನಿಂತು ಮುಗಿಲ ಮರೆಯಲ್ಲಿ ನಗುವಂತೆ ನೋಡಿ ಧರೆಯನ್ನು
ನಿನ್ನಾಟ ತಂದ ತಾಪ ನನ್ನ ಮನಸ ತಾಕದೇನೋ 
ಬರಿ ಕಣ್ಣು ಕಾಣದ ತಂಗಾಳಿ, ತಂದಂತೆ ಕಂಪಿನ ರಂಗೋಲಿ
ನೀನಿಂತೆಯೋ ಈ ಹೆಣ್ಣಲ್ಲಿ, ನಿಜ ಬಂಧಿಯು ನೀನು ನನ್ನಲ್ಲಿ 

ನರನಾಡಿಯ ವೀಣೆಯು ಮಿಡಿದಂತ ಸ್ವರ ಹೇಳಿದೆ
ಇವನೇನೆ ಆ ನಿನ್ನ ಪ್ರೇಮಿ
ಆ ಪ್ರೀತಿ ಮಳೆ ಬೀಳಲು ನೂರಾಸೆ ಹೂವಾಗಿದೆ
ನವ ಚೈತ್ರ ಕಂಡಂತ ಭೂಮಿ
ಅಲೆ ನೂರು ಆಸೆ ಕಡಲಲ್ಲಿ, ಹುಚ್ಚೆದ್ದು ಕುಣಿಯುತಿದೆ ಇಲ್ಲಿ
ಇದ ತಂದ ಚಂದ್ರ ಎಲ್ಲಿ, ಹೋದೆ ಯಾವ ದಿಕ್ಕಿನಲ್ಲಿ
ಸಾಕಿನ್ನು ಮಾತಿನ ಸಂದೇಶ, ಎದುರಲ್ಲಿ ಬಾ ಪ್ರಿಯ ಸಂತೋಷ
ನೀ ನಾಯಕ ಈ ಕಾವ್ಯಕ್ಕೆ, ಆ ಬ್ರಹ್ಮನು ತಂದ ಬಂಧಕ್ಕೆ

  

eke heegaaitho - anjada gandu

ಚಿತ್ರ: ಅಂಜದ ಗಂಡು
ಹಾಡಿದವರು: ಎಸ್ ಪಿ ಬಿ, ಛಾಯ
ನಟರು: ರವಿಚಂದ್ರನ್, ಖುಷ್ಬೂ

ಏಕೆ ಹೀಗಾಯ್ತೋ ನಾನು ಕಾಣೆನೋ
ಪ್ರೀತಿ ಮನದಲ್ಲಿ ಹೇಗೆ ಮೂಡಿತೋ
ನೀಲಿ ಬಾನಲಿ ತೇಲಿ ಹೋದೆನು ನಾನು ಈ ದಿನ
ಜೇನು ಹೀರಿದ ದುಂಬಿಯ ಹಾಗಿದೆ ನನ್ನ ಈ ಮನ

ಏಕೆ ಹೀಗಾಯ್ತೋ ನಾನು ಕಾಣೆನೋ
ಪ್ರೀತಿ ಮನದಲ್ಲಿ ಹೇಗೆ ಮೂಡಿತೋ
ಆ ನೋಟದಲಿ ಅದು ಏನಿದೆಯೋ
ತುಟಿ ಅಂಚಿನಲಿ ಸವಿ ಜೇನಿದೆಯೋ
ನೀಲಿ ಬಾನಲಿ ತೇಲಿ ಹೋದೆನು ನಾನು ಈ ದಿನ
ಜೇನು ಹೀರಿದ ದುಂಬಿಯ ಹಾಗಿದೆ ನನ್ನ ಈ ಮನ

ನೀ ನಗುವಾಗ ಜರತಾರಿ ಹೊಸ ಸೀರೆಯುಟ್ಟು ಬಳುಕಾಡಿ ಬಂದೆ
ನೀ ನುಡಿದಾಗ ಮೊಳದುದ್ದ ಜಡೆ ತುಂಬ ಮಲ್ಲೆ ಮುಡಿದೆನ್ನ ಸೆಳೆದೆ
ಉಸಿರಾಟ ಮರೆತು ಹೋಯಿತು ಬೇರೇನು ಕಾಣದಾಯಿತು
ನಿನ್ನಲ್ಲಿ ನನ್ನ ಈ ಜೀವ ಸೇರಿತು

ಏಕೆ ಹೀಗಾಯ್ತೋ......

ಈ ಹೊಸದಾದ ಆನಂದ ತಂದಂತ ಮತ್ತಿನ ಮುತ್ತನ್ನ ತಂದೆ
ಆ ನೆನಪಲ್ಲೇ ಹೊಸದಾದ ಅನುರಾಗ ನನ್ನ ಎದೆಯಲ್ಲಿ ತಂದೆ
ಈ ನಾಡಿ ನಿಂತು ಹೋಯಿತು ನಾ ಯಾರೋ ಮರೆತು ಹೋಯಿತು
ನಿನ್ನಲ್ಲಿ ನನ್ನ ಈ ಜೀವ ಸೇರಿತು

ಏಕೆ ಹೀಗಾಯ್ತೋ......

preetiyalli iro sukha - anjada gandu

ಚಿತ್ರ: ಅಂಜದ ಗಂಡು
ಹಾಡಿದವರು: ಎಸ್ ಪಿ ಬಿ, ಮಂಜುಳ ಗುರುರಾಜ್
ನಟರು: ರವಿಚಂದ್ರನ್, ಖುಷ್ಬೂ

ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ
ಹೂ ಅಂತಿಯ ಉಹು ಅಂತಿಯ
ಬಾ ಅಂತಿಯ ತಾ ಅಂತಿಯ
ಹೇಳುವೆ ಬಳಿ ಬಂದರೆ ತುಟಿಗಳ ಸಿಹಿ ಅಂಚಲಿ

ಹೊಸದು ತೀರ ಹೊಸದು ಒಲವ ಮಿಡಿತ ಹೊಸದು
ಸುಖದ ಅರ್ಥ ತಿಳಿದೆ ಬಾರೆನ್ನ ರಾಜ ಅದರ ಸೊಗಸು ಸವಿದೆ
ಮನಸು ಆಡಿದೆ ಹಾಡಿದೆ ನಿನ್ನನ್ನು ಕೇಳಿದೆ ಎಂದು ಕಲ್ಯಾಣ
ಕನಸು ಕಣ್ಣಲಿ ತುಂಬಿದೆ ಮೆಲ್ಲಗೆ ಹೇಳಿದೆ ಇಂದೇ ಆಗೋಣ
ಓ ಮೈ ಲವ್ .....ಓ ಮೈ ಲವ್.......

ಮೌನದಲ್ಲಿ ಕರೆದೆ ಕರೆದು ಹೆಸರ ಬರೆದೆ
ನೀನು ಬರೆದ ಕವನ ನನ್ನಾಣೆ ಚಿನ್ನ ಓದಿ ಓದಿ ನಲಿದೆ
ಪ್ರೇಮದ ಅ ಆ ಇ ಈ ಬರೆಯಿಸಿ ಪಾಠವ ಕಲಿಸಿದೆ ನೀನೆ ಕಣ್ಣಲ್ಲಿ
ನಿನಗೆ ಪಾಠವ ಹೇಳುವ ಸಾಹಸ ಧೈರ್ಯವ ತಂದೆ ನನ್ನಲ್ಲಿ
ಐ ಲವ್ ಯು.....ಐ ಲವ್ ಯು.......

mooru kaasina kudure - anjada gandu

ಚಿತ್ರ: ಅಂಜದ ಗಂಡು
ಹಾಡಿದವರು: ರಮೇಶ್
ನಟರು: ರವಿಚಂದ್ರನ್, ಖುಷ್ಬೂ

ರಂಭಾ ಬೇಡ ಜಂಬ
ಜಂಬ ಗಿಂಬ ಬೇಡ ರಂಭಾ

ಮೂರು ಕಾಸಿನ ಕುದುರೆ
ಏರಿ ಬಂದಳೋ ಚದುರೆ
ಜಂಬ ಮಾಡಬೇಡಮ್ಮ
ಭೂಮಿ ಮೇಲೆ ನಡೆಯಮ್ಮ
ಆ ಸೂರ್ಯ ಹುಟ್ಟೋದು ಕೋಳಿ ಕೂಗಿನಿಂದಲ್ಲ
ಲೋಕ ದೀಪ ಹಚ್ಚೋದು ಅಜ್ಜಿ ಬೆಂಕಿಯಿಂದಲ್ಲ
ಇದು ಯಾಕೋ ರಂಭೆಗೆ ಇನ್ನು ಗೊತ್ತೇ ಆಗಿಲ್ಲ

ಕಿಲಾಡಿ ಹೆಣ್ಣು ಓ ಚಕೋತಿ ಹಣ್ಣು
ಅಯ್ಯಯ್ಯೋ ಯಾಕೋ ತಿನ್ನೋಕೆ ಮಾತ್ರ ಹುಳಿಯಮ್ಮೋ
ಭಲಾರೆ ಹೆಣ್ಣು ಚಕೋರಿ ಕಣ್ಣು
ಅಯ್ಯಯ್ಯೋ ಬೇಡ ಈ ನಿನ್ನ ನೋಟ ವಿಷವಮ್ಮೋ

ಆರಂಭ ಹೆಣ್ಣಿಂದಲೇ  ಆನಂದ ಹೆಣ್ಣಿಂದಲೇ ಅಪಾಯ ಹೆಣ್ಣಿಂದಲೇ ಕೇಳೆ
ವೀರಾಧಿವೀರರೆಲ್ಲ ಮಣ್ಣಾಗಿ ಹೋದದ್ದೆಲ್ಲ ನಿನ್ನಂತ ಹೆಣ್ಣಿಂದಲೇ ಕೇಳೆ
ಜಡೆ ಹಾಕು ಸುಂದರವಾಗಿ ಓ ಕನಕಾಂಗಿ 
ಬದಲಾಗು ನೀನು ಹಳ್ಳಿಯ ಮುದ್ದಿನ ಹೆಣ್ಣಾಗಿ 

ಮೂರು ಕಾಸಿನ ಕುದುರೆ.....

ಮಣ್ಣಲ್ಲಿ ಚಿನ್ನ ಅಕ್ಕಿಲಿ ಅನ್ನ 
ತಂದಿದ್ದು ನಾವು ತಿಂದಿದ್ದು ನೀವು ತಿಳಿಯಮ್ಮೋ 
ಈ ನಮ್ಮ ಬೆವರು ಶ್ರೀಮಂತರುಸಿರು 
ಅಳೆಯೋಕೆ ನಾವು ಆಳೋಕೆ ನೀವ ಬೇಡಮ್ಮೋ 

ಆಳೋನು ಆಳಾಗುವ ಅಳೆಯೋನು ಅರಸಾಗುವ
ಬಡವರ ಕಾಲವು ಬಂತು ಕೇಳೆ 
ದುಡಿಯೋನು ಮುನಿದೆದ್ದರೆ ಉಳುವವನು ಸಿಡಿದೆದ್ದರೆ
ಉಳಿಗಾಲ ಇಲ್ಲವೇ ನಿಮಗೆ ನಾಳೆ
ದಯ ತೋರು ಮಾನವಳಾಗಿ ಬಡವರಿಗಾಗಿ
ಬದಲಾಗು ನೀನು ಕನ್ನಡ ಮಣ್ಣಿನ ಹೆಣ್ಣಾಗಿ

ಮೂರು ಕಾಸಿನ ಕುದುರೆ......

Monday, November 9, 2009

yaare neenu sundara cheluve - raNadheera

ಚಿತ್ರ: ರಣಧೀರ
ಹಾಡಿದವರು: ಎಸ್ ಜಾನಕಿ
ನಟರು: ರವಿಚಂದ್ರನ್, ಖುಷ್ಬೂ

ಯಾರೇ ನೀನು ಸುಂದರ ಚೆಲುವೆ ಒಬ್ಬಳೆ ನಿಂತಿರುವೆ
ಹಸಿರು ಸೀರೆ ಮಲ್ಲಿಗೆ ಮುಡಿದು ಯಾರಿಗೆ ಕಾದಿರುವೆ
ಬಾ ಭೂಮಿಯೇ ನಿನ್ನೊಡಲಲ್ಲಿ ನಾನಾಡುವೆನು
ಬಾ ಪ್ರೇಮಿಯೇ ನಿನ್ನೆದೆಯಲ್ಲಿ ಓಲಾಡುವೆನು
ಈ ಅಂದ ಚೆಂದವೆಲ್ಲ ಯಾರಿಗಾಗಿ ಹೇಳೆಯ

ಸೂರ್ಯನ ಚಿನ್ನದ ಕಿರಣ ನಿನ್ನ ಮೈಯ ಬಣ್ಣ
ಮಿಂಚಿದೆ ಮಿಂಚುತ ಮಿನುಗಿದೆ
ಸುಂದರ ಸರೋವರಗಳು ನಿನ್ನ ಎರಡು ಕಣ್ಣು
ಕಣ್ಣಲಿ ವಿರಹವೇ ತುಂಬಿದೆ
ಮಳೆಗಾಲ ಬಂದಾಗ ಮೈಮರೆವ ಓ ಸಿಂಗಾರಿ
ಛಳಿಗಾಲ ಬಂದಾಗ ಮುಸುಕೆಳೆವ ಓ ಚಿನ್ನಾರಿ
ಹೀಗೇಕೆ ಕಾದಿರುವೆ ಮನಸಿನ ಚಿಂತೆ ಹೇಳೆಯ

ವಾರೆವಾ ಈ  ಕಾಫಿ ತುಂಬ ಬೊಂಬಾಟಾಗಿದೆ
ಕಾಫಿ ಮಾಡೋ ಹುಡುಗಿ ಕೂಡ ಬೊಂಬಾಟಾಗಿದೆ
ಓ ಮನ್ಮಥ ಪುತ್ರರೆ ನನ್ನ ಹಾಡು ಕೇಳಿದಿರಾ
ಹೌದಮ್ಮ ರತಿ ಪುತ್ರಿ ನಿನ್ನ ಹಾಡು ಕೇಳಿದಿವಿ
ಮನಸಾರೆ ಮೆಚ್ಚಿದಿವಿ ಎಂಜಾಯ್ ಮಾಡಿದಿವಿ
ಎಲ್ಲಾನೂ ನೋಡಿದಿವಿ

ಇಲ್ಲಮ್ಮ ತಾಯಿ, ಮುಚ್ಚೋ ಬಾಯಿ
ಬೊಗಳೆ ದಾಸಯ್ಯ
ನಾನಿನ್ನ ತಾಯಿ ಅಲ್ಲ ಪುಟ್ಟ ತಂಗಿ ಅಣ್ಣಯ್ಯ

ಲ ಲ ಲ..........

ಈ ಪ್ರೀತಿ ಬರುವ ಮುಂಚೆ ಯಾರಿಗೂ ಹೇಳೋಲ್ಲ
ಈ ಪ್ರೀತಿಯ ಆರಂಭಕೆ ಕಾರಣ ಬೇಕಿಲ್ಲ

ಎ ಸಂಜು.....

ಏನೇ ಹೇಳು ಸಂಜು ಅವಳ ಹಾಡು ಕೇಳಿ
ಮನಸಿಗೆ ತಿಳಿಯದ ಮುಜುಗರ
ಕಾಡಲ್ಲಿದ್ದರು ಕೂಡ ಹಾಡಿ ನಲಿಯುತಾಳೆ 
ಅವಳದು ಎಂತದು ಸಡಗರ
ಇಂಪಾಗಿ  ಹಾಡ್ತಿಯಂತ ಹೇಳೋಕೆ ನಾ ಹೋದೆ
ಯಾಕೇಂತ ಗೊತ್ತಿಲ್ಲ ಮಾತಿಲ್ಲದಂತೆ ನಾನಾದೆ 
ಹೀಗೇಕೆ ನಾನಾದೆ ನಿನ್ನಾಣೆ ನನಗೇನೋ ಇದು ಹೊಸದು 

ಲ ಲ ಲ......

ಈ ಪ್ರೀತಿಯು ಬರುವ ಮುಂಚೆ ಯಾರಿಗೂ ಹೇಳಲ್ಲ
ಈ ಪ್ರೀತಿಯ ಆರಂಭಕೆ ಕಾರಣ ಬೇಕಿಲ್ಲ......

lokave heLida maatidu - raNadheera

ಚಿತ್ರ: ರಣಧೀರ
ಹಾಡಿದವರು: ಎಸ್ ಪಿ ಬಿ, ಎಸ್ ಜಾನಕಿ
ನಟರು: ರವಿಚಂದ್ರನ್, ಖುಷ್ಬೂ


ಲೋಕವೇ ಹೇಳಿದ ಮಾತಿದು
ವೇದದ ಸಾರವೇ ಕೇಳಿದು
ನಾಳಿನ ಚಿಂತೆಯಲ್ಲಿ ಬಾಳಬಾರದು
ಬಾಳಿನ ಮೂಲವೆಲ್ಲಿ ಕೇಳಬಾರದು
ಪ್ರೀತಿ ಮಾಡಬಾರದು... ಮಾಡಿದರೆ
ಜಗಕೆ ಹೆದರಬಾರದು


ಅನಾರ್ಕಲಿ.....ಅನಾರ್ಕಲಿ


ಮರಳುಗಾಡೆ ಇರಲಿ ಭೂಮಿಗೆ ಸೂರ್ಯನಿಳಿದು ಬರಲಿ
ಪ್ರೀತಿಸೋ ಜೀವಗಳು ಬಾಡಲಾರದಂಥ  ಹೂವುಗಳು
ರಾಜಕೀಯವಿರಲಿ ಶಕುನಿಗಳ ನೂರು ತಂತ್ರವಿರಲಿ
ಪ್ರೇಮದ ರಾಜ್ಯದಲ್ಲಿ ಸಾವಿಗೆಂದು ಭಯ ಕಾಣದಿಲ್ಲಿ
ಲೋಕವ ಕಾಡುವ ಕೋಟಿ ರಾಕ್ಷಸರಿದ್ದರು ಭೂಮಿ ಕೇಳಲಿಲ್ಲ
ಬಾಯ್ ತೆರೆಯಲಿಲ್ಲ ಮಾತಾಡಲಿಲ್ಲ
ಪ್ರೇಮಿಗಳಿಬ್ಬರು ಇಲ್ಲಿ ಪ್ರೀತಿಸಿ ಬಾಳೋದು ನೀವು ಸಹಿಸಲಿಲ್ಲ
ಬಾಯ್ ಬಿಟ್ಟಿರಲ್ಲ ಹೂಳಿಟ್ಟಿರಲ್ಲ      


ಪ್ರೀತಿ ಮಾಡಬಾರದು ಮಾಡಿದರೆ ಗೋರಿ ಕಟ್ಟಬಾರದು


ಓ ರೋಮಿಯೋ......ಓ ರೋಮಿಯೋ


ದ್ವೇಷವೆಂಬ ವಿಷವ ಸೇವಿಸುತ ಖಡ್ಗ ಮಸೆಯುತಿರುವ
ಅಂಧರ ಕಣ್ಣಿಗೆ ಈ ಪ್ರೀತಿಯ ಸ್ವರೂಪ ಕಾಣಿಸದು
ಮನಸು ಕಣ್ಣು ತೆರೆದು ನೋಡಿದರೆ ಎಲ್ಲ ಶೂನ್ಯವಿಹುದು
ಪ್ರೀತಿಯ ನಂಬಿದರೆ ಅಂಧಕಾರದಲ್ಲೂ ಕಾಣುವುದು
ರಾಜ್ಯಗಳಳಿದು ಕೋಟೆ ಕೊಟ್ಟಲು ಉರುಳಿದವು ಹೆಣ್ಣಿಗಾಗಿ
ಈ ಮಣ್ಣಿಗಾಗಿ ಈ ಹೊನ್ನಿಗಾಗಿ
ಜೀವದ ಆಸೆಯ ಬಿಟ್ಟು ವಿಷವ ಕುಡಿದರಿಲ್ಲಿ ಪ್ರೀತಿಗಾಗಿ
ಆನಂದವಾಗಿ ಆಶ್ಚರ್ಯವಾಗಿ


ಪ್ರೀತಿ  ಮಾಡಬಾರದು ಮಾಡಿದರೆ ವಿಷವ ಕುಡಿಯಬಾರದು.....


ಲೋಕವೇ ಹೇಳಿದ ಮಾತಿದು......

Friday, October 30, 2009

vedaanthi helidanu - maanasa sarovara

ಚಿತ್ರ: ಮಾನಸ ಸರೋವರ
ಹಾಡಿದವರು: ಪಿ ಬಿ ಶ್ರೀನಿವಾಸ್
ನಟರು: ಶ್ರೀನಾಥ್, ಪದ್ಮ ವಾಸಂತಿ, ರಾಮಕೃಷ್ಣ

ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣು ಮಣ್ಣು
ಕವಿಯೊಬ್ಬ ಹಾಡಿದನು ಮಣ್ಣೆಲ್ಲ ಹೊನ್ನು ಹೊನ್ನು

ವೇದಾಂತಿ ಹೇಳಿದನು ಈ ಹೆಣ್ಣು ಮಾಯೆ ಮಾಯೆ
ಕವಿಯೊಬ್ಬ ಕನವರಿಸಿದನು, ಹೂ ಇವಳೆ ಚೆಲುವೆ ಚೆಲುವೆ
ಇವಳ ಜೊತೆಯಲ್ಲಿ ನಾ ಸ್ವರ್ಗವನೇ ಗೆಲ್ಲುವೆ
ನಾ ಸ್ವರ್ಗವನೇ ಗೆಲ್ಲುವೆ

ವೇದಾಂತಿ ಹೇಳಿದನು......

ವೇದಾಂತಿ ಹೇಳಿದನು, ಈ ಬದುಕು ಶೂನ್ಯ ಶೂನ್ಯ
ಕವಿ ನಿಂತು ಸಾರಿದನು, ಓ ಇದು ಅಲ್ಲ ಶೂನ್ಯ
ಜನ್ಮ ಜನ್ಮದಿ ಸವಿದೆ ನಾನೆಷ್ಟು ಧನ್ಯ ಧನ್ಯ
ನಾನೆಷ್ಟು ಧನ್ಯ ಧನ್ಯ

ವೇದಾಂತಿ ಹೇಳಿದನು.....

Thursday, October 29, 2009

madhya raatrili - shanthi kranthi

ಚಿತ್ರ: ಶಾಂತಿ ಕ್ರಾಂತಿ
ಹಾಡಿದವರು: ಜಾನಕಿ, ಎಸ್ ಪಿ ಬಾಲು
ನಟರು: ರವಿಚಂದ್ರನ್, ಜೂಹಿ ಚಾವ್ಲಾ

ಮಧ್ಯ ರಾತ್ರಿಲಿ ಹೈವೆ ರಸ್ತೇಲಿ ಮಳೆಯು ನಿಂತಿದೆ ಒಂಟಿ ಹೆಣ್ಣು ಬರ್ತಿದೆ
ಕಾಲು ದಾರೀಲಿ ನಿಂತ ನೀರಲ್ಲಿ ನಡೆಯುತಿದ್ದರೆ ನೋಡೋ ಆಸೆ ಬರ್ತಿದೆ
ನಿನ್ನ ನಗುವಿನ ಭಿಕ್ಷೆಯ ಹಾಕಮ್ಮ ನೀನು ನಕ್ಕರೆ ಮೃಷ್ಟಾನ್ನ ಬೇಡಮ್ಮ
ಅಂಡ ಕಾ ಕಸಂ ಹೋ ಅಬ್ಬು ಕಾ ಹುಕುಂ
ಈ ಕಳ್ಳರ ನೋಡಮ್ಮ ಬಾಯ್ ತೆರೆಯೆ ಸೇಸಮ್ಮ
ರಾತ್ರಿಯಲ್ಲಿ ಜಾರಿ ಬಿದ್ದ ಚಂದಿರನ ತುಂಡೆ ಚಂದಿರನ ತುಂಡೆ

ಕವಿರಾಯ ಓ ಕಪಿರಾಯ.... 
ಕವಿರಾಯ  ಓ ಕಪಿರಾಯ ಬಿಡಬೇಡ ಈ ನಿನ್ನ ಬಾಯ
ದೂರದೂರಿನಿಂದ ಬಂದೆ ದಾರಿ ತೋರಿಸು
ದೂರದಾಸೆ ಬಿಟ್ಟು ನನ್ನ ಗೂಡು ಸೇರಿಸು
ನಾ ಯಾರ ಮಗಳು ಗೊತ್ತಿದೆಯ
ನಮ್ಮೂರ ಬಳಗ ಕೇಳಿದೆಯ
ಕಾವೇರಿ ನದಿಯ ಕಂಗಳು ನಾ
ಸಹ್ಯಾದ್ರಿ ಸಿರಿಯಾ ಬಂಧುವು ನಾ
ಗಾಂಧಿಯಿದ್ದ ದೇಶ ನನ್ನದು
ಬುದ್ಧನಿದ್ದ ಭೂಮಿ ನನ್ನದು

ಬುದ್ಧ ಬಂದನೋ ಬುದ್ಧಿ ತಂದನೋ
ಆಸೆಯಿಂದಲೇ ದುಃಖ ಎಂದು ಹೋದನೋ
ನನ್ನ ದುಖವ ಕೇಳದೆ ಎಲ್ಲಿ ಹೋದನು?
ಗಾಂಧಿ ಬಂದನು ಶಾಂತಿ ತಂದನು
ಹಿಂಸೆಯಿಂದಲೇ ನಾಶ ಎಂದು ಹೋದನು
ನನ್ನ ಕಾಯದೆ ಬಾಪು ಎಲ್ಲಿ ಹೋದನು?

ನಿನ್ನ ನೋಡದೆ ನಮ್ಮಾಸೆ ತೀರದೆ
ನೀನು ಮುಟ್ಟದೆ ಈ ಹಿಂಸೆ ಹೋಗದೆ
ಸೊಗಸು ಬಂದಾಗ ನಾವ್ ನೋಡೋದೇ ತಪ್ಪ
ವಯಸು ಇದ್ದಾಗ ಲವ್ ಮಾಡೋದೇ ತಪ್ಪ
ನೀನು ಈಗ ನಾವು ತಿನ್ನೋ ಬಿಸಿಯಾದ ತುಪ್ಪ

ಜವರಾಯ ಬಾರಯ್ಯ ಈಗ
ಜವರಾಯ ಬಾರಯ್ಯ ಈಗ ಯಮ ಪಾಶ ತಾರಯ್ಯ ಬೇಗ
ಬೀದಿಯಲ್ಲಿ ಜೀವ ಹಿಂದೋ ಪುಂಡರಾಸೆಗೆ
ಪಾಶ ಹಾಕಿ ದಾರಿ ತೋರು ನಿನ್ನ ಊರಿಗೆ

ಕಾಮಣ್ಣ ಮಕ್ಕಳ ಸ್ನೇಹಿತರು ಹೂಬಾಣ ಬಿಡುವ ಕೀಚಕರು
ನಾ ಯಾರ ಮಗಳು ಗೊತ್ತಿದೆಯ ನಮ್ಮೂರ ಬಳಗ ಕೇಳಿಹೆಯ
ನಮ್ಮ ಆಸೆ ನಿನ್ನ ಮೇಲಿದೆ
ನನ್ನ ಆಸೆ ಬೇರೆಯಾಗಿದೆ   

ಮಧ್ಯರಾತ್ರಿಲಿ ಹೈವೆ ರಸ್ತೇಲಿ ಒಂಟಿ ಹುಡುಗಿ ನಿಂಗೇನು ಕೆಲಸ
ಮಧ್ಯರಾತ್ರೀಲಿ ನಿಮ್ಮ ಊರಲ್ಲಿ ಮಾನ ರಕ್ಷೆಗೆ ನಿಂತೆನು ಅರಸ
ಇಲ್ಲಿ ಬರಲು ಕಾರಣ ಇದೆಯಾ
ಕೇಸು ಕೇಳುವ ಸೌಜನ್ಯ ಇದೆಯಾ
ಶಿಸ್ತಿನಲ್ಲಿರು ಇದು ನನ್ನ ಏರಿಯ
ನಿನ್ನ ಏರಿಯ ಪೋಲಿ ಮಲೇರಿಯ
ಸ್ತ್ರೀಕುಲಕ್ಕೆ ರಕ್ಷಣೆಯಿಲ್ಲದ ನಿನ್ನ ಏರಿಯ
ಈ ಡಬ್ಬಲ್ ತಾರೆಯ ತೆಗೆದಿಡು ಮಾರಾಯ

ನಡು ರಾತ್ರಿ ಸ್ವಾತಂತ್ರ ಕೊಟ್ಟರೆ ನೀವು ತಂದು ಬೀದೀಲಿ ಇಟ್ಟರೆ
ನಮ್ಮ ಊರು ಎಂದು ರಾಮರಾಜ್ಯವಾಗದು
ನಮ್ಮ ಸುತ್ತಿಗಿರೋ ಶಾಪ ಬಿಟ್ಟು ಹೋಗದು
ವೇದಾಂತ ನುಡಿವ ನಾಡಿನಲಿ ಹೀಗೇಕೆ ನೀವು ಬಾಳುವಿರಿ
ಹೆಣ್ಣನ್ನು ಪೂಜಿಸೋ ಭೂಮಿಯಲಿ ಈ ನೀತಿ ಸರಿಯೇ ಯೋಚಿಸಿರಿ
ಗಾಂಧಿಯಿದ್ದ ದೇಶ ನನ್ನದು ಬುದ್ಧನಿದ್ದ ಭೂಮಿ ನನ್ನದು

ಹಾರೋಯ್ತು ಆ ಪಾರಿವಾಳ ಹಳಸೋಯ್ತು ಈ ರಸಗವಳ
ಕಾಗೆ ಗೂಬೆ ಹಾಗ್ ಕೂಗಿ ಬಾಯ್ ಒಣಗಿತೋ
ನಮ್ಮ ಮುದ್ದು ಗಿಳಿಯ ಹದ್ದು ಹೊತ್ತು ಹೋಯಿತೋ
ಯಾರ್ ಯಾರ ಚೆಲುವೆ ಎಲ್ಲಿಹಳೋ
ಯಾರ್ ಯಾರ ಋಣವು ಎಲ್ಲಿಹುದೋ
ಒಂದೊಂದು ಅಕ್ಕಿಯ ಕಾಳಿನಲು
ತಿನ್ನೋರ ಹೆಸರು ಕೆತ್ತಿಹುದೋ
ಪ್ರೀತಿಯಿಂದ ಹೋಗಿ ಎನ್ನಿರಿ
ಕೈಯಲ್ಲಿರೋ ತಂಗಳು ತಿನ್ನಿರಿ!!!

kodu kodu varavannu - sangama

ಚಿತ್ರ: ಸಂಗಮ
ಹಾಡಿದವರು: ಗೋಪಿಕ ಪೂರ್ಣಿಮಾ
ನಟರು: ಗಣೇಶ್, ವೇದಿಕಾ

ಮಮ.........ಮಮ
ಮಮ.........ಮಮ

ಕೊಡು ಕೊಡು ವರವನು ಭಗವಂತ
ಕೊಡು ಕೊಡು ಇವನನು ನನಗಂತ....ಮಮ ಮಮ
ಕೊಡು ಕೊಡು ವರವನು ಭಗವಂತ
ಇವನಿಗೆ ಆಗಲಿ ನಾ ಸ್ವಂತ..............ಮಮ ಮಮ
ಹಣೆಯಲ್ಲಿ ಬರೆದರು ಏನೇ ಬದಲಾಯಿಸಿ ಬಿಡು ನೀನೆ
ನನಗಾಗಿ ಜನಿಸಿದ ಹುಡುಗ ಇವನೇ ತಾನೇ

ನಾ ನಗಲು ತಾ ನಗುವ ಮಗುವಿನ ಮನಸಿನ ಈ ಹುಡುಗ........ಮಮ
ನೊಂದರೆ ನಾ ಸ್ಪಂದಿಸುವ ಹೃದಯದ ಗೆಳೆಯನು ಈ ಹುಡುಗ...ಮಮ
ಇವನೊಂದಿಗೆ ಇದ್ದರೆ ಆ ಘಳಿಗೆ ನನ್ನ ಪಾಲಿಗೆ ದೀವಳಿಗೆ
ಮನ ತುಂಬುವ ಈತನ ಮುದ್ದು ನಗೆ ನನಗೆ ನನಗೆ ನನಗೆ ನನಗೆ ನನಗೆ

ತಾರೆಗಳ ತೋರಿಸುವ ಬಿರು ಬಿರು ಬಿಸಿಲಲು ಹೇಗೋ ಇವ.......ಮಮ
ಕೂಡಿಟ್ಟ ಕನಸುಗಳ ದೋಚಿದ ಚೋರನೆ ಈ ಚೆಲುವ..............ಮಮ
ಇವನ ಎದೆ ಗೂಡಲಿ ಜಾಗ ಕೊಡು ನನಗೆ ಜಗ ಬೇಡ ಬಿಡು
ನಮ್ಮಿಬ್ಬರ ಸಂಗಮ ಮಾಡಿ ಬಿಡು ಇದುವೇ ಬಯಕೆ ನಿನಗೆ ಹೊರುವೆ ಹರಕೆ

dil maange more - sangama

Movie: Sangama
Singer: Devi Sri Prasad
Actors: Ganesh, Vedika

if u have a cycle, u want a bike
if u have a bike, u want a car
if u have a car, u want more
e dil maange more....

if u have a house, u want a bungalow
if u have a bungalow, u want a palace
if u have a palace, u want more
e dil maange more...

laavo laavo laavo laavo
eshtu sikru saakagalvo
beku beku antaaralvo
dil maange more

laavo laavo laavo laavo
yaargu sambLa saalodilvo
saala maadod tappodilvo
dil maange more

there is no reason
there is no season
manushya heege maange more
no limitation no hesitation
manassu maange more

geddaru biddaru ella maange more
gari gari noteu ellaru maange more
dil maange more
dina dina rateu jigidare maange more.....

if u have a cycle, u want a bike......


ond saari aishu pakdalli
ond saari sania toLalli
yaaryaaro bartaar kanasalli maange more
i am sure ee tappu namdalla
i am sure ee tappu avrdalla
manasinda taane heegella maange more

odidre haapy ildidre copy
hengaadru marksu maange more
boysge topi hudgeeru happy
they also maange more
eddaru biddaru ella maange more
gari gari noteu ellaru maange more
dil maange more
dina dina rateu jigidare maange more.....

laavo laavo......

tapassu maado sanyaasi
circussu maado samsaari
ellaargu aase eneno maange more
supposeu bandu bhagavanta
supposeu swarge togo antha
kottrunu keLtivinneno maange more

credit cardu kaiyalli kottu
ujjoke bitre maange more
eshte chocolateu kottrunu fightu
makkalu maange more
eddaru biddaru ella maange more

gari gari noteu ellaru maange more
dil maange more
dina dina rateu jigidare maange more.....

madhumaasa - sangama (one of my favourites)

ಚಿತ್ರ: ಸಂಗಮ
ಹಾಡಿದವರು: ಕಾರ್ತಿಕ್
ನಟರು: ಗಣೇಶ್, ವೇದಿಕಾ

ಹೇ ...ಮಧುಮಾಸ ಅವಳಿಗೆ ಖಾಸಾ
ಮಳೆಬಿಲ್ಲೆ ಅವಳ ನಿವಾಸ
ಇರಬೇಕು ಅಂತ ವಿಳಾಸ ನನ್ನ ಹುಡುಗೀಗೆ
ಹೋ..ಅವಳೆದುರು ಸೂರ್ಯನೇ ಮೋಸ
ಅವಳಿರಲು ಅಂತ ಉಲ್ಲಾಸ
ಆ ಚಂದಕೆ ಚಂದಿರ ದಾಸ ನನ್ನ ಹುಡುಗೀಗೆ

ನಕ್ಕರೆ ನೂರಾರು ತಾರೆ ಮಿಂಚಬೇಕು
ಅತ್ತರೆ ಕಣ್ಣಿಂದ ಮುತ್ತು ಸುರಿಯಬೇಕು
ಅವಳನ್ನೇ ನೋಡುತ್ತಾ ಭೂಮಿಯೇ ನಿಲಬೇಕು
ಅವಳಂದ್ರೆ.....
ಅವಳಂದ್ರೆ  ಬೆಳದಿಂಗಳ ಹುಣ್ಣಿಮೆ ಬಾಲೆ
ಅವಳ್ ಬಂದ್ರೆ ಸುರಿಬೇಕು ಹೂಮಳೆ ಅಲ್ಲೇ

ಎ....ಹೂವೆಲ್ಲ ಅವಳ ನೋಡಲು
ಹಾಗೆಯೇ ಅವಳ್ ಹಿಂದೆ ಹಿಂದೆ ಬರುತಿರಬೇಕು
ತೆಳ್ಳನೆ ಬಳುಕೋ ಮೈಯಲಿ
ಕೋಮಲ ಮಿಂಚೊಂದು ಮನೆಯ ಮಾಡಿರಬೇಕು
ಪಟ ಪಟ ಪಟ ಮಾತಿನ ಮಲ್ಲಿ
ಚಿಟ ಪಟ ಚಿಟ ಮಳೆಹನಿ ಚೆಲ್ಲಿ
ಮಟ ಮಟ ಮಟ ಬಿರುಬಿಸಿಲಲ್ಲಿ
ಮನಸು ತಣಿಸಿ ಬಿಡಬೇಕು
ಗಿಲಿ ಗಿಲಿ ಗಿಲಿ ಜಾದೂ ಆಕೆ 
ಬಿಳಿ ಬಿಳಿ ಬಿಳಿ ಬೆಳ್ಳಿ ಝುಮ್ಕೆ
ಜಿಗಿ ಜಿಗಿ ಜಿಗಿ ಜಿಗಿಯೋ ಜಿಂಕೆ
ಅವಳೆ ಅವಳೆ ಅವಳೆ ನನ್ನಾಕೆ 
ಅವಳಂದ್ರೆ ಬೆಳದಿಂಗಳ..................

ಹೊಯ್ ತಾಕಲು ಅವಳ ಕೈಗಳು
ಆಸೆಲೆ ತುಸು ಜೀವ ಬಂದು ಕಂಪಿಸಬೇಕು
ಸುಮ್ಮನೆ ಅವಳ ಸೋಕಲು
ಗಾಳಿಯು ಅವಳತ್ತ ಇತ್ತ ಸುತ್ತಿರಬೇಕು
ತರ ತರ ತರ ತರಲೆಯು ಬೇಕು
ಅರೆಘಳಿಗೆಯೇ ಮುನಿಸಿರಬೇಕು
ಮರುಘಳಿಗೆಯೇ ನಗುತಿರಬೇಕು
ಅಂತ ಹುಡುಗಿ ಸಿಗಬೇಕು
ಹದಿ ಹದಿ ಹದಿ ಹರೆಯದ ಬೆಣ್ಣೆ
ಪಳ ಪಳ ಪಳ ಹೊಳೆಯೋ ಕಣ್ಣೆ
ಮಿರ ಮಿರ ಮಿರ ಮಿನುಗೋ ಕೆನ್ನೆ
ಇರುವ ಚೆಲುವೆ ನನಗೆ ಸಿಗಬೇಕು
ಅವಳಂದ್ರೆ ಬೆಳದಿಂಗಳ............. 

kaadu kaadu naa kuLitiruve - sangama

ಚಿತ್ರ: ಸಂಗಮ
ಹಾಡಿದವರು: ಸಾಗರ್, ದಿವ್ಯ
ನಟರು: ಗಣೇಶ್, ವೇದಿಕಾ

ಕಾದು ಕಾದು ನಾ ಕುಳಿತಿರುವೆ
ಎಂದು ಎಂದು ನೀ ನನಗೊಲಿವೆ
ಆಗಲಿ ಸಂಗಮ ನಮ್ಮ ಹೃದಯದ ಸಂಗಮ

ಹುಡುಗ ಬಾರೋ ಬೇಗ ನೀನು
ಹೃದಯ ಕೂಗಿ ಕರೆಯುತಿದೆ
ಹುಡುಗಿ ಮೋಡಿ ಮಾಡಿ ನೀನು
ಮನಸು ತೇಲಿದೆ

ಎಲ್ಲೋ ಇಟ್ಟು ಕಳೆದಿರೋ ಓಲೆ
ಏನೋ ಗೀಚಿ ಹರಿದಿರೋ ಹಾಳೆ 
ಎಲ್ಲದಕ್ಕೂ ನೀನೆ ಕಾರಣ
ಮನಸು ಕೆಡಿಸಿದವನೇ

ಏನೋ ಮಾಡೋ ನೆಪದಲಿ ನೀನು
ನನ್ನೇ ನೋಡೋ ಗಳಿಗೆಗೆ ನಾನು
ಯಾಕೆ ಹೀಗೆ ಕಾದು ಕೂರುವೆ
ತಿಳಿಸು ನನಗೆ ನೀನೆ

ಕಣ್ಣಿಂದ ಒಂದು ಕಣ್ಣೀರ ಬಿಂದು ಖುಷಿಯಲ್ಲಿ ಜಾರಿದೆ 
ಆಗಲಿ ಸಂಗಮ ನಮ್ಮ ಹೃದಯದ ಸಂಗಮ

ಒಂಟಿಯಾಗಿ ಕುಳಿತರು ಹೀಗೆ
ಅಂಟಿ ನಿಂಗೆ ಕುಳಿತಿರೋ ಹಾಗೆ
ಬೆಚ್ಚನೆಯ ಭಾವ ನನ್ನಲಿ ಬರುತಲಿರುವುದೇಕೋ

ನೆನ್ನೆ ಮೊನ್ನೆ ಎಣಿಸಿರಲಿಲ್ಲ
ಇಂದು ನೀನೆ ಎದೆಯೊಳಗೆಲ್ಲ
ನಿನ್ನ ಬಿಟ್ಟು ಬೇರೆ ಯೋಚನೆ
ನನಗೆ ಬರದು ಏಕೋ

ಕಣ್ಮುಚ್ಚಿಕೊಂಡು ನಿನ್ನನ್ನೇ ಕಂಡು ಮೈಮರೆತು ಹೋದೆನಾ
ಆಗಲಿ ಸಂಗಮ ನಮ್ಮ ಹೃದಯದ ಸಂಗಮ

Friday, October 23, 2009

anisutide - mungaru male

ಚಿತ್ರ: ಮುಂಗಾರು ಮಳೆ
ಹಾಡಿದವರು: ಸೋನು ನಿಗಮ್
ನಟರು: ಗಣೇಶ್, ಪೂಜಾ ಗಾಂಧಿ

ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು
ಮಾಯದ ಲೋಕದಿಂದ ನನಗಾಗಿ ಬಂದವಳೆಂದು
ಆಹಾ ಎಂತ ಮಧುರ ಯಾತನೆ
ಕೊಲ್ಲು ಹುಡುಗಿ ಒಮ್ಮೆ ನನ್ನ ಹಾಗೆ ಸುಮ್ಮನೆ

ಸುರಿಯುವ ಸೋನೆಯು ಸೂಸಿದೆ ನಿನ್ನದೇ ಪರಿಮಳ
ಇನ್ಯಾರ ಕನಸಲು ನೀನು ಹೋದರೆ ತಳಮಳ
ಪೂರ್ಣ ಚಂದಿರ ರಾಜ ಹಾಕಿದ
ನಿನ್ನಯ ಮೊಗವನು ಕಂಡ ಕ್ಷಣ
ನಾ ಕೈದಿ ನೀನೆ ಸೆರೆಮನೆ
ತಬ್ಬಿ ನನ್ನ ಅಪ್ಪಿಕೋ ಒಮ್ಮೆ ಹಾಗೆ ಸುಮ್ಮನೆ

ತುಟಿಗಳ ಹೂವಲಿ ಆಡದ ಮಾತಿನ ಸಿಹಿಯಿದೆ
ಮನಸಿನ ಪುಟದಲಿ ಕೇವಲ ನಿನ್ನದೇ ಸಹಿಯಿದೆ
ಹಣೆಯಲಿ ಬರೆಯದ ನಿನ್ನ ಹೆಸರ
ಹೃದಯದಿ ನಾನೇ ಕೊರೆದಿರುವೆ
ನಿನಗುಂಟೆ ಇದರ ಕಲ್ಪನೆ
ನನ್ನ ಹೆಸರ ಕೂಗೆ ಒಮ್ಮೆ ಹಾಗೆ ಸುಮ್ಮನೆ

mungaru maLeye - mungaru maLe

ಚಿತ್ರ: ಮುಂಗಾರು ಮಳೆ
ಹಾಡಿದವರು: ಸೋನು ನಿಗಮ್
ನಟರು: ಗಣೇಶ್, ಪೂಜಾ ಗಾಂಧಿ

ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ
ನಿನ್ನ ಮುಗಿಲ ಸಾಲೆ ಧರೆಯ ಕೊರಳ ಪ್ರೇಮದ ಮಾಲೆ
ಸುರಿವ ಒಲುಮೆಯ ಜಡಿ ಮಳೆಗೆ ಪ್ರೀತಿ ಮೂಡಿದೆ
ಯಾವ ಚಿಪ್ಪಿನಲ್ಲಿ ಯಾವ ಹನಿಯು ಮುತ್ತಾಗುವುದೋ
ಒಲವು ಎಲ್ಲಿ ಕುಡಿಯೊಡೆಯುವುದೋ ತಿಳಿಯದಾಗಿದೆ

ಭುವಿ ಕೆನ್ನೆ ತುಂಬ ಮುಗಿಲು ಸುರಿದ ಮುತ್ತಿನ ಗುರುತು
ನನ್ನ ಎದೆಯ ತುಂಬ ಅವಳು ಬಂದ ಹೆಜ್ಜೆಯ ಗುರುತು
ಹೆಜ್ಜೆ ಗೆಜ್ಜೆಯ ಸವಿ ಸದ್ದು ಪ್ರೇಮನಾದವೋ
ಎದೆ ಮುಗಿಲಿನಲ್ಲಿ ರಂಗು ಚೆಲ್ಲಿ ನಿಂತಳು ಅವಳು
ಬರೆದು ಹೆಸರ ಕಾಮನ ಬಿಲ್ಲು ಏನು ಮೋಡಿಯೋ

ಯಾವ ಹನಿಗಳಿಂದ ಯಾವ ನೆಲವು ಹಸಿರಾಗುವುದೋ
ಯಾರ ಸ್ಪರ್ಶದಿಂದ ಯಾರ ಮನವು ಹಸಿಯಾಗುವುದೋ
ಯಾರ ಉಸಿರಲ್ಯಾರ ಹೆಸರೋ ಯಾರು ಬರೆದರೋ
ಯಾವ ಪ್ರೀತಿ ಹೂವು ಯಾರ ಹೃದಯದಲ್ಲರಳುವುದೋ
ಯಾರ ಪ್ರೇಮ ಪೂಜೆಗೆ ಮುಡಿಪೋ ಯಾರು ಬಲ್ಲರು

ಒಲವ ಚಂದಮಾಮ ನಗುತ ಬಂದ ಮನದಂಗಳಕೆ
ಪ್ರೀತಿ ಬೆಳಕಿನಲ್ಲಿ ಹೃದಯ ಹೊರಟಿದೆ ಮೆರವಣಿಗೆ
ಅವಳ ಪ್ರೇಮದೂರಿನ ಕಡೆಗೆ ಪ್ರೀತಿ ಪಯಣವೋ
ಪ್ರಣಯದೂರಿನಲ್ಲಿ ಕಳೆದು ಹೋಗೋ ಸುಖವ ಇಂದು
ಧನ್ಯನಾದೆ ಪಡೆದುಕೊಂಡು ಹೊಸ ಜನ್ಮವೋ   

Thursday, October 22, 2009

aakaasha neene - ambaari

ಚಿತ್ರ: ಅಂಬಾರಿ
ಹಾಡಿದವರು: ಸೋನು ನಿಗಮ್
ನಟರು: ಯೋಗೀಶ್

ಆಕಾಶ ನೀನೆ ನೀಡೊಂದು ಗೂಡು ಬಂತೀಗ ಪ್ರೀತಿ ಹಾರಿ
ತಂಗಾಳಿ ನೀನೆ ನೀಡೊಂದು ಹಾಡು ಕಂಡಿತು ಕಾಲು ದಾರಿ
ಒಂದಾದ ಜೀವ ಹೂವಾಗುವಂತೆ ಎಂದು ಕಾಪಾಡಲಿ
ಪ್ರೀತಿಯ ಅಂಬಾರಿ

ಕಣ್ಣಿನಲ್ಲಿ ಕಣ್ಣಿರೆ ಲೋಕವೆಲ್ಲಾ ಹೂ ಹಂದರ
ಭಾವವೊಂದೇ ಆಗಿರೆ ಬೇಕೇ ಬೇರೆ ಭಾಷಾಂತರ
ಎದೆಯಿಂದ ಹೊರ ಹೋಗೋ ಉಸಿರೆಲ್ಲ ಕನಸಾಗಲಿ
ಈ ಪ್ರೀತಿ ಜೊತೆಯಲ್ಲಿ ಒಂದೊಂದು ನನಸಾಗಲಿ
ಕೊನೆಯಿಲ್ಲದ ಕುಶಲೋಪರಿ ಪ್ರೀತಿಯ ಅಂಬಾರಿ 

ಕಾಣದಂತ ಹೊಸ್ತಿಲು ದೂರದಿಂದ ಬಾ ಎಂದಿದೆ
ಪೆದ್ದು ಮುದ್ದು ಜೋಡಿಗೆ ಸಿಕ್ಕ ಪ್ರೀತಿ ಸೊಗಸಾಗಿದೆ
ಆ ಸೂರ್ಯ ಸರಿದಾಗ ಈ ಪ್ರೇಮ ರೋಮಾಂಚನ
ಮುಸ್ಸಂಜೆ ಕವಿದಾಗ ಈ ಪ್ರೇಮ ನೀಲಾಂಜನ
ಮುಂದರಿಯುವ ಕಾದಂಬರಿ ಪ್ರೀತಿಯ ಅಂಬಾರಿ

hey paro - Raj the showman

ಚಿತ್ರ: ರಾಜ್ - The showman
ಹಾಡಿದವರು: ಟಿಪ್ಪು
ನಟರು: ಪುನೀತ್ ರಾಜಕುಮಾರ್, ಪ್ರಿಯಾಂಕ ಕೊಥಾರಿ

ಹೇ ಪಾರೋ....ಹೇ ಹೇಳೆ ಪಾರೋ
ಹೇ ಹೇ ಪಾರೋ ಹೇ ಹೇ ಪಾರೋ
ಅರೆ ಹೆಹೆ ಹೇ ಪಾರೋ ಹೇ ಹೇಳೆ ಪಾರೋ
ಒಂದು ಸಲ ಏನಾಗಲ್ಲ
ಐ ಲವ್ ಯು ಅಂತ ಒಮ್ಮೆ ಹೇಳೆ
ಸುಮ್ಮನೆ ಹೇಳು ಬಾರೆ
ಸುಮ್ಮನೆ ಹೇಳು ಬಾರೆ

ಲೆಟ್ರು ಕೊಡಲ್ಲ ಫೋನು ಮಾಡಲ್ಲ ಎಲ್ಲೆಂದ್ರೆ ಅಲ್ಲಿ ಅಡ್ಡ ಹಾಕಲ್ಲ
ಐಸು ಇಡಲ್ಲ ನೈಸು ಮಾಡಲ್ಲ ಹಿಂದಿಂದೆ ಬೀಳೋ ಪೋಲಿ ನಾನಲ್ಲ
ಸಿಗದೇ ಹೋದರೆ ನೀನು ನನಗೆ ಅಲೆಯಲಾರೆ ಹುಚ್ಚನ ಹಾಗೆ
ಯಾಕೆ ಬೇಜಾರು ನಿಂತ್ಕೊಳೆ ಪಾರೋ ಕೂತ್ಕೊಳೆ ಪಾರೋ

ಹೇ ಹೇ ಪಾರೋ ಹೇ ಹೇ ಪಾರೋ
ಹೇ ಹೇ ಪಾರೋ ಹೇ ಹೇಳೆ ಪಾರೋ

ಲೇಟಾಗ್ ಬರಲ್ಲ ಸಾರಿ ಕೇಳಲ್ಲ ಸಿನಿಮಾಗೆ ಬಂದ್ರೆ ಟಚ್ಚೆ ಮಾಡಲ್ಲ
ಹೊತ್ಕೊಂಡ್ ಹೋಗಲ್ಲ ಆಸಿಡ್ ಹಾಕಲ್ಲ ರೌಡಿಸಂ ಅಂತು ನಂಗೆ ಗೊತ್ತಿಲ್ಲ
ಭೂಮಿಯಲ್ಲೆ ಹುಡುಕಿದರೂನು ಸಿಗುವುದಿಲ್ಲ ಇಂಥ ಮಜ್ನು
ಯೋಚನೆನಾ ಪಾರು ನನಗೆ ಇನ್ಯಾರು.....ಒಪ್ಕೊಳೆ ಪಾರು

hey paaro.....hey heLe paaro
hey hey paaro, hey hey paaro
arey hey hey hey paaro, hey heLe paaro
ondu sala enaagalla
i love you antha omme heLe
summane heLu baare
summane heLu baare

letteru kodalla, phoneu maadalla
ellendre alli aDDa haakalla.....
iceu idalla, niceu maadalla
hindinde beeLo poli naanalla
sigade hodare neenu nanage
aleyalaare hucchana haage
yaake bejaaru, nintkoLe paaru kootkoLe paaro

lateaag baralla sorry keLalla
cinemaage bandre touche maadalla
hothkond hogalla acid haakalla
rowdism anthu nange gottilla
bhoomiyalle huDukidaroonu
siguvudilla intha majunu
yochnenaa paaro, nanage inyaaru....opkoLe paaro.....

Wednesday, October 21, 2009

tangaali tandeya - love guru

ಚಿತ್ರ: ಲವ್ ಗುರು
ಹಾಡಿದವರು:  ಕಾರ್ತಿಕ್, ಬೆನ್ನಿ
ನಟರು: ರಾಧಿಕ ಪಂಡಿತ್, ತರುಣ್

ತಂಗಾಳಿ ತಂದೆಯಾ ನನ್ನ ಬಾಳಲಿ
ಸಂಗಾತಿ ಆಗುವ ಸವಿಗನಸಲಿ
ಕೈಜಾರಿ ಹೋದೆಯ ನನ್ನ ಪ್ರೀತಿಯ
ಮಣ್ಣಲ್ಲಿ ಹೂತೆಯ ನಗುತ ನಗುತ

ಕುಂತು ನಿನ ಕಾಲ ಕೆಳಗೆ
ನಾ ಹೂವು ಹಿಡಿದಂತ ಘಳಿಗೆ
ನಿನಗೇಕೆ ನನ್ನ ಪ್ರೀತಿ ಗೊತ್ತೇ ಆಗದೆ ಹೋಯ್ತು
ಎಷ್ಟೊಂದು ಸಾರಿ ನಾ ಮನಸನ್ ತೆರೆದೆ ನಿನ್ಮುಂದೆ
ಒಂದೊಂದು ಸಾರಿನು ಅರಿಯದೇಕೆ ನೀ ಹೋದೆ
ಈ ಹಣೆಯಲ್ಲಿ ನಿನ್ನ ಒಲವ ಗೀಚಿಲ್ಲ ಬ್ರಹ್ಮ

ನಿಂಗೆ ಅನಿಸಿಲ್ಲವೇನು ನಿಂಗಾಗೆ ಬಂದೋನು ನಾನು
ಈ ನನ್ನ ಕಣ್ಣ ಭಾಷೆ ಓದೇ ಇಲ್ಲ ನೀನೇಕೆ
ಈ ಗಾಳಿ ಕಾಣಲ್ಲ ಅನುಭವವುಂಟು ಸುಳ್ಳಲ್ಲ
ಈ ಪ್ರೀತಿ ಹೀಗೇಕೆ ಹೇಳದೆ ತಿಳಿಯೋದೇ ಇಲ್ಲ
ಈ ನಿಜ ಅರಿಯೋ ಮುನ್ನ ಕಳೆದು ಕುಂತೆ ನಾ ನಿನ್ನ

tangaaLi tandeya nanna baaLali
sangaati aaguva saviganasali
kaijaari hodeya nanna preetiya
maNNalli hooteya naguta naguta

kuntu nina kaala keLage
naa hoovu hiDidanta ghaLige
ninageke nanna preeti gotte aagade hoithu
eshtondu saari naa manasan terede ninmunde
ondondu saarinu ariyadeke nee hode
ee haNeyalli ninna olava geechilla brahma

ninge anisillavenu ningaage bandonu naanu
ee nanna kaNNa bhaashe ode illa neeneke
ee gaaLi kaaNalla anubhavavunTu suLLalla
ee preeti heegeke helade tiLiyode illa
ee nija ariyo munna kaLedu kunte naa ninna

yaaru kooda - love guru

ಚಿತ್ರ: ಲವ್ ಗುರು
ಹಾಡಿದವರು:  ಕಾರ್ತಿಕ್, ಬೆನ್ನಿ
ನಟರು: ರಾಧಿಕ ಪಂಡಿತ್, ತರುಣ್

ಓ....ಹೋ......

ಯಾರು ಕೂಡ ನಿನ್ನ ಹಾಗೆ ಪೀಡಿಸಿಲ್ಲ ನನ್ನ ಹೀಗೆ
ನಾನು ನಿನ್ನ ಪ್ರೇಮ ಪೀಡಿತ
ಯಾರು ಕೂಡ ನಿನ್ನ ಹೀಗೆ ಪ್ರೀತಿಸಿಲ್ಲ ನನ್ನ ಹಾಗೆ
ನಂಬಬೇಕು ನೀನು ಖಂಡಿತ
ಯಾವುದು ಕನಸು ಯಾವುದು ನನಸು
ನನಗಂತು ತಿಳಿದೇ ಇಲ್ಲ
ಈ ನಿನ್ನ ಸೆಳೆತಕ್ಕೆ ಹುಚ್ಚಾದ ಮೇಲಂತೂ
ಎಚ್ಚರ ಉಳಿದೆ ಇಲ್ಲ

ನೂರೆಂಟು ರೀತಿಯ ನೆನಪಿನ ಬಳ್ಳಿ
ಮೆಲ್ಲಗೆ ಮೂಡಿದೆ ಎದೆಯಲ್ಲಿ
ಎಂದೆಂದೂ ಬಾಡದ ಕನಸಿನ ಹೂವು
ನಿನ್ನ ಧ್ಯಾನದಲಿ ಅರಳಿ
ಕಣ್ಣಲೆ ಮಾತಾಡುತ ಸರಿಯಾಗಿ ಹೇಳು ಇದು ಏನು ಅಂತ

ನಿಂತಲ್ಲಿ ಕೂತಲ್ಲಿ ಸಂತಸದಂತ 
ಸುಂದರ ಮೋಹಕೆ ಮರುಳಾದೆ
ಬೇರೇನೂ ಬೇಕಿಲ್ಲ ನಿನ್ನನು ಕಂಡು
ಎಲ್ಲ ತಾರೆಗಳ ತೊರೆದೆ
ಮಾತನು ಮರೆಮಾಚುತ ಸವಿಯಾದ ಭಾವ ನಿನಗೂನು ಬಂತ

Tuesday, October 20, 2009

naa naguva modalene - manasaare

ಚಿತ್ರ: ಮನಸಾರೆ
ಹಾಡಿದವರು: ಶ್ರೇಯ ಗೋಶಲ್
ನಟರು: ದಿಗಂತ್, ಐನ್ದ್ರಿತ

ನಾ ನಗುವ ಮೊದಲೆನೆ ಮಿನುಗುತಿದೆ ಯಾಕೋ ಹೊಸ ಮುಗುಳು ನಗೆ
ನಾ ನುಡಿವ ಮೊದಲೆನೆ ತೊದಲುತಿದೆ ಹೃದಯವಿದು ಒಳಗೊಳಗೇ
ನಾ ನಡೆವ ಮೊದಲೆನೆ ಎಳೆಯುತಿದೆ ದಾರಿಯಿದು ನಿನ್ನೆಡೆಗೆ
ನಾ ಅರಿವ ಮೊದಲೆನೆ ಉರಿಯುತಿದೆ ದೀಪವಿದು ನನ್ನೊಳಗೆ
ಒಂದು ಬಾರಿ ಹೇಳು ಮೆಲ್ಲಗೆ ಯಾರು ಯಾರು ನೀನನಗೆ?

ತಿಳಿಸದೇ ನನಗೆ ಹುಡುಕಿವೆ ನಿನ್ನ ನನ್ನಯ ಕಣ್ಣು
ಈ ಸಂಕಟ ಸಾಕಾಗಿದೆ ಮುಂದೇನು
ಕಲಿತಿದೆ ಮನವು ಕುಣಿಯುವುದನ್ನು ಕಂಡರೆ ನೀನು
ನಾನು ನನ್ನ ಪಾಡಿಗಿರಲು ಯಾಕೆ ಕಂಡೆ ನೀನನಗೆ?

ಕನವರಿಕೆಯಲಿ ನಿನ್ನಯ ಹೆಸರ ಕರೆಯಿತೆ ಹೃದಯ
ನನಗೇತಕೆ ನನ್ನ ಮೇಲೆಯೇ ಈ ಸಂಶಯ
ಬರಿ ಕನಸಿನಲೇ ಆಗುವೆ ಏಕೆ ನನ್ನಯ ಇನಿಯ
ಹೇಳು ಒಮ್ಮೆ ಹೇಳು ಇದುವೇ ಪ್ರೀತಿಯೆಂದು ನೀನನಗೆ

ನಾ ನಗುವ ಮೊದಲೆನೆ......... 
 

kanna haniyondige - manasaare

ಚಿತ್ರ: ಮನಸಾರೆ
ಹಾಡಿದವರು: ಶ್ರೇಯ ಗೋಶಲ್, ಕೆ ಕೆ?  
ನಟರು: ದಿಗಂತ್, ಐನ್ದ್ರಿತ

ಕಣ್ಣ ಹನಿಯೊಂದಿಗೆ ಕೆನ್ನೆ ಮಾತಾಡಿದೆ
ಕನಸುಗಳು ಕೂತಿವೆ ಏನು ಮಾತಾಡದೆ
ಮರೆಯದ ನೋವಿಗೆ ಮೆಲ್ಲಗೆ ಮೆಲ್ಲಗೆ
ನೆನಪುಗಳ ಹಾವಳಿಗೆ ಹೃದಯ ಹಾಳಾಗಿದೆ

ಮನದಲಿ ಮಿಂಚಿದೆ ಕುದಿಯುವ ಭಾವ ನದಿಯೊಂದು
ಸುಡುತಿದೆ ವೇದನೆ
ಒಲವಿನ ಕಲ್ಪನೆ ತಂಪನು ಬೀರದೆ
ಬೇಗುದಿಯ ಬಿಡುಗಡೆಗೆ ಹೃದಯ ಹೋರಾಡಿದೆ

ಮಿಡಿತದ ಮುನ್ನುಡಿ ಎದೆಯಲಿ ಗೀಚಿ ನಡೆದರೆ ನೀ 
ಉಳಿಯಲಿ ಹೇಗೆ ನಾ
ಮನದಲಿ ವೇದನೆ ಮೌನದೆ ಕೇಳು ನೀ
ದಯವಿರಿಸಿ ತುಳಿಯದಿರು ಹೃದಯ ಹೂವಾಗಿದೆ

ನಿನ್ನ ದನಿ ಕೇಳಿದೆ ನಿನ್ನ ನಗು ಕಾಡಿದೆ
ಸಣ್ಣ ದನಿಯೊಂದಿಗೆ ನನ್ನ ಮನ ಕೂಗಿದೆ
ನಿನ್ನಯ ಮೌನವು ನನ್ನೆದೆ ಗೀರಲು 
ಕನಸುಗಳ ಗಾಯದಲಿ ಹೃದಯ ಹೋಳಾಗಿದೆ

ಕಣ್ಣ ಹನಿಯೊಂದಿಗೆ ಕೆನ್ನೆ ಮಾತಾಡಿದೆ
ಕನಸುಗಳು ಸೋತಿವೆ ಏನು ಮಾತಾಡದೆ
ಮರೆಯದ ನೋವಿಗೆ ಮೆಲ್ಲಗೆ ಮೆಲ್ಲಗೆ
ನೆನಪುಗಳ ಹಾವಳಿಗೆ ಹೃದಯ ಹಾಳಾಗಿದೆ

_ _ _ _ _

kaNNa haniyondige kenne maataaDide
kanasugaLu kootive enu maataaDade
mareyada novige mellage mellage
nenapugaLa haavaLige hrudaya haaLaagide

manadali minchide kudiyuva bhaava raviyondu
suDutide vedane
olavina kalpane tampanu beerade
begudiya biDugaDege hrudaya horaaDide

miDitada munnuDi edeyali geechi naDedare nee
uLiyali hege naa
manadali vedane mounade keLu nee
dayavirisi tuLiyadiru hrudaya hoovaagide

ninna dani keLide ninna nagu kaaDide
saNNa daniyondige nanna mana koogide
ninnaya mounavu nannede geeralu
kanasugaLa gaayadali hrudaya hoLaagide

kaNNa haniyondige kenne maataaDide

kanasugaLu sotive enu maataaDade
mareyada novige mellage mellage
nenapugaLa haavaLige hrudaya haaLaagide

ello maleyaagide indu - manasaare

ಚಿತ್ರ: ಮನಸಾರೆ
ಹಾಡಿದವರು: ಸೋನು ನಿಗಮ್
ನಟರು: ದಿಗಂತ್, ಐನ್ದ್ರಿತ

ಎಲ್ಲೋ ಮಳೆಯಾಗಿದೆ ಎಂದು ತಂಗಾಳಿಯು ಹೇಳುತಿದೆ
ಇಲ್ಲೇ ಒಲವಾಗಿದೆ ಎಂದು ಕನಸೊಂದು ಬೀಳುತಿದೆ
ವ್ಯಾಮೋಹವ ಕೇವಲ ಮಾತಿನಲಿ ಹೇಳಲು ಬರಬಹುದೇ
ನಿನ್ನ ನೋಡಿದ ಮೇಲೆಯೂ ಪ್ರೀತಿಯಲಿ ಬೀಳದೆ ಇರಬಹುದೇ

ಕಣ್ಣಲಿ ಮೂಡಿದೆ ಹನಿಗವನ ಕಾಯಿಸಿ ನೀ ಕಾಡಿದರೆ
ನೂತನ ಭಾವದ ಆಗಮನ ನೀ ಬಿಡದೆ ನೋಡಿದರೆ
ನಿನ್ನ ಧ್ಯಾನದಿ ನಿನ್ನದೇ ತೋಳಿನಲಿ ಹೀಗೆಯೇ ಇರಬಹುದೇ
ಈ ಧ್ಯಾನವ ಕಂಡರೆ ದೇವರಿಗೂ ಕೋಪವು ಬರಬಹುದೇ

ನೆನಪಿನ ಹೂಗಳ ಬೀಸಣಿಗೆ ನೀ ಬರುವ ದಾರಿಯಲಿ
ಓಡಿದೆ ದೂರಕೆ ಬೇಸರಿಕೆ ನೀನಿರುವ ಊರಿನಲಿ
ಅನುಮಾನವೇ ಇಲ್ಲದೆ ಕನಸಿನಲಿ ಮೆಲ್ಲಗೆ ಬರಬಹುದೇ
ಅಲೆಮಾರಿಯ ಹೃದಯದ ಡೇರೆಯಲಿ ನೀನು ಇರಬಹುದೇ

ಎಲ್ಲೋ ಮಳೆಯಾಗಿದೆ ಎಂದು ..........

neenendu nannavanu - taj mahal

ಚಿತ್ರ: ತಾಜ್ ಮಹಲ್
ಹಾಡಿದವರು: ಶ್ರೇಯ ಗೋಶಲ್
ನಟರು: ಅಜಯ್ ರಾವ್, ಪೂಜಾ ಗಾಂಧಿ

ನೀನೆಂದು ನನ್ನವನು ನಾನೆಂದೂ ನಿನ್ನವಳು
ನಿನಗಾಗಿ ಕಾಯುವೆ ನಾನು ಹಗಲು ರಾತ್ರಿ ಬಾರೋ
ಮನಸಲ್ಲಿ ನೀನಿರುವೆ ಕನಸಲ್ಲೂ ಕಾದಿರುವೆ
ಪ್ರೀತಿಲಿ ತೇಲಿಸಿ ನಿನ್ನನು ಸೇರುವೆ ನಾನು ಬಾರೋ
ನೀ ಮನದ ತುಡಿತ ಕಣೋ ಈ ಹೃದಯ ಮಿಡಿತ ಕಣೋ
ಓ ನಿನ್ನ ಮೊದಲ ಮಾತಿನಲೆ ನಾ ಕಳೆದು ಹೋಗಿರುವೆ
ನಿನ್ನಂದ ಚೆಂದಕೆ ಸಾಟಿ ಯಾರು ಹೇಳೋ ಓ ಚೆಲುವ

ಅಂದು ಕಂಡ ಕನಸು ನೀನು ಇಂದು ನನ್ನ ಬದುಕೇ ನೀನು
ನೀ ಬೆರೆತು ಹೋದೆ ನನ್ನೀ ಉಸಿರಲಿ
ನಗುನಗುತ ಮನಸನು ಕದ್ದು ಅನುದಿನವು ಹೊಸತನ ತಂದು
ನೀ ಒಲಿದು ಬಾರೋ ನನ್ನೀ ಬಾಳಲಿ
ಲಾ ಲಾ......
ಈ ನನ್ನ ಹೃದಯದ ಗೂಡಲಿ ನೀನೆ ರಾಜ ಓ ಚೆಲುವ

ನಿನ್ನ ಪ್ರೀತಿ ಮೂಡಿದ್ದಕ್ಕಾಗಿ ನನ್ನ ಹೃದಯ ಹಾಡಿದೆ ಕೂಗಿ
ಏಳೇಳು ಜನ್ಮದಲು ನಿನ್ನ ಸೇರುವೆ
ಈ ನನ್ನ ಉಸಿರಿರೋ ತನಕ ನಿನ್ನ ಕೂಡಿ ಬಾಳುವ ತವಕ
ಸಂಗಾತಿ ನಿನಗಾಗಿ ನಾ ಕಾಯುವೆ
ಲಾ ಲಾ.....
ನಿನ ಪ್ರೀತಿಗಾಗಿ ನಾನು ಸೋತು ಹೋದೆ ಓ ಚೆಲುವ....

ನೀನೆಂದು ನನ್ನವನು............

nee nanna manasinali - taj mahal

ಚಿತ್ರ: ತಾಜ್ ಮಹಲ್
ಹಾಡಿದವರು: ರಾಜೇಶ್
ನಟರು: ಅಜಯ್ ರಾವ್, ಪೂಜಾ ಗಾಂಧಿ

ನೀ ನನ್ನ ಮನಸಿನಲಿ ನಾ ಕಾಣೋ ಕನಸಿನಲಿ
ಮಾತಾಡೋ ಮಾತಿನಲಿ ನಾ ಹಾಡೋ ಹಾಡಿನಲಿ
ಏಕೋ ಕಾಣೆ ನೀನೆ ಕಾಣುವೆ
ಏಕೋ ಏನೋ ನೀನೆ ಕೇಳುವೆ
ಈ ನನ್ನ ಹೃದಯದ ತುಂಬ ನೀ ನಗುವ ಪ್ರತಿಬಿಂಬ

ಉಸಿರಾಡುವೆ ಪ್ರತಿ ಕ್ಷಣ ನಿನ್ನಲೇ
ನಲಿದಾಡುವೆ ಸದಾ ನಿನ್ನ ನೆನಪಲೆ
ಅನುರಾಗದ ಸವಿ ಈ ಬಂಧನ
ಮನದಾಳದ ಭಾವ ಈ ಸ್ಪಂದನ
ಮೌನವೇ ಒಮ್ಮೆ ಮಾತಾಡಮ್ಮ 
ಓ ಪ್ರೇಮವೇ ನನ್ನ ಮನ ಸೇರಮ್ಮ 
ಈ ನನ್ನ ಹೃದಯದ ತುಂಬ ನೀ ನಗುವ ಪ್ರತಿಬಿಂಬ

ತಂಗಾಳಿಯಾಗಿ ನೀ ತೇಲಿಬಾ
ಬೆಳದಿಂಗಳಂತೆ ಬೆಳಕಾಗಿ ಬಾ
ಮುಂಜಾನೆ ಮಂಜು ನೀನಾಗಲು
ಹೊಂಗಿರಣವಾಗಿ ನಿನ್ನ ಸೇರಲು
ಸುಮ್ಮನೆ ನೀ ಕಾಯಿಸಬೇಡ
ಸುಮ್ಸುಮ್ಮನೆ ನೀ ನೋಯಿಸಬೇಡ
ಈ ನನ್ನ ಹೃದಯದ ತುಂಬ ನೀ ನಗುವ ಪ್ರತಿಬಿಂಬ

ನೀ ನನ್ನ ಮನಸಿನಲಿ.......

khushiyaagide - taj mahal

ಚಿತ್ರ: ತಾಜ್ ಮಹಲ್
ಹಾಡಿದವರು: ಕುನಾಲ್ ಗಾಂಜಾವಾಲ
ನಟರು: ಅಜಯ್ ರಾವ್, ಪೂಜಾ ಗಾಂಧಿ

ಅವ್ಳಂದ್ರೆ ನಂಗೆ ತುಂಬಾ ಇಷ್ಟ,
ಅವ್ಳಿಗು ನಾನಂದ್ರೆ ಇಷ್ಟ.....ಅನ್ಸತ್ತೆ.....

ಖುಷಿಯಾಗಿದೆ ಏಕೋ ನಿನ್ನಿಂದಲೆ
ನಾ ನೋಡದೆ ನಿನ್ನನು ಇರಲಾರೆನೆ
ಒಮ್ಮೆ ನೀ ನಕ್ಕರೆ ನಾನು ತುಸು ನಾಚುವೆ
ರೆಪ್ಪೆಯ ಮುಚ್ಚದೇ ನಿನ್ನನೆ ನೋಡುವೆ
ಹೇಳೇ ಕೋಗಿಲೆ ಹಾಡು ಈಗಲೇ
ನಿನ್ನ ಜೊತೆಯಲೇ ನಾನು ಹಾಡಲೇ

ಮುಂಜಾನೆ ವೇಳೆ ಚಿಲಿಪಿಲಿ ಕಲರವ ಕೇಳಿ
ನಾ ಮರೆತು ಬಿಟ್ಟೆ ನನ್ನ
ತಣ್ಣನೆ ಗಾಳಿಲಿ ಹುಣ್ಣಿಮೆ ಚಂದ್ರನ ನೋಡಿ
ನಾ ಮರೆತು ಬಿಟ್ಟೆ ನನ್ನ
ಆದರು ಮರೆತೇ ಇಲ್ಲ ನಾನಿನ್ನ
ಲ ಲ ಲ ಲ........
ಆ ಚಿಲಿಪಿಲಿ ಕಲರವ ನಿನದಲ್ಲವೇ
ಆ ಹುಣ್ಣಿಮೆ ಬೆಳಕು ನೀನಲ್ಲವೇ
ಒಮ್ಮೆ ನೀ ನಕ್ಕರೆ............

ಮಂಜಿನ ಹನಿಗಳ ಚಿಗುರೆಲೆಯ ಮೇಲೆ
ನಿನ್ ಹೆಸರ ನಾ ಬರೆದೆ
ಚಿಟಪಟ ಮಳೆಯಲಿ ಪದೆ ಪದೆ ನೆನೆಯುತ
ನಿನ ಸ್ಪರ್ಶವ ಸವಿದೆ
ನಿನ್ನಲ್ಲೇ ನಾ ಬೆರೆತೆ
ಲ ಲ ಲ ಲ ......
ಆ ಮಂಜಿನ ಹನಿಗಳು ನೀನಲ್ಲವೇ
ಆ ಚಿಟಪಟ ಮಳೆಯಲು ನೀನಿರುವೆ
ಒಮ್ಮೆ ನೀ ನಕ್ಕರೆ..........

ಅವ್ನಂದ್ರೆ ನಂಗೆ ತುಂಬಾ ಇಷ್ಟ
ಅವ್ನಿಗೂ ನಾನಂದ್ರೆ ಇಷ್ಟ....ಅನ್ಸತ್ತೆ.....

hrudaya samudra kalaki - ashwamedha

ಚಿತ್ರ: ಅಶ್ವಮೇಧ
ಹಾಡಿದವರು: ರಾಜ್ ಕುಮಾರ್
ನಟರು: ಕುಮಾರ್ ಬಂಗಾರಪ್ಪ

ಹೃದಯ ಸಮುದ್ರ ಕಲಕಿ ಹೊತ್ತಿದೆ ದ್ವೇಷದ ಬೆಂಕಿ
ರೋಶಾಗ್ನಿ ಜ್ವಾಲೆ ಉರಿದುರಿದು
ದುಷ್ಟ ಸಂಹಾರಕೆ ಸತ್ಯ  ಜೇಂಕಾರಕೆ ಪ್ರಾಣ
ಒತ್ತೆ ಇಟ್ಟು ಹೋರಾಡುವೆ
ದಿಟ್ಟ ಹೆಜ್ಜೆ ಇಟ್ಟು ಯಜ್ಞ ದೀಕ್ಷೆ ತೊಟ್ಟು ನಡೆಸುವೆ
ಅಶ್ವಮೇಧ ಅಶ್ವಮೇಧ ಅಶ್ವಮೇಧ ಅಶ್ವಮೇಧ

ಸೂರ್ಯ ಚಂದ್ರರೇ ನಿನ್ನ ಕಂಗಳು
ಗಿರಿ ಶ್ರುಂಗವೇ ನಿನ್ನ ಅಂಗವೋ
ದಿಕ್ಪಾಲಕರೆ ನಿನ್ನ ಕಾಲ್ಗಳು
ಮಿಂಚು ಸಿಡಿಲು ನಿನ್ನ ವೇಗವು
ಜೀವ ಜೀವದಲಿ ಬೆರೆತು ಹೋದ
ಭಾವ ಭಾವದಲಿ ಕರಗಿ ಹೋದ
ಜೀವಾಶ್ವವೆ ದೂರಾದೆಯ
ಪ್ರಾಣಾಶ್ವವೆ ಮರೆಯಾದೆಯ
ದಿಟ್ಟ ಹೆಜ್ಜೆ ಇಟ್ಟು......

ವಿಷ ವ್ಯೂಹವ ಕುಟ್ಟಿ ಕೆಡವಲು 
ವೀರ ಪೌರುಷ ಎತ್ತಿ ಹಿಡಿದು
ತಕಿಟ ಧಿಂ ದಿರನ ತಕಿಟ ಧಿಂ ಧಿರನ
ದಿರನ ದಿರನ ದಿರನ ತಕಿಟ ಧಿಂ ತನ
ತಕಿಟ ಧಿಂ ತಕಿಟ ಧಿಂ ಧಿಂ ತನ್
ಚದ್ಮ ವೇಷವ ಹೊರ ಎಳೆಯಲು
ಕ್ಷಾತ್ರ ತೇಜದ ಕತ್ತಿ ಇರಿದು
ಗೂಡ ರಾಕ್ಷಸರ ಕೊಚ್ಚಿ ನಡೆವೆ
ನೀತಿ ನೇಮಗಳ ಬಿತ್ತಿ ಬೆಳೆವೆ
ಆಕಾಶವೇ ಮೇಲ್ಬೀಳಲಿ
ಭೂತಾಯಿಯೇ ಬಾಯ್ಬಿರಿಯಲಿ
ದಿಟ್ಟ ಹೆಜ್ಜೆ........

Friday, October 16, 2009

ninna poojege bande - psycho

ಚಿತ್ರ: ಸೈಕೋ

ಹಾಡಿದವರು: ರಘು ದೀಕ್ಷಿತ್, ಹರಿಚರಣ್
ನಟರು: ಧನುಶ್, ಅನಿತ

ನಿನ್ನ ಪೂಜೆಗೆ ಬಂದೆ ಮಹದೇಶ್ವರ
ಎನ್ನ ಕರುಣದಿ ಕಾಯೋ ಮಹದೇಶ್ವರ
ಹೇ ಶಂಕರ ಪ್ರೇಮಾಂಕುರ ಆದ ನಂತರ ನೆಮ್ಮದಿ ದೂರ
ಯಾಕೀಥರ ಹೇಳು ಪ್ರೇಮಾಂಬೊದೆ ಹುನ್ನಾರ
ಇದರಿಂದ ಶಾಂತಿ ಸಂಹಾರ

ಒಮ್ಮೆ ಚಂದದಿ ನೋಡೋ ಮಹದೇಶ್ವರ
ಶಂಭೋ ಹುಂಬರು ನಂಬೋ ಈ ಪಂಜರ

take a break now when listening to the song
praying to the lord when he is all around
protect this world o mahadeshwara
supreme divine shambho hara hara.....

ಈ ಪ್ರೇಮವು ದೇವರ ಹಾಗೆ ನನ್ನೊಳ ಮನಸು ಪರಿಶುದ್ಧ ಗಂಗೆ
ಹುಸಿ ಮಾಡದೆ ನಾನಿಟ್ಟ ನಂಬಿಕೆ ಉಸಿರಾಗುತಾಳೆ ಈ ನನ್ನ ಜೀವಕೆ
ಈ ಪ್ರೇಮದಿಂದ ವ್ಯಸನವು ಥರ ಥರ ಬದುಕಿನ ಗತಿ ಬದಲಿಸೋ ಗಡಿಯಾರ 

ನಿನ್ನ ಪೂಜೆಗೆ......

ಓ ಪ್ರೇಮವೇ ನಿನಗೆ ಪ್ರಣಾಮ ನಿನ್ನಿಂದಲೆ ಈ ಲೋಕ ಕ್ಷೇಮ
ಓಂಕಾರ ರೂಪಿ ಈ ನನ್ನ ಪ್ರೇಮ ಸಾವಿಲ್ಲದಾ ಚೈತನ್ಯಧಾಮ
ಈ ಮುಗ್ದ ಹೃದಯದಿ ಚಿಗುರಿದೆ ಸಡಗರ ಗುನುಗುನಿಸಲಿ ಸುಮಧುರ ಝೇಂಕಾರ

ನಿನ್ನ ಪೂಜೆಗೆ ಬಂದೆ ಮಹದೇಶ್ವರ
ಇವನ ಕರುಣದಿ ಕಾಯೋ ಮಹದೇಶ್ವರ
ಶಂಭೋ ಯಾರಿವನ್ಯಾರೋ ಮಹದೇಶ್ವರ
ಪ್ರೇಮ ದೇವರು ಎಂದ ಪ್ರೇಮೇಶ್ವರ
ಬೇರೇನನು ನಾ ಬೇಡೆನು ಈ ಪ್ರೇಮವ ಕಾಪಾಡು ನೀನು
ಈ ಪ್ರೇಮಿಯ ಆಸೆ ಈಡೇರಿಸೋ ಹರ
ಇನ್ನಾಗಲಿ ಬಾಳು ಬಂಗಾರ.....

namma naadu - psycho

ಚಿತ್ರ: ಸೈಕೋ
ಹಾಡಿದವರು: ರಘು ದೀಕ್ಷಿತ್ 

ನಟರು: ಧನುಶ್, ಅನಿತ

ಪ್ರೀತಿಯ ಮನಶಾಂತಿಯ ಸಿರಿಹೊನ್ನಿನ ನಾಡಿದು
ಹಸಿರು ವನಗಳ ತಂಪು ನದಿಗಳ ಸುಂದರ ಬೀಡಿದು
ಲೋಕವೇ ಒಂದಾಗುವ ಸಂಗಮ
ಭೇದವೇ ಇಲ್ಲದ ಹಿರಿತನ
ನಾಳಿನ ಹೊಸ ಆಶಾ ಕಿರಣ
ನಮ್ಮ ನಾಡು ಕರುನಾಡು ನಮ್ಮ ನಾಡು ಕರುನಾಡು

ಕಡಲಿನ ಮಲೆ ಮಡಿಲಿನ ಬಿಸಿ ಬಯಲಿನ ತವರಿದು
ಬೆವರ ಹನಿಗಳು ವಿವಿಧ ದನಿಗಳು ಎಳೆಯುವ ತೇರಿದು
ಜ್ಞಾನದ ಪರಿಕಾನದ ಹಂಬಲ ಚಿಗುರಿಗೆ ಬೇರಿನ ಬೆಂಬಲ
ಮಮತೆಯ ಸಮತೆಯ ಅಂಗಳ
ನಮ್ಮ ನಾಡು ಕರುನಾಡು ನಮ್ಮ ನಾಡು ಕರುನಾಡು

ಕನ್ನಡ ಸತ್ಯ....ನಮ್ಮ ನಾಡು
ಕನ್ನಡ ನಿತ್ಯ....ಕರುನಾಡು

eno ide - psycho

ಚಿತ್ರ: ಸೈಕೋ
ಹಾಡಿದವರು: ರಘು ದೀಕ್ಷಿತ್
ನಟರು: ಧನುಶ್, ಅನಿತ

ಏನೋ ಇದೆ ಏನೋ ಇದೆ ಈ ಪ್ರೀತಿಲಿ ಏನೋ ಇದೆ
ಏನಿದೆ ಏನೇನಿದೆ ಈ ಪ್ರೀತಿಲಿ ಇನ್ನೇನಿದೆ
ಬಾಳಿನ ದೀಪವೆ ಇಂದು ಆರಿ ಹೋಗಿದೆ
ನನ್ನಯ ನೆರಳೆ ನನ್ನ ಬಿಟ್ಟು ಹೋಗಿದೆ
ಜೀವನ ಅಲ್ಲೋಲ ಕಲ್ಲೋಲವಾಗಿದೆ
ಕರೆಯುವ ಕೊರಳೆ ಮೌನ ತಾಳಿದೆ

ಏನಿದೆ ಏನೋ ಇದೆ ಈ ಪ್ರೀತಿಲಿ ಏನೋ ಇದೆ
ಏನೋ ಇದೆ ಏನೇನಿದೆ ಈ ಪ್ರೀತಿಲಿ ಇನ್ನೇನಿದೆ

ಓ ತನ್ನ ರಾಗವನ್ನೇ ಹಾಡು ತೊರೆದಂತೆ
ಭಾವದಲ್ಲಿ ಬರೆದ ಚಿತ್ರ ಹರಿದಂತೆ
ಕನ್ನ ಹಾಕಿ ಹೃದಯವನ್ನೇ ಕೊರೆದಂತೆ
ನನ್ನ ಶೋಕ ಗೀತೆ ನಾನೇ ಬರೆದಂತೆ
ಬರಿ ತಾಪವೇ ಪ್ರೀತಿಯ ಫಲವೇ
ಸರಿ ಉತ್ತರ ನೀಡು ಒಲವೆ.....
ಬೆಳದಿಂಗಳೇ ಮರೆಯಾಗಿದೆ ಮರೆಯಾಗಿದೆ

ಆಕಾಶವೇ ಸುಳ್ಳಾಗಿದೆ ಈ ಭೂಮಿಯು ಮುಳ್ಳಾಗಿದೆ
ಏನೋ ಇದೆ ಏನೇನಿದೆ ಈ ಪ್ರೀತಿಲಿ ಇನ್ನೇನಿದೆ

ಕಾಡುವಂತ ನೂರು ನೋವು ಇರುಳಲ್ಲಿ
ನಾಟಿದಂತೆ ಬಾಣ ಒಂದು ಎದೆಯಲ್ಲಿ
ನೀನೆ ಬೇಕು ಎಂಬ ನನ್ನ ಛಲದಲ್ಲಿ
ಲೂಟಿಯಾಗಿ ಹೋದೆನಲ್ಲ ಒಲವಲ್ಲಿ
ಇದು ಎಚ್ಚರವಿಲ್ಲದ ಕನಸೇ ಅಥವಾ ಇದು ಸಾವಿನ ತಿನಿಸೇ
ನಿಜ ಬಣ್ಣವೇ ಬಯಲಾಗಿದೆ ಬಯಲಾಗಿದೆ

ಆಕಾಶವೇ ಸುಳ್ಳಾಗಿದೆ ಈ ಭೂಮಿಯು ಮುಳ್ಳಾಗಿದೆ


ಬಾಳಿನ ದೀಪವೆ........   

neene beku - psycho

ಚಿತ್ರ: ಸೈಕೋ
ಹಾಡಿದವರು: ರಘು ದೀಕ್ಷಿತ್
ನಟರು: ಧನುಶ್, ಅನಿತಾ

ಈ ತನುವು ನಿನ್ನದೇ ನಿನ್ನಾಣೆ
ಈ ಮನವು ನಿನ್ನದೇ ನಿನ್ನಾಣೆ
ಈ ಒಲವು ನಿನ್ನದೇ ನಿನ್ನಾಣೆ
ಈ ಉಸಿರು ನಿನ್ನದೇ ನಿನ್ನಾಣೆ

ನೀನೇನೆ ಅಂದರು ನೀ ನನ್ನ ಕೊಂದರು
ಈ ಜೀವ ಹೋದರು ಪ್ರೇಮಿ ನೀನೆ
ನೀನೆ ಬೇಕು.....ನೀನೆ ಬೇಕು......
ನೀನಿಲ್ಲದೆ ಏನೀ ಬದುಕು
ನೀನೆ ಬೇಕು.....ನೀನೆ ಬೇಕು.....
ಈ ಬಾಳಿಗೆ ನೀನೆ ಬೆಳಕು

ಈ ತನುವು ನಿನ್ನದೇ ನನ್ನಾಣೆ
ಈ ಮನವು ನಿನ್ನದೇ ನನ್ನಾಣೆ
ಈ ಹೃದಯ ನಿನ್ನದೇ ನಿನ್ನಾಣೆ
ಈ ಜನುಮ ನಿನ್ನದೇ ನಿನ್ನಾಣೆ

ನೀ ಶಾಪ ಕೊಟ್ಟರು ನಾ ನಾಶವಾದರು
ನೂರಾರು ಜನ್ಮಕು ಪ್ರೇಮಿ ನೀನೆ
ನೀನೆ ಬೇಕು ನೀನೆ ಬೇಕು
ನೀನಿಲ್ಲದೆ ಏನೀ ಬದುಕು
ನೀನೆ ಬೇಕು ನೀನೆ ಬೇಕು
ನೀನಿಲ್ಲದೆ ಯಾಕಿ ಬದುಕು

ನಾ ನಿನ್ನನು ಮೆಚ್ಚಿದ ಕೂಡಲೆ ಈ ಪ್ರೇಮವು ಮೂಡಿದೆ
ನೀ ನನ್ನನು ಪ್ರೀತಿಯ ಮಾಡದೆ ಈ ಜೀವವು ನಿಲ್ಲದೆ
ಈ ನೆತ್ತರ ಕಣಕಣದೆ ನೀ ಬೆರೆತು ಹೋಗಿಹೆ
ನನ್ನಾಣೆಗೂ ಎಂದಿಗೂ ಪ್ರೇಮಿ ನೀನೆ
ನೀನೆ ಬೇಕು ನೀನೆ ಬೇಕು ನೀನಿಲ್ಲದೆ ಏನೀ ಬದುಕು
ನೀನೆ  ಬೇಕು ನೀನೆ ಬೇಕು ನೀನಿಲ್ಲದೆ ಏನೀ ಬದುಕು

beladingalanthe minu minuguta - psycho

ಚಿತ್ರ: ಸೈಕೋ
ಹಾಡಿದವರು: ಹರಿಚರಣ್, ಸೈಂಧವಿ
ನಟರು: ಧನುಶ್, ಅನಿತಾ

ಬೆಳದಿಂಗಳಂತೆ ಮಿನು ಮಿನುಗುತ ಬೆಳಕಾಗಿ ಬಂದಿರಲು ನೀನು
ಅನುರಾಗದಲ್ಲಿ ಅಲೆ ಅಲೆಯುತ ನಸು ನಾಚಿ ನಿಂದಿರಲು ನೀನು
ಮರುಳಾದೆ ದಿವ್ಯ ಸಖಿ ನಿನಗೆ ಪ್ರಣಾಮ
ಅಪರೂಪ ರೂಪಸಿಯೇ ನಿನಗೆ ಪ್ರಣಾಮ

ತಂಗಾಳಿಯಂತೆ ಸುಳಿ ಸುಳಿಯುತ ಆವರಿಸಿಕೊಂಡಿರಲು ನೀನು
ಕುಡಿನೋಟದಲ್ಲೇ ನುಡಿ ನುಡಿಯುತ ನೇವರಿಸಿ ನಿಂದಿರಲು ನೀನು
ಮನಸೋತೆ ಮೊಹಿತನೆ ನಿನಗೆ ಪ್ರಣಾಮ
ಹಿತವಾದ ಸ್ನೇಹಿತನೇ ನಿನಗೆ ಪ್ರಣಾಮ

ಕನಸಲ್ಲೂ ಹುಚ್ಚನಂತೆ ನಿನಗಾಗಿ ಓಡುವೆ
ಮೈಮರೆತು ಸಂತೆಯಲ್ಲೂ ನಿನ್ನನ್ನೇ ಕೂಗುವೆ
ಒರಗಿರಲು ನಿನ್ನ ಮಡಿಲಲಿ 
ಕಾಗದದ ದೋಣಿಯಲ್ಲಿ ಕಡಲನ್ನು ದಾಟುವೆ
ಗಂಧರ್ವ ಸೀಮೆಯಲ್ಲಿ ಉಯ್ಯಾಲೆ ಝೀಕುವೆ
ನೀನಿರಲು ನನ್ನ ಕತೆಯಲಿ
ನಾನಿರುವೆ ನಿನ್ನ ಜೊತೆಯಲಿ.......

ಕಣ್ತುಂಬ ನಿನ್ನ ಅಂದ ಸವಿಯುತ್ತ ಕೂರಲೆ
ಕಂಡಿದ್ದು ನಿಜವೇ ಅಂತ ಮುತ್ತಿಟ್ಟು ನೋಡಲೇ
ನೀನಿರಲು ನನ್ನ ತೋಳಲಿ
ನಾನೆಂದೂ ನೋಡದಂತ ಬೆಳಕೊಂದು ಮೂಡಿದೆ
ನಿನಗಷ್ಟೆ ಕೇಳುವಂತೆ ಮನಸಿಂದು ಹಾಡಿದೆ
ಕೈಯಿರಲು ನಿನ್ನ ಕೈಯಲಿ
ನಾನಿರುವೆ ನಿನ್ನ ಬಾಳಲಿ.....  

koorakukkralli kere - nenapirali

ಚಿತ್ರ: ನೆನಪಿರಲಿ
ಹಾಡಿದವರು: ಎಸ್ ಪಿ ಬಾಲು
ನಟರು: ಪ್ರೇಮ್, ವಿದ್ಯಾ

ಅರೆ ಯಾರ್ರಿ ಹೆದರ್ಕೊಳ್ಳೋರು ಬೆದರ್ಕೊಳ್ಳೋರು
ಪೇಚಾಡೋರು ಪರದಾಡೋರು
ಮರಗಳ್ ಮರೆನಲ್ ಮಾತಾಡೋರು
morning show ನಲ್ ಪಿಸುಗುಟ್ಟೋರು
ಮೈಸೂರಂತ ಜಿಲ್ಲೇಲಿದ್ದು ಕಣ್ಣಿಗ್ ಬೇಕಾದ್ ನೋಟ ಇದ್ದು
ಹಳೆ ರಾಜರು ಅಪ್ಪಣೆ ಇದ್ದು
ಪ್ರೀತಿ ಮಾಡೋಕ್ ಜಾಗ್ಗಳಿದ್ದು
ಕದ್ದು ಮುಚ್ಚಿ ಓಡಾಡ್ತಿರಲ್ರಿ ಬನ್ರಿ ನೋಡ್ರಿ ನಾನ್ ಲವ್ ಮಾಡೋ ಸ್ಟೈಲ್ ಸ್ವಲ್ಪ ಕಲೀರಿ

ಕೂರಕ್ ಕುಕ್ಕ್ರಳ್ಳಿ ಕೆರೆ..... ವಾ ವಾ
ತೇಲ  ಕಾರಂಜಿ ಕೆರೆ .....ವಾ ವಾ
ಕೂರಕ್ ಕುಕ್ಕ್ರಳ್ಳಿ ಕೆರೆ ತೇಲ ಕಾರಂಜಿ ಕೆರೆ ಲವ್ವಿಗೆ ಈ ಲವ್ವಿಗೆ
ಚಾಮುಂಡಿ ಬೆಟ್ಟ ಇದೆ ಕನ್ನಂಬಾಡಿ ಕಟ್ಟೆ ಇದೆ ಲವ್ವಿಗೆ ನಮ್ ಲವ್ವಿಗೆ
ಈ ಭಯ ಬಿಸಾಕಿ......ಲವ್ ಮಾಡಿ ಲವ್ ಮಾಡಿ ಲವ್ ಮಾಡಿ
ಈ ದಿಗಿಲ್ ದಬಾಕಿ.....ಲವ್ ಮಾಡಿ ಲವ್ ಮಾಡಿ ಲವ್ ಮಾಡಿ

ಬಲ್ಮುರಿಲಿ ಪೂಜೆ ನೆಪ....ವಾ ವಾ
ಎಡ್ಮುರಿಲಿ ಜಪ ತಪ.....ವಾ ವಾ
ಬಲ್ಮುರಿಲಿ ಪೂಜೆ ನೆಪ ಎಡ್ಮುರಿಲಿ ಜಪ ತಪ ಲವ್ವಿಗೆ ನಿರ್ವಿಘ್ನ ಲವ್ವಿಗೆ
ನಾರ್ತಿನಲ್ಲಿ ಶ್ರೀರಂಗ್ ಪಟ್ನ ಸೌತಿನಲ್ಲಿ ನಂಜನ್ಗೂಡು ಪೂಜೆಗೆ ಲವ್ ಪೂಜೆಗೆ
ಈ ಭಯ ಬಿಸಾಕಿ......ಲವ್ ಮಾಡಿ ಲವ್ ಮಾಡಿ ಲವ್ ಮಾಡಿ
ಈ ದಿಗಿಲ್ ದಬಾಕಿ.....ಲವ್ ಮಾಡಿ ಲವ್ ಮಾಡಿ ಲವ್ ಮಾಡಿ

ಗಲಾಟೆನೇ ಇಲ್ಲ ಬನ್ರಿ ಗಂಗೋತ್ರಿಯಲ್ಲಿ
ಮನಸು ಬಿಚ್ ಕೊಳ್ರಿ ಮರ ಮರ ಮರದ ಮರೇಲಿ
ಅರಮನೇಲಿ ಅಡ್ಡಾಡುತ ಮೂಡು ತೊಗೊಳ್ರಿ
ರಾಜನ್ ಥರಾನೆ ಲವ್ವಲ್ ದರ್ಬಾರ್ ಮಾಡ್ಬಿಡ್ರಿ

ಎ ರಂಗನತಿಟ್ಟು ನೋಡಿಬಿಟ್ಟು ಹಾಡ್ರಿ ಮುತ್ತಿಟ್ಟು
ಮುಡುಕು ತೊರೇಲ್ ಮನಸು ಕೊಡ್ರಿ ಕಣ್ಣಲ್ ಕಣ್ಣಿಟ್ಟು
ಕಾಳಿದಾಸನೆ ಇಲ್ ರಸ್ತೆ ಆಗವ್ನೆ
ಪ್ರೀತಿ ಮಾಡೋರ್ಗೆ ಸರಿ ದಾರಿ ತೋರ್ ತಾನೇ

ಕೆ ಆರ್ ಎಸ್ ಲಿ ಕೆಫೆ ಮಾಡಿ ಬ್ಲಫ್ಫಿನಲ್ಲಿ ಬಫೆ ಮಾಡಿ ಲವ್ವಿಗೆ ರಿಚ್ ಲವ್ವಿಗೆ
ದುಡ್ಡಿದ್ರೆ ಲಲಿತ ಮಹಲ್ ಇಲ್ದಿದ್ರೆ ಒಂಟಿ ಕೊಪ್ಪಲ್ ಲವ್ವಿಗೆ ಈ ಲವ್ವಿಗೆ
ಈ ಭಯ.............

ಜಾತಿ ಕೆಟ್ರು ಸುಖ ಪಡ್ಬೇಕ್ ಪ್ರೀತಿ ಮಾಡಮ್ಮ
ನಾಳೆ ಆಗೋದು ಇಂದೇ ಆಗೇ ಹೋಗ್ಲಮ್ಮ
ಕದ್ದು ಮುಚ್ಚಿ ಪ್ರೀತಿ ಮಾಡೋ ಕಳ್ಳ ಲವ್ವಮ್ಮ
ಸತ್ಯ ಹೇಳಮ್ಮ ನಿಜವಾದ್ ಪ್ರೀತಿ ಮಾಡಮ್ಮ

ಜಾತಿ ಸುಡೋ ಮಂತ್ರ ಕಿಡಿ ಪ್ರೀತಿ ಕಣಮ್ಮ
ಮನುಜ ಮತ ವಿಶ್ವ ಪಥ ಅಂತ ಹೇಳಮ್ಮ
ತೀರ್ಥ ಹಳ್ಳಿಲಿ ಕುವೆಂಪು ಹುಟ್ಟಿದ್ರು
ವಿಶ್ವ ಪ್ರೇಮನ ಮೈಸೂರ್ಗೆ ತಂದ್ಕೊಟ್ರು

ಮೈಸೂರು ಕೂಲಾಗಿದೆ ಬೃಂದಾವನ ಗ್ರೀನಾಗಿದೆ ಲವ್ವಿಗೆ ಸ್ವೀಟ್ ಲವ್ವಿಗೆ
ನರಸಿಂಹಸ್ವಾಮಿ ಪದ್ಯ ಇದೆ ಅನಂತ್ ಸ್ವಾಮಿ ವಾದ್ಯ ಇದೆ ಸಾಂಗಿಗೆ ಲವ್ ಸಾಂಗಿಗೆ
ಈ ಭಯ ಬಿಸಾಕಿ.........

draupadi - nenapirali

ಚಿತ್ರ: ನೆನಪಿರಲಿ
ಹಾಡಿದವರು: ಸೌಮ್ಯ ರಾವ್, ಅನೂಪ್, ಅನುಪಮ
ನಟರು: ಪ್ರೇಮ್, ವಿದ್ಯಾ, ನವೀನ್ ಕೃಷ್ಣ, ವರ್ಷ

ದ್ರೌಪದಿ ದ್ರೌಪದಿ ಎಂದಿನದೆ ಈ ಕದನ
ಷಟ್ಪದಿ ಚೌಪದಿ ಯಾವುದರಲೀ ಈ ಕವನ  
ಮನಸೆ ಮಹಾ ಮರ್ಕಟ
ಆಯ್ಕೆ ಮಹಾ ಸಂಕಟ
ಚಿತ್ತ ಮಹಾ ಚಂಚಲ
ಆಸೆ ತಿಮಿಂಗಿಲ 

ಮಳೆಗೆ ಮನೆ ಮಣ್ಣಿನೊಳಗೆ
ಮಳೆ ಮನಸು ಇದೆ ಗಾಳಿಯೊಳಗೆ
ಸುಖದ ಬಹುಮಾನ ಓ ಚಿತ್ತ ಕೊಡುವಂತ
ಪಂಚ ಭೂತಗಳ ಜರಿವುದೆಂತೋ
ಪೂಜೆಗೆ ಹೂಗಳನು ಕಟ್ಟೋ ಕೈಗಳಿಗೆ
ಗಂಧ ಸೋಕಿದರೆ ಜರಿವುದೆಂತೋ

ಮನಸೆ ಮಹಾ ಮರ್ಕಟ
ಸನಿಹ ಮಹಾ ಪ್ರೇರಕ
ಚಿತ್ತ ಮಹಾ ಚಂಚಲ
ಮನ್ಮಥ ಸಮಯ ಸಾಧಕ

ಇಂದು ಗೆಲ್ಲು ಇಂದ್ರಿಯಗಳ
ಕೊಲ್ಲು ಅರಿಷಡ್ವರ್ಗಗಳ
ಎಳೆಯ ಬಿಸಿಲೊಳಗೆ ಕುಣಿವ ತನುವೊಳಗೆ
ಕಹಿಯ ವಿಷಘಳಿಗೆ ತರುವುದೆಂತೋ
ಕಣ್ಣು ಮುಚ್ಚಿದರು ಕಾಣೋ ಸ್ವರ್ಗವನು
ಸವಿಯೋ ಹೆಣ್ಣೆದೆಯ ಜರಿವುದೆಂತೋ

ದ್ರೌಪದಿ........

ಬಯಕೆ ಬೆಂಕಿ ಬಲೆಯಾಗಿದೆ
ಭ್ರಮರ ನಿನ್ನ ನೋಡಬೇಕಿದೆ
ಹೂವು ಹಾರಲಾರದು ಹಾಡಿ ಕೂಗಲಾರದು
ಅರಳದಿರಲಾರದು ಬೆರೆವುದೆಂತೋ
ಪ್ರಥಮ ಅನುಭವದ ಮಧುರ ನೆನಪುಗಳ
ಸುರಿದು ಹೋದವನ ಮರೆವುದೆಂತೋ

ಮನಸೆ ಮಹಾ ಮರ್ಕಟ
ವಿರಹ ಮಹಾ ದುಶ್ಚಟ
ಚಿತ್ತ ಮಹಾ ಚಂಚಲ
ತಿಳಿಯೋ ಹೆಣ್ಣ ಹಂಬಲ

ದ್ರೌಪದಿ....... 

ajanta ellora - nenapirali (amazing picturisation)

ಚಿತ್ರ: ನೆನಪಿರಲಿ
ಹಾಡಿದವರು: ವಿಜಯ್ ಏಸುದಾಸ್
ನಟರು: ಪ್ರೇಮ್, ವರ್ಷ

ಅಜಂತ ಎಲ್ಲೋರ ಚಿತ್ತಾರ ಶಿಲೆಯಲ್ಲಿ
ಅದೆಲ್ಲ ನಾ ಕಂಡೆ ಅದೆಲ್ಲ ನಾ ಕಂಡೆ
ಈ ತಾಜಾ ತರುಣಿಯಲ್ಲಿ ಈ ತಾಜಾ ತನುವಿನಲ್ಲಿ

ಬೇಲೂರ ಬಾಲೇರ ಭಾರ ಕಂಬಗಳಲ್ಲಿ
ಚೆಲುವಿನ ಭಾರಾನೋ ಚೆಲುವಿನ ಭಾರಾನೋ
ಈ ತಾಜಾ ತರುಣಿಯಲ್ಲಿ ಸೊಂಪಾದ ಪಾದಗಳಲ್ಲಿ

ಮಂದವಾಗಿ ಬಳುಕುವಂಥ ನಾರಿ ಇವಳ
ಅಂದ ನೋಡ ನಿಂತಾಗ ಚಂದ ನೋಡ ನಿಂತಾಗ
ಯಾರೋ ನೀನು ಎಂದು ಕೇಳುತಾವೆ
ಇವಳ ಪೊಗರಿನ ಹೃದಯ ಪಾಲಕಿಯರು
ನಾಟ್ಯದಂತೆ ನಡೆಯುವಾಗ ನಡೆಯುವಾಗ
ಅತ್ತಲಾಡಿ ಇತ್ತಲಾಡಿ ಇತ್ತಲಾಡಿ ಅತ್ತಲಾಡಿ
ಕೀಲು ಕೊಟ್ಟ ಕುದುರೆಯಂತಾಯಿತಲ್ಲ
ನನ್ನೀ ಸುಂದರಿ ಸೊಂಟ ಪೀಠ ಸೊಂಟ ಪೀಠ

ಸೊಗ್ಗುಂಟು....ಸಿಗ್ಗುಂಟು
ಸೊಗ್ಗುಂಟು ಸಿಗ್ಗುಂಟು ಈ ಸಜೀವ ಬೊಂಬೆಯಲ್ಲಿ
ಅಣುಕುಂಟು ದೊಣುಕುಂಟು
ಈ ತಾಜಾ ತರುಣಿಯಲ್ಲಿ ಈ ನಾರಿ ನಡುವಿನಲ್ಲಿ  

ಕಣ್ಣಿನಲ್ಲೇ ಕಣ್ಣನಿಟ್ಟು ನೋಡಿದಾಗ
ಬೆದರುತಾಳೆ ಬೆದರುತಾಳೆ ಬೆದರುಗೊಂಬೆ ಆಗುತಾಳೆ
ಮಾತು ಬೇಡ ಮುತ್ತು ನೀಡು ಮುತ್ತು ನೀಡು
ಎಂದರಿವಳು ಅದರುತಾಳೆ ಅಂತದುಂಟ ಅನ್ನತಾಳೆ
ಅಪ್ಪಿಕೊಂಡರೆ ಬಳ್ಳಿಯಂತೆ ಬಳ್ಳಿಯಂತೆ
ಮೈಯನೆಲ್ಲಾ ಹಬ್ಬುತಾಳೆ ಉಸಿರುಗಟ್ಟಿ ಉಬ್ಬುತಾಳೆ
ಉಸಿರಿನಲ್ಲಿ ಮಾತನಾಡಿ ಮಾತನಾಡಿ
ತುಟಿಯ ತಂಪು ಮಾಡಿದಾಗ ತಣಿಯುತಾಳೆ ಮಣಿಯುತಾಳೆ

ಎಲ್ಲಕ್ಕೂ.....ಆಶ್ಚರ್ಯ.....
ಎಲ್ಲಕ್ಕೂ ಆಶ್ಚರ್ಯ ಪಡುತಾಳೆ ಕ್ಷಣದಲ್ಲಿ
ಆಶ್ಚರ್ಯ ತುಳುಕೈತೆ ಆಶ್ಚರ್ಯ ತುಳುಕೈತೆ
ಈ ತಾಜಾ ತರುಣಿಯಲ್ಲಿ ಈ ಕಾರಂಜಿ ಕಣ್ಣಿನಲ್ಲಿ    

ನಾನೊಂದು titanic ಬೋಟಾದೆ ಸುಖದಲ್ಲಿ
ಒಡೆದೋದೆ ಮುಳುಗೋದೆ ಒಡೆದೋದೆ ಮುಳುಗೋದೆ
ಈ ತಾಜಾ ತರುಣಿಯಲ್ಲಿ ಈ ಕನ್ಯಾ ಕಡಲಿನಲ್ಲಿ

ಲ ಲ ಲ ......

he beLadingale - nenapirali

ಚಿತ್ರ: ನೆನಪಿರಲಿ
ಹಾಡಿದವರು: hemanth, divya raaghavan
ನಟರು: ಪ್ರೇಮ್, ವರ್ಷ

ಹೇ ಬೆಳದಿಂಗಳೇ ಹಿಂಬಾಲಿಸದಿರು
ಪ್ರೀತಿಯ ಪಯಣಕೆ ಒತ್ತಾಯಿಸದಿರು

ಏನು ಕಾರಣ ಕೇಳಬಹುದ - ನನ್ನ ಮನಸಿಗೆ ಬಿಡುವಿಲ್ಲ
ಹೃದಯವಂತೂ ಇದೆಯಲ್ಲ - ಅದಕೆ ಪ್ರೀತಿಸೋ ಬಲವಿಲ್ಲ
ಪ್ರೀತಿಗೆ ಒಪ್ಪಿತ್ತು ನಿಜ ತಾನೇ - yes yes yes!! I am in love.....
ಮಾತಿಗೆ ತಪ್ಪೋದು ದ್ರೋಹ ತಾನೇ - yes yes yes!! I know that

ನಾವಾಗಲಿ ನೀವಾಗಲಿ ಗೆಳೆಯರಾಗಲಿ ಬಳಗವಾಗಲಿ
ಗುರುಗಳಾಗಲಿ ಋಷಿಗಳಾಗಲಿ ದೇವರಾಗಲಿ ದಿಂಡರಾಗಲಿ
ತಲೆತೂರಿಸೋ ಹಾಗಿಲ್ಲ..... because........

ಇದು ಹೃದಯಗಳ ವಿಷಯ, ಈ ವಿಷಯ ವಿಷ ವಿಷಯ

ಹೇ ಬೆಳದಿಂಗಳೇ ಹೃದಯ ಸುಡದಿರು
ನಿನಗೆ ನೀನೆ ಮೋಸ ಹೋಗದಿರು
ಪ್ರೀತಿಯಲ್ಲಿ ಕ್ಷಮೆ ಇರಲಿ - ಕ್ಷಮಿಸಿ ಏನು ಸಾಧಿಸಲಿ?
ನನ್ನ ನೆನಪೆ ಬರದಿರಲಿ - ಅದರ ಬದಲು ಸಾವಿರಲಿ
ಪ್ರೀತಿಯ ದ್ರೋಹಿ ನಾನೀಗ - hey hey hey hey you fool
ತ್ಯಾಗದ ಸ್ವಾರ್ಥಿ ನಾನೀಗ - hey hey hey you fraud

ನಾವಾಗಲಿ ನೀವಾಗಲಿ ಗೆಳೆಯರಾಗಲಿ ಬಳಗವಾಗಲಿ

ಗುರುಗಳಾಗಲಿ ಋಷಿಗಳಾಗಲಿ ದೇವರಾಗಲಿ ದಿಂಡರಾಗಲಿ
ತಲೆತೂರಿಸೋ ಹಾಗಿಲ್ಲ..... because........

ಇದು ಹೃದಯಗಳ ವಿಷಯ, ಈ ವಿಷಯ ವಿಷ ವಿಷಯ
 

nenapirali - nenapirali

ಚಿತ್ರ: ನೆನಪಿರಲಿ
ಹಾಡಿದವರು: ಚಿತ್ರ, ಚೇತನ್
ನಟರು: ಪ್ರೇಮ್, ವರ್ಷ, ವಿದ್ಯಾ

ಹೇ ಜೀವಗಳ ಒಲವೆ
ಹೇ ಭಾವಗಳ ವನವೇ
ನೀವಿರದೆ ನಾನಿಲ್ಲ
ನಾನಿರದೇ ನೀವಿಲ್ಲ
ಪ್ರೀತಿ ನನ್ನ ಹೆಸರು....ನೆನಪಿರಲಿ ನೆನಪಿರಲಿ....

ಒಲವು ಒಂಟಿಯಲ್ಲ ಒಂಟಿ ಸೂರ್ಯನಲ್ಲ
ಒಂಟಿ ರೆಕ್ಕೆಯಲ್ಲಿ ಹಾರಬಲ್ಲ ಹಕ್ಕಿಯಲ್ಲ ಒಂಟಿ ಪ್ರೇಮಿಯಲ್ಲ
ಹೂವು ದುಂಬಿ ಹಾಡು ಅದು..... ನೆನಪಿರಲಿ ನೆನಪಿರಲಿ.....

ಪ್ರೀತಿ ಪಾಠವಲ್ಲ, ಪ್ರಣಯದೂಟವಲ್ಲ
ಮಧುರ ಪದಗಳ ಪ್ರಾಸಬದ್ಧ ಹಾಡು ಅಲ್ಲ ಬರಿ ಮುತ್ತು ಅಲ್ಲ
ಕಾಣಿಸದ ಕಾವ್ಯ ಅದು....ನೆನಪಿರಲಿ ನೆನಪಿರಲಿ.....

ಪ್ರಾಯದ ಮೇಲೆ ದಿಬ್ಬಣ ಹೊರಟು ಜೀವನವ ಸುತ್ತಿ
ಕಹಿಯನ್ನೆಲ್ಲಾ ಸವಿಯುವುದನ್ನು ಕಲಿಸುವುದೇ ಪ್ರೀತಿ
ಮೋರೆಗಳನ್ನು ಕೋರೆಗಳನ್ನು ಮನ್ನಿಸಿ ಮುದ್ದಿಸಿ
ಎಲ್ಲ ಸುಂದರವೆಂದು ನೋಡೋ ಒಳಗನ್ಣೆ ಪ್ರೀತಿ
ನಿದಿರೆಯಾದರು ಅಲ್ಲಿಲ್ಲಿಲ್ಲ ಪ್ರೀತಿ ಇಲ್ಲದ ಅಣುಕಣವಿಲ್ಲ
ಪ್ರೀತಿ ಪಾಠವಲ್ಲ ಪ್ರಣಯದೂಟವಲ್ಲ.......

love is soul but not one
love is one but not alone
love is God but not a stone

ಹತ್ತಿರದಲ್ಲಿ ನಿಂತರೆ ಅಲ್ಲಿ ಬಳ್ಳಿಗೆ ಸಹವಾಸ
ರೆಪ್ಪೆಯೆ ತೆರೆದ ಕಣ್ಣುಗಳೆಂದೂ ಮಾಡವು ಉಪವಾಸ
ಬಯಸುವುದನ್ನೇ ತಪ್ಪು ಎಂದರೆ ಮನಸಿಗೆ ಅವಮಾನ
ಕ್ಷಣಿಕ ಸುಖಕ್ಕೆ ಸೋಲದಿದ್ದರೆ ಮೋಹಕೂ ಅಪಮಾನ :-)))
ಸ್ನೇಹಕ್ಕೆ ಎಂದು ಪ್ರೀತಿಯೇ ಗೆಳೆಯ
ಪ್ರೀತಿಗೆ ಎಂದು ಸತ್ಯವೇ ಹೃದಯ

ಒಲವು ಒಂಟಿಯಲ್ಲ ಒಂಟಿ ಸೂರ್ಯನಲ್ಲ......

I am love, love is life
I am love, love is feel
I am love, love is beauty

ನಾನು ಮೋಹವಲ್ಲ ವ್ಯಾಮೋಹವಲ್ಲ
ಸುಖದ ಬಲೆಯಲಿ ಅಲೆಯುವ ಅಶ್ವವಲ್ಲ ಮಾಯಾ ಜಿಂಕೆಯಲ್ಲ
ಆಸೆಯೆಂದು ಪ್ರೀತಿಯಲ್ಲ

love is soul but not one

love is one but not alone
love is God but not a stone

Thursday, October 15, 2009

baa baaro baaro raNadheera - raNadheera

ಚಿತ್ರ: ರಣಧೀರ
ಹಾಡಿದವರು: ಎಸ್ ಪಿ ಬಾಲು, ಎಸ್ ಜಾನಕಿ
ನಟರು: ರವಿಚಂದ್ರನ್, ಖುಶ್ಬೂ

ಸ ರಿ ಗ ಮ ಪ....

ಬಾ ಬಾರೋ ಬಾರೋ ರಣಧೀರ
ಬಾ ಬಾರೋ ಪ್ರೀತಿಯ ಸರದಾರ
ಬಾ ಎಂದರೆ ಬಂದಿಳಿ ಯುವಶೂರ
ನೀ ಬಂದರೆ ದಿಗ್ವಿಜಯದ ಹಾರ

ಓ ಹೂವಂತೆ ಪ್ರೀತಿ ಹೂವಂತೆ
ನೋಡಲೇನು ಇದು ಹೂವು ಬಿರಿದರೆ ಕೊಲುವ ಹಾವು
ಇತಿಹಾಸ ಇದರ ಹವ್ಯಾಸ
ಅಗ್ನಿಯೊಡನೆ ಸಹವಾಸ ಸಾವಿನ ಜೊತೆಗೆ ಸರಸ
ನಲಿದು ನಲಿಸುತ್ತಾ ತಂಪನೆರೆಯುತ್ತ
ಜಗವ ಕಾಯುತ್ತಲಿದೆ ಪ್ರೀತಿ
ಸುತ್ತಿ ನಮ ಸುತ್ತ ಎಲ್ಲ ಕುಣಿಸುತ್ತಾ
ತಾನು ನೋಡುತ್ತಲಿದೆ ಪ್ರೀತಿ
ಎಲ್ಲ ಅದರ ಕೈಲಿ ನಾವೆಲ್ಲಾ ನೆಪವು ಇಲ್ಲಿ
ನ್ಯಾಯ ಕೇಳುವ ಹೇಳಿ ನಡೆಸುವ ಶಕ್ತಿಯೊಂದೇ ಪ್ರೀತಿ
ಬಾ ಎಂದರೆ ಬಂದಿಳಿ ಯುವಪ್ರೀತಿ
ಆ ಜೀವಿಯ ದಿಗ್ವಿಜಯದ ರೀತಿ  

ಹೇ....ಯೌವನವೇ ನೀನು ಭೀಕರವೇ
ನೀನು ಇರುವ ದೆಸೆ ಇಂದ ಈ ಘೋರ ನೋಡು ಕಣ್ಣಿಂದ
ಹೇ....ಜೀವನವೇ ನಿನಗೆ ಸಮ್ಮತವೇ
ಬಯಸಿದ ಸ್ವರ್ಗ ಎಲ್ಲಿ ನೀ ನಡೆಸಿದೆ ನರಕದಲ್ಲಿ
ಕಾಮ ಕ್ರೋಧ ಮದ ಲೋಬ ಮೋಹ ಮಾತ್ಸರ್ಯ ತುಂಬಿರುವ ಜಗದಲ್ಲಿ
ಜೀವ ಕಾರಣದ ಬಾಳ ತೋರಣದ ಪ್ರೀತಿಗೇನು ಬೆಲೆ ಸಿಗದಿಲ್ಲಿ
ಕರುಣೆಯಿರದ ವಿಧಿಯೇ ನಿನ್ನ ನೀತಿ ಎಲ್ಲಿ ಸರಿಯೇ
ಹಣೆಯ ಬರಹವಿದು ನಿಜವೇ ಇರಬಹುದು ಸಾವೇ ನಿನ್ನ ಗುರಿಯೇ.....

ಬಾ ಬಾರೋ ಬಾರೋ ರಣಧೀರ.....

Wednesday, October 14, 2009

tangaaLiyalli naanu - januma janumada anubandha

ಚಿತ್ರ: ಜನುಮ ಜನುಮದ ಅನುಬಂಧ
ಹಾಡಿದವರು: ಎಸ್ ಜಾನಕಿ
ನಟರು: ಅನಂತ್ ನಾಗ್, ಆರತಿ

ಓ......

ತಂಗಾಳಿಯಲ್ಲಿ ನಾನು ತೇಲಿ ಬಂದೆ
ನಿನ್ನನ್ನು ಪ್ರೀತಿಯಿಂದ ಸೇರಲೆಂದೆ
ಓ ಇನಿಯ.........ಓ ಇನಿಯ......
ನನ್ನನ್ನು ಸೇರಲು ಬಾ ಬಾ
ನನ್ನನ್ನು ಸೇರಲು.....

ನಿನ್ನ ಎಲ್ಲೂ ಕಾಣದೆ ಹೋಗಿ
ನನ್ನ ಜೀವ ಕೂಗಿ ಕೂಗಿ
ಏಕಾಂಗಿಯಾಗಿ ನಾನು ನೊಂದು ಹೋದೆ
ಹೀಗೇಕೆ ದೂರ ಓಡಿದೆ
ಓ ಇನಿಯ......ನನ್ನನ್ನು ಸೇರಲು ಬಾ ಬಾ  
ನನ್ನನ್ನು ಸೇರಲು.....

ಓ....

ಏತಕೆ ಹೀಗೆ ಅಲೆಯುತಲಿರುವೆ
ಯಾರನು ಹೀಗೆ ಹುಡುಕುತಲಿರುವೆ
ಕಣ್ಣಲ್ಲಿ ನನ್ನ ಬಿಂಬ ಇಲ್ಲವೇನು
ನೀ ಕಾಣೆ ಏನು ನನ್ನನ್ನು
ಓ ಇನಿಯ.....ನನ್ನನ್ನು ಸೇರಲು ಬಾ ಬಾ
ನನ್ನನ್ನು ಸೇರಲು....

ellaaru maaDuvudu hottegaagi

ರಚನೆ: ಕನಕ ದಾಸರು
ಗಾಯನ: ರಾಜ್ ಕುಮಾರ್

ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಗೇಣು ಬಟ್ಟೆಗಾಗಿ 
ಬಿಲ್ಲುಗಳ ಕುಟ್ಟಿಕೊಂಡು ಬಿದುರುಗಳ ಹೊತ್ತುಕೊಂಡು ಕೂಲಿಗಳ ಮಾಡುವುದು ಹೊಟ್ಟೆಗಾಗಿ
ನಾಲ್ಕು ವೇದ ಪುರಾಣ ಪಂಚಾಗ ಹೇಳಿಕೊಂಡು ಕಾಲ ಕಳೆಯುವುದೆಲ್ಲ ಹೊಟ್ಟೆಗಾಗಿ....

ಬಡಿದು ಬಡಿದು ಕಬ್ಬಿಣವ ಕಾಸಿ ತೂಪಾಕಿ ಮಾಡಿ ಹೊಡೆವ ಗುಂಡು ಮಾಡುವುದು ಹೊಟ್ಟೆಗಾಗಿ
ಚಂಡ ಭಂಡರೆಲ್ಲ ಮುಂದೆ ಕತ್ತಿ ಹರಿಗೆಯ ಪಿಡಿದು ಖಂಡ ತುಂಡ ಮಾಡುವುದು ಹೊಟ್ಟೆಗಾಗಿ

ದೊಡ್ಡ ದೊಡ್ಡ ಕುದುರೆ ಏರಿ ನೆಜೆ ಹೊತ್ತು ರಾಹುತನಾಗಿ ಹೊಡೆದಾಡಿ ಸಾಯುವುದು ಹೊಟ್ಟೆಗಾಗಿ
ಕುಂಟೆ ಪೂರಿಗೆಯಿಂದ ಹೆಣತೆ ಮಣ್ಣ ಹದ ಮಾಡಿ ರಂಟೆ ಹೊಡೆದು ಬೆಳೆಸುವುದು ಹೊಟ್ಟೆಗಾಗಿ

ಕೆಟ್ಟತನದಿಂದ ಕಳ್ಳತನವನ್ನೇ ಮಾಡಿ ಕಟ್ಟಿ ಹೊಡಿಸಿಕೊಳ್ಳುವುದು ಹೊಟ್ಟೆಗಾಗಿ
ಸನ್ಯಾಸಿ ಜಂಗಮ ಜೋಗಿ ಜಟ್ಟಿ ಮುಂಡ ಬೈರಾಗಿ ನಾನಾ ವೇಷ ಬೊಂಬುವುದು ಹೊಟ್ಟೆಗಾಗಿ
ಉನ್ನತ ಕಾಗಿನೆಲೆ ಆದಿಕೇಶವನ ಅನುದಿನ ನೆನೆವುದು ಭಕ್ತಿಗಾಗಿ ಪರ ಮುಕ್ತಿಗಾಗಿ....

ನಾವೆಲ್ಲಾರು ಮಾಡುವುದು    

ravivarmana - sose tanda soubhagya

ಚಿತ್ರ: ಸೊಸೆ ತಂದ ಸೌಭಾಗ್ಯ
ಹಾಡಿದವರು: ಪಿ ಬಿ ಶ್ರೀನಿವಾಸ್
ನಟರು: ವಿಷ್ಣುವರ್ಧನ್, ಮಂಜುಳ, ರಾಜೇಶ್, ವಿಜಯ ಲಲಿತ

ರವಿವರ್ಮನ ಕುಂಚದ ಕಲೆ ಭಲೆ ಸಾಕಾರವು
ಕವಿ ಕಲ್ಪನೆ ಕಾಣುವ ಚೆಲುವಿನ ಜಾಲವೋ 

ಉಯ್ಯಾಲೆಯ ಆಡಿ ನಲಿವ ರೂಪಸಿ
ಸುರಲೋಕದಿಂದ ಇಳಿದು ಬಂದ ನಿಜ ಊರ್ವಶಿ....ಆ.....
ನನ್ನೊಲವಿನ ಪ್ರೇಯಸಿ.....

ಹೂರಾಶಿಯ ನಡುವೆ ನಗುವ ಕೋಮಲೆ
ಕವಿ ಕಾಳಿದಾಸ ಕಾವ್ಯರಾಣಿ ಶಾಕುಂತಲೆ.....ಆ.....
ಚಿರಯೌವನ ನಿನ್ನಲೆ......

ellinda aarambhavo - appu

ಚಿತ್ರ: ಅಪ್ಪು
ಹಾಡಿದವರು: ಉದಿತ್ ನಾರಾಯಣ್, ಚಿತ್ರ
ನಟರು: ಪುನೀತ್, ರಕ್ಷಿತ

ಎಲ್ಲಿಂದ ಆರಂಭವೋ ಎಲ್ಲಿಂದ ಆನಂದವೋ
ಅನುರಾಗವೋ ಅನುಬಂಧವೋ ಈ ಪ್ರೀತಿಗೆ ಸೋತೆನಾ.....i love you....hey i love you

ಬಾ ಎಂದಿತು ಈ ಯೌವನ, ಮಾತಾಡಲು ರೋಮಾಂಚನ
ರೋಮಾಂಚನ ಮಾತಾಡಲು, ಮೈಯೆಲ್ಲವೂ ಆಲಾಪನ
ಈ ಕಲರವ ಈ ಅನುಭವ ಹೇಗಾಯ್ತೋ ಏನೋ ಕಾಣೆ ನಾ....

ಬೇಲೂರಿನ ಆ ಗೊಂಬೆಗೂ, ಮಳೆ ಸುರಿಸುವ ಆಗುಂಬೆಗು
ನಡುವಲ್ಲಿದೆ ಈ ಪ್ರೇಮವು, ಪ್ರತಿ ನಿಮಿಷವು ಹೊಸ ರಾಗವು
ಈ ಸಂಗಮ ಈ ಸಂಭ್ರಮ ಹೇಗಾಯ್ತೋ ಏನೋ ಕಾಣೆ ನಾ.......

Tuesday, October 13, 2009

ee paapi duniya - duniya

ಚಿತ್ರ: ದುನಿಯ

ಈ ಪಾಪಿ ದುನಿಯ ಪ್ರೀತಿ ಕಲಿಸಿ ಉಳಿಸೋದು ಕಲಿಸಿಲ್ಲ
ಓ ಗೆಳತಿ ನೀನುನೂ ಉಳಿದಿಲ್ಲ
 ಜೊತೇಲಿ ನಡೆದ ಮಾತೆ ಇರದ ಮುಸ್ಸಂಜೆ ಮರೆತಿಲ್ಲ
ಓ ಹುಡುಗಿ ಆ ನೆನಪು ಅಳಿಯೊಲ್ಲ
ಮುಂಜಾನೆವರೆಗೂ ಸೋನೆ ಸುರಿದ ದಿನಾಂಕ ಗುರುತಿಡುವೆ
ಮಳೇಲಿ ನೆನೆದದ್ದು ನೆನಪಿಡುವೆ
ವಿಶ್ವಾಸವಿರದ ದ್ರೋಹಿ ದುನಿಯ ನೀನುನೂ ಹಾಗಿನ
ಓ ಗೆಳತಿ ನಿನ್ನಲ್ಲು ವಿಷವೇನ   
  

nodayya kwaate lingave - duniya

ಚಿತ್ರ: ದುನಿಯಾ
ಗಾಯನ: ಎಂ ಡಿ ಪಲ್ಲವಿ
ನಟರು: ವಿಜಯ್, ರಶ್ಮಿ

ಅಮ್ಮಣ್ಣಿ ಅವ್ನತ್ರ ಇರೋದ್ ಯಾವ್ದೂ  ಔನ್ದಲ್ಲ...ಎಲ್ಲ ಅವ್ರಪ್ಪ ಕೊಡ್ಸಿರ್ತಾನೆ...ಬೇಕಾದ್ರೆ
ಹೋಗ್ ಕೇಳು...ಔನು ಹಾಕೊಂಡಿರೋ ಚಡ್ಡಿ ಕೂಡ ಅವ್ನಪ್ಪಾನೆ ಕೊಡ್ಸಿರೋದು.
ನಾವು ಅಂಗಲ್ಲ....ಅಡಿ ಇಂದ ಮುಡಿವರ್ಗು ನಮ್ ಸಂಪಾದ್ನೇಲಿ ಬದುಕ್ತಾ ಇರೋರು
ಅದ್ಯಾತ್ರದ್ದೋ ನೆಕ್ತಾ ಇದ್ಯಲ್ಲ ನೆಕ್ಬುಟ್ಟು ಓಗ್ ದಬ್ಬಾಕು......

ನೋಡಯ್ಯ ಕ್ವಾಟೆ ಲಿಂಗವೇ
ಬೆಳ್ಳಕ್ಕಿ ಜೋಡಿ ಕುಂತವೆ
ಅಂಗೈ ಅಷ್ಟಗಲ ಗೂಡು
ಆದ್ರುನು ದರ್ಬಾರ್ ನೋಡು
ಪ್ರೀತಿಲಿ ಲೋಕ ಮರ್ತವೆ....

ಪಾಯಯಿಲ್ಲ ಗ್ವಾಡೆಯಿಲ್ಲ ನೋಡು ಇವರ ಅರಮನೆ
ರಾಜ ರಾಣಿ ಆಳು ಕಾಳು ಎಲ್ಲಾನೂ ಇವರೇನೆ
ಸ್ವಾನೆ ಮಳ್ಯೋ ಉರಿಯೋ ಬಿಸಿಲೋ ಏನೇ ಬಂದ್ರು ಜಗ್ಗಲ್ಲ
ಅವಳಿಗೆ ಇವನೇ ಕೊಡೆಯಾಗವ್ನೆ ಇವ್ರ್ ಬಿಟ್ ಇವ್ರ್ಗೆಯಾರಿಲ್ಲ

ಪೆದ್ದು ಹೈದ ಮನ್ಸು ಸುದ್ದ ಸುಳ್ಳು ಹೇಳೋ ಕುಲವಲ್ಲ
ಸುಣ್ಣದ ನೀರ್ಗು ಗೋವಿನ ಹಾಲ್ಗು ಯತ್ವಾಸ ಗೊತ್ತಿಲ್ಲ
ಅ ಆ ಇ ಈ ಓದಿದೋಳು ಇವ್ನಾ ಮನ್ಸು ಒದವ್ಳೆ
ಕೋಗ್ಲೆ ಬಣ್ಣ ಆದ್ರು ಚಿನ್ನ ಅಂತ ಇವ್ನಾ ಜೊತೆಗವ್ಳೆ
         

chitranna chitranna - buddivanta

ಚಿತ್ರ: ಬುದ್ದಿವಂತ
ನಟರು: ಉಪೇಂದ್ರ ಮತ್ತು ಇತರರು

ನಾವು ಕನ್ನಡಿಗರಲ್ಲವೋ ವಿಶಾಲ ಹೃದಯದವರು.....
ಕನ್ನಡ ಚಿತ್ರಗಳಿಗಿಂತ ಬೇರೆ ಭಾಷೆ ಚಿತ್ರಗಳನ್ನೇ ಜಾಸ್ತಿ ನೋಡ್ತೇವೆ.....
ಈ ಹುಡುಗಿ ಹೇಳಿದ ಕತೆ ಹ್ಯಾಗಿದೆ ಎಂದರೆ, ಎರಡು ತೆಲುಗು ಎರಡು ಹಿಂದಿ ಭಾಷೆ ಚಿತ್ರ ಸೇರಿಸಿ
ಕತೆ ಹೇಳ್ತಿದಾಳೆ ಇವಳು.  ಬಾಂಬ್ ಸಿಡಿಯುವಾಗ ಯಾರೋ ತೂರಿಕೊಂಡು ಓಡಿಬಂದನಂತೆ, ಒಂದೆ ಚಕ್ರದಲ್ಲಿ ಬೈಕ್
ಓಡಿಸಿದನಂತೆ...ಇವಳಿಗೆ ಪುಸಕ್ ಅಂತ ಲವ್ ಬಂತಂತೆ...ಜೀವನ ಬೇರೆ, ಸಿನಿಮಾ ಬೇರೆ...ಜೀವನಾನೆ ಸಿನಿಮಾ ಅಂತ ತಿಳ್ಕೊಂಡ್ ಬಿಟ್ಯಲ್ಲ ತಾಯಿ ನೀನು....

ಚಿತ್ರಾನ್ನ ಚಿತ್ರಾನ ಚಿತ್ರ ಚಿತ್ರ ಚಿತ್ರಾನ
ಚಿತ್ರಾನ್ನ ಚಿತ್ರಾನ ಚಿತ್ರಾನ್ನ ಚಿತ್ರಾನ
ನೀನೆ ನನ್ನ ಮನ್ಸಲ್ಲಿರೋ ಚಿತ್ರಾನ
ಬರೆದೊರ್ಯಾರೋ ಇಂಥ ಒಳ್ಳೆ ಚಿತ್ರಾನ
ನೀನ್ ನಂಗೆ ಕೈ ಕೊಟ್ರೆ ನಾ ಚಿತ್ರಾನ್ನ
ನಿನ್ ಹಂಗೆ ನಿನ್ ಪ್ರೀತಿ ವಿಚಿತ್ರನ

ಸುಮ್ನೆ ಗಡ್ಬಡ್ ಮಾಡ್ಬೇಡ ಮನಸಲ್ ಮಂಡ್ಗೆ ತಿನ್ಬೇಡ
ಹಣ್ಣಾಗಿಲ್ಲ ಸ್ವಲ್ಪ ಕಾಯಿ
ಬಾ ಅಂತ ಜಹಾಂಗೀರ್ ಬೇಕು ಅಂದ್ರೆ ಎಳನೀರ್
ಎಳ್ಳು ನೀರ್ ಬಿಡಬೇಡ ತಾಯಿ
ಜೋರಿದ್ದಿ ಅಲ್ವ ಅಲ್ವ ಅಲ್ವ ಅಲ್ವ
ಕೊಡ್ತೀಯ ಹಲ್ವ ಹಲ್ವ ಹಲ್ವ ಹಲ್ವ
ಜೋರಿದ್ದಿ ಅಲ್ವ ಅಲ್ವ ಕೊಡ್ತೀಯ ಹಲ್ವ ಹಲ್ವ
ಈ ಸಣ್ಣ ಹಾರ್ಟಲ್ಲಿ ನಾನಿನ್ನ ಎಲ್ಲೋ ಇಡ್ಲಿ?

ಚುರ್ ಚುರ್ ಚುರ್ ಚುರ್ ಚುರಮುರಿ
ಇವಳೇ ನಂಗೆ ಬೇಕ್ರಿ
ಅಬ್ಬ ಈ ಜೋಡಿನೆ ಚೌ ಚೌ
ಚಂಪಾಕಲಿ ಬಂದಳೋ ಬಾದ್ಷಾ ಬಾರೋಲೋ
ನಾವಿಬ್ರು ಒಂದಾದ್ರೆ ಚೌ ಚೌ
ಕಜ್ಜಾಯ ಬಿಸಿ ಬಿಸಿ ಬಿಸಿ ಬಿಸಿ
ಕೊಡ್ತೀಯ ವಸಿ ವಸಿ ವಸಿ ವಸಿ
ಕಜ್ಜಾಯ ಬಿಸಿ ಬಿಸಿ ಕೊಡ್ತೀಯ ವಸಿ ವಸಿ
ಉಪ್ಪಿಗಿಂತ ರುಚಿ ಬೇರೆಲ್ಲೂ ಸಿಕ್ಕೋದಿಲ್ಲ...... 
 
are they serious?? who comes up with these lyrics...goodness...bardorgu kelsvilla, nangu kelsvilla :-D

chinna heLe hegiruve - bombaat

ಚಿತ್ರ: ಬೊಂಬಾಟ್
ಗಾಯನ: ಸೋನು ನಿಗಮ್, ಶ್ರೇಯ ಗೋಶಲ್
ನಟರು: ಗಣೇಶ್, ರಮ್ಯ

ಚಿನ್ನ ಹೇಳೇ ಹೇಗಿರುವೆ ಕಣ್ಣಿನಲ್ಲಿ ಹಾಡಿರುವೆ
ನಿನ್ನದೊಂದು ನೋಟಕೆ ನಾ ಓಡುತಲೇ ಬಂದಿರುವೆ
ಇನ್ನು ನಾನು ನಿನ್ನವನು ನಿನ್ನವನೇ ಎಂದಿರುವೆ

ಚಿನ್ನ ನೋಡು ಹೀಗಿರುವೆ ನಿನ್ನದಾಗಿ ಹೋಗಿರುವೆ
ಸಣ್ಣದೊಂದು ಮಾತಿಗೆ ನಾ ಕಾಯುತಲೆ ನಿಂತಿರುವೆ
ಇನ್ನು ನೀನೆ ನನ್ನವನು ನನ್ನವನೇ ಎಂದಿರುವೆ......

ಈ ಹೃದಯ ಮಾಡಿದೆ ಹೊಸ ಸಾಹಸ ಬೇಕಾಗಿದೆ ಅನುಮೋದನೆ
ಮಿರಿಮಿಂಚು ಮೂಡಿದ ಕಣ್ಣಿಂದಲೇ ಮರೆತೆಲ್ಲವ ಬರಿ ನೋಡು ನನ್ನನ್ನೇ..
ಬೇರೆ ಮಾತು ಬೇಕಿಲ್ಲ ಇನ್ನು ದೂರ ಸಾಕಲ್ಲ ನೀನೆ ಪೂರ ಬೇಕಲ್ಲ
ಮನದ ಬೆಳ್ಳಿ ತೆರೆಯಲ್ಲಿ ನಿನ್ನ ಮುಖ ಕಂಡಿರುವೆ
ಇನ್ನು ನೀನೆ ನನ್ನವನು ನನ್ನವನೇ ಎಂದಿರುವೆ

ಮೊಗದಲ್ಲಿ ಕೆಂಪಿನ ಚಿತ್ತಾರವ ಉಸಿರಿಂದಲೇ ನಾ ಬಿಡಿಸಲೆ
ಈ ನಮ್ಮ ಜೀವನದ ರೇಖೆಯು ಒಂದಾಯಿತೆ ಹಿಡಿದಂತ ಕೈಯಲ್ಲೇ
ಭಾವ ಲೋಕ ಬಂತಲ್ಲ ನಿನ್ನ ಬಿಟ್ಟು ಏನಿಲ್ಲ ನೀನು ಕೊಟ್ಟೆ ಏನೆಲ್ಲಾ
ನನ್ನವೆಲ್ಲ ನಾಳೆಗಳ ನಿನಗಾಗೆ ತಂದಿರುವೆ
ಇನ್ನು ನಾನು ನಿನ್ನವನು ನಿನ್ನವನೇ ಎಂದಿರುವೆ

maayavaagide manasu - haage summane

ಚಿತ್ರ: ಹಾಗೆ ಸುಮ್ಮನೆ
ಗಾಯನ: ಸೋನು ನಿಗಮ್
ನಟರು: ಕಿರಣ್, ಸುಹಾಸಿ

ಮಾಯವಾಗಿದೆ ಮನಸು ಹಾಗೆ ಸುಮ್ಮನೆ
ಗಾಯವ ಮಾಡಿದೆ ಕನಸು ಹಾಗೆ ಸುಮ್ಮನೆ
ಮೋಹದಲ್ಲಿ ಬೀಳುವ ಮಧುರವಾದ ಭಾವನೆ
ಈಗ ತಾನೇ ಬಂದಿದೆ ನೀಡದೆ ಸೂಚನೆ

ತುಂಬಿ ಹೋಯಿತೀಗಲೇ ನನ್ನ ದಿನಚರಿ
ಎಲ್ಲ ಪುಟದಲು ಅವಳದೇ ವೈಖರಿ
ಅವಳ ನಿಲುವುಗನ್ನಡಿ ಪುಣ್ಯ ಮಾಡಿದೆ
ರೂಪ ತಾಳಿ ನಿಂತಿದೆ ನನ್ನದೇ ಕಲ್ಪನೆ....

ನನ್ನ ಹಾಡಿನಲ್ಲಿದೆ ಅವಳ ಸಂಗತಿ
ಜಾಹಿರಾಗಲಿ ಜೀವದ ಮಾಹಿತಿ
ಎಲ್ಲೆ ಹೊರಟು ನಿಂತರು ಅಲ್ಲೇ ತಲುಪುವೆ
ಜಾಸ್ತಿ ಹೇಳಲಾರೆನು ಖಾಸಗಿ ಯೋಚನೆ.....

maayavaagide manasu haage summane
gaayava maaDide kanasu haage summane
mohadalli beeLuva madhuravaada bhaavane
eega taane bandide neeDade soochane

tumbi hoyiteegale nanna dinachari
ella putadalu avaLade vaikhari
avaLa niluvugannaDi puNya maaDide
roopa taaLi nintide nannade kalpane

nanna haaDinallide avaLa sangati
jaahiraagali jeevada maahiti
elle horaTu nintaru alle talupuve
jaasti heLalaarenu khaasagi yochane....

Monday, October 12, 2009

saviyo saviyu - savi savi nenapu

ಚಿತ್ರ: ಸವಿ ಸವಿ ನೆನಪು
ಗಾಯನ: ಸೋನು ನಿಗಮ್, ಶ್ರೇಯ ಗೋಶಲ್
ನಟರು: ಪ್ರೇಮ್, ಮಲ್ಲಿಕಾ ಕಪೂರ್

ಸವಿಯೋ ಸವಿಯು ಒಲವ ನೆನಪು
ಎದೆಯ ನಿಧಿಯೇ ಅನುರಾಗ
ಪ್ರತಿ ಕ್ಷಣದಲಿ ಪ್ರಾರ್ಥನೆಯಲಿ ಕಾಡುವೆ ಏತಕೆ
ಸೂರ್ಯನಂತೆ ನಾ ಹೊಳೆವಾಗ ಭೂಮಿಯಂತೆ ನೀ ಬಾ
ಭೂಮಿಯಂತೆ ನಾ ಕರೆವಾಗ ಮಳೆಬಿಲ್ಲಂತೆ ನೀ ಬಾ

ನೀ ಬರುವ ದಾರಿಯಲ್ಲಿ ಒಲವೆಂಬ ರಂಗವಲ್ಲಿ
ನಿನಗಾಗಿ ಮೂಡಿದೆ ನೋಡು ಬಾ
ಒಡಲಾಳ ತಂತು ಸ್ನೇಹ ಒಡಮೂಡಿ ಬಂತು ಮೋಹ
ಕಥೆಯಾಗಿ ಕಾಡಿತು ಮೂಡಿತು
ಆ ಗದ್ಯದೊಳದ್ದಿದಾ ಪದ್ಯದ ಮಧ್ಯದ ಅದ್ಭುತ ಭಾವಾರ್ಥವೆ
ನೀ ಗದ್ಯದೊಳದ್ದಿದ ಪದ್ಯದ ಮಧ್ಯದ ಅದ್ಭುತ ಭಾವಾರ್ಥವೆ

ಮರುಭೂಮಿ ಯಾನದಲ್ಲಿ ಅಮೃತದ ಧಾರೆ ಚೆಲ್ಲಿ
ತಂಪಾಯ್ತು ಜೀವಕೆ ಭಾವಕೆ
ಮುಂಜಾನೆ ಮಂಜಿನಲ್ಲು ಚುಮುಗುಡುವ ಬೆಳಗಿನಲ್ಲು
ಬಿಸಿಯಾಯ್ತು ಮೈಯಿಗು ಮನಸಿಗೂ
ನೀ ಬೆಚ್ಚನೆ ಪ್ರೀತಿಯ ಹುಚ್ಚಿನ ಮೆಚ್ಚಿನ ಇಚ್ಛೆಯ ಹೆಣ್ಣಲ್ಲವೇ
ನೀ ಬೆಚ್ಚನೆ ಪ್ರೀತಿಯ ಹುಚ್ಚಿನ ಮೆಚ್ಚಿನ ಇಚ್ಛೆಯ ಗಂಡಲ್ಲವೇ......
      

amalu - vamshi

ಚಿತ್ರ: ವಂಶಿ
ಗಾಯನ: ರಾಜೇಶ್ ಕೃಷ್ಣನ್, ಹರಿಣಿ
ನಟರು: ಪುನೀತ್ ರಾಜ್ ಕುಮಾರ್, ನಿಕಿತ

ಅಮಲು ಅಮಲು ಅಮಲು
ಗೆಳತಿ ನೀನು ಸಿಗಲು
ಮರುಳೀಗ ಮಿತಿ ಮೀರಿ ನನಗಂತು ದಿಗಿಲು

ಅಮಲು ಅಮಲು ಅಮಲು
ಗೆಳೆಯ ನೀನು ನಗಲು
ನನಗಂತು ಯಾರಿಲ್ಲ ನಿನಗಿಂತ ಮಿಗಿಲು

ಬಾರೆ ಬಳಿ ಬಾರೆ ಏಕೆ ಕಾಲ ಹರಣ
ಎಲ್ಲ ಪಿಸು ಮಾತು ಮುತ್ತಾಗೋ ಲಕ್ಷಣ
ತಿಳಿಯದೆ ತೆರೆದಿದೆ ಕನಸಿನ ಕದ
ಅರಿಯದೆ ಅರಳಿದೆ ಹಸಿ ಬಿಸಿ ಪದ
ಹರೆಯ ನೋಡಿದೆ ಮಾತಾಡಲು......

ನಿನ್ನ ಉಸಿರಿಂದ ನೇರ ಜೀವದಾನ
ಜೀವ ಹಸಿರಾಗಿ ಬದುಕೀಗ ಶ್ರಾವಣ
ಪರದೆಯ ಸರಿಸಿದೆ ಪರವಶ ಮನ
ಹೃದಯವೆ ಅರಿತಿದೆ ಹೃದಯದ ಗುಣ
ಸಮಯ ನಿಂತಿದೆ ಹಾರೈಸಲು.....

jote joteyali preeti joteyali - vamshi

ಚಿತ್ರ: ವಂಶಿ
ಗಾಯನ: ಪುನೀತ್ ರಾಜಕುಮಾರ್, ಶ್ರೇಯ ಗೋಶಲ್
ನಟರು: ಪುನೀತ್ ರಾಜಕುಮಾರ್, ನಿಕಿತ

ಜೊತೆ ಜೊತೆಯಲಿ ಪ್ರೀತಿ ಜೊತೆಯಲಿ
ನಡೆದಿದೆ ದಿನ ಬಯಸಿ ಬಯಸಿ
ಸಿಹಿ ಸಿಹಿ ಸಿಹಿ ಮಾತು ಸಿಹಿ ಸಿಹಿ
ನುಡಿದಿದೆ ಮನ ಹರಸಿ ಹರಸಿ
ಹೀಗೆ ಸಾಗಲಿ ನಮ್ಮೀ ಪಯಣ
ಹಾಡಿ ನಲಿದು ಸ ಸ ರಿ ರಿ ಗ ಗ ಮ ಮ

ದಿನ ದಿನ ದಿನ ಏನಾದರು ಚಿನ್ನ ಕರಗದು ಈ ಪ್ರೇಮ
ಕ್ಷಣ ಕ್ಷಣ ಕ್ಷಣ ನೀನಿಲ್ಲದ ಕ್ಷಣ ಸಹಿಸದು ಈ ಪ್ರೇಮ
ಆ ಬಾನಿಗಾದರೆ ಮಿನುಗು ತಾರೆ
ಈ ಬಾಳಿಗಾಸರೆ ನೀನೆ ಬಾರೆ
ನಾವಾಡೋ ಒಲವಿನ ಮಾತು ಕೇಳಿ
ಹಾರಾಡೋ ಗಿಳಿಗಳ ಗಾನ ಸ ಸ ರಿ ರಿ ಗ ಗ ಮ ಮ ......

ಕಣ ಕಣ ಕಣ ಹೊಸ ಹುರುಪಿನ ಚಿಲುಮೆಯು ಈ ಪ್ರೇಮ
ಮಿಣ ಮಿಣ ಮಿಣ ಹೊಸ ಬೆಳಕಿನ ಹೊಳಪಿದು ಈ ಪ್ರೇಮ
ಏಳೇಳು ಜನುಮದಾ ಜೋಡಿಯಾಗಿ
ಹೀಗೇನೆ ಬಾಳುವೆ ಪ್ರೇಮಿಯಾಗಿ
ಈ ನಮ್ಮ ಪ್ರೀತಿಯ ನೋಡಿ ನೋಡಿ
ಲೋಕವೇ ಹಾಡಿದೆ ಹಾಡು ಸ ಸ ರಿ ರಿ ಗ ಗ ಮ ಮ ......

moDada oLage - payaNa

ಚಿತ್ರ: ಪಯಣ
ಗಾಯನ: ಸೋನು ನಿಗಮ್
ನಟರು: ರವಿಶಂಕರ್, ರಮನಿತು ಚೌದರಿ

ಮೋಡದ ಒಳಗೆ ಹನಿಗಳ ಬಳಗ
ಒಂಟಿ ಕಾಲಲಿ ಕಾದು ನಿಂತಿವೆ ಭೂಮಿಗೆ ಬರಲು
ನನ್ನೊಳಗೊಳಗೆ ಒಲವಿನ ಯೋಗ
ತುದಿಗಾಲಲಿ ನಿಂತು ಕಾದಿದೆ ಚಿಮ್ಮುತ ಬರಲು
ಕಾವ್ಯ ಕುಸುರಿ ಗೊತ್ತಿಲ್ಲ ಹಾಡುಗಾರ ನಾನಲ್ಲ
ನಿನ್ನ ಪ್ರೀತಿ ಮಾಡುವೆ ನಾನು ಇಷ್ಟೇ ಹಂಬಲ.....

ನಿಂತಲಿ ನಾ ನಿಲಲಾರೆ ಎಲ್ಲರು ಹೀಗನುತಾರೆ
ಏತಕೋ ನಾ ಕಾಣೆನು ಈ ತಳಮಳ
ಪ್ರೀತಿ ನನ್ನ ಬಲೆಯೊಳಗೊ
ನಾನೆ ಪ್ರೀತಿ ಬಲೆಯೊಳಗೊ
ಕಾಡಿದೆ  ಕಂಗೆಡಿಸಿದೆ ಸವಿ ಕಳವಳ
ಖಾಲಿ ಜೇಬಿನ ಮಜುನು ಪ್ರೀತಿ ಒಡೆಯನಾಗುವೆನು
ನಿನ್ನ ಬಿಟ್ಟು ಹೇಗಿರಬೇಕು ಹೇಳೇ ಪ್ರಾಣವೇ

ನಾನು ನಿನ್ನ ಕಣ್ಣೊಳಗೆ ಮಾಯ ಕನ್ನಡಿ ನೋಡಿರುವೆ
ನನ್ನನು ಬರಸೆಳೆಯುವ ಕಲೆ ನಿನ್ನದು
ಯಾವ ಜನುಮದ ಸಂಗಾತಿ ಈಗಲೂ ಸಹ ಜೊತೆಗಾತಿ
ಅದ್ಭುತ ಈ ಅತಿಶಯ ನಾ ತಾಳೆನು
ನಾನು ಬಡವ ಬದುಕಿನಲಿ ಸಾಹುಕಾರ ಪ್ರೀತಿಯಲಿ
ನೀನೆ ನನ್ನ ನಾಡಿಯಲಿ ಜೀವ ಎಂದಿಗೂ......

kann kanna salige - navagraha

ಚಿತ್ರ: ನವಗ್ರಹ
ಗಾಯನ: ಸೋನು ನಿಗಮ್
ನಟರು: ದರ್ಶನ್ ಮತ್ತು ಇತರರು

ಕಣ್ ಕಣ್ಣ ಸಲಿಗೆ, ಸಲಿಗೆ ಅಲ್ಲ ಸುಲಿಗೆ
ನೀನಿನ್ನು ನನಗೆ, ನನಗೆ ನನ್ನನಗೆ.....
ಥರ ಥರ ಹೊಸ ಥರ, ಒಲವಿನ ಅವಸರ
ಹೃದಯಾನೆ ಜೋಕಾಲಿ.....

ಋತು ಏಳು ಭೂಮಿಯ ಮೇಲೆ
ಪ್ರಣಯಾನೆ ಎಂಟನೆ ಓಲೆ
ತಿಳಿ ತಿಳಿ ಪ್ರೇಮ
ಇರೋದಂತೂ ನಾಲ್ಕೇ ವೇದ
ಪ್ರೀತಿ ತಾನೇ ಪಂಚಮ ವೇದ
ನಿಜ ನಿಜ ಪ್ರೇಮ
ನಾನು ನಿನ್ನಲ್ಲಿ ಮೆಚ್ಚಿದ ಅಂಶವೇ ಪ್ರೀತಿ
ನೀನು ನನ್ನನು ಒಪ್ಪದೆ ಹೋದರೆ ಏನೋ ಭೀತಿ....

ಸಹಿ ಮಾಡು ನನ್ನೆದೆ ತುಂಬ
ನೀನೆ ಅದರ ತುಂಬ ತುಂಬ
ನಂಬು ನನ್ನ ನಲ್ಲೆ
ಒಂದೆ ಒಂದು ಮಾತು ಕೇಳು
ಎಲ್ಲ ಜನುಮ ನನ್ನನೆ ಆಳು
ನೀನೆ ನನ್ನ ಬಾಳು
ಯಾವ ತುದಿಯಲಿ ಇದ್ದರು ಭೂಮಿಯ ಮೇಲೆ
ನಾನು ನಿನ್ನನೆ ಕಾಯುವೆ ಪ್ರೀತಿಸೆ, ಪ್ರೀತಿ ಮಾಡೇ....

i love you - moggina manassu....

ಚಿತ್ರ: ಮೊಗ್ಗಿನ ಮನಸ್ಸು
ಗಾಯನ: ಸೋನು ನಿಗಮ್
ನಟರು: ಯಶ್, ರಾಧಿಕ ಪಂಡಿತ್

i love you......ಓ....
i love you......

ನೂರಾರು ಪ್ರೀತಿ ಮಾತು ನೂರಾರು ಸಾರಿ ಆಡಿ
ನೀನೇನೆ ಜೀವ ಎಂದು ನೂರಾರು ಆಣೆ ಮಾಡಿ
ಕಾರಣವೇ ಹೇಳದೆ ಏಕೆ ನನ್ನ ಬಿಟ್ಟು ಹೋದೆ
ನೀನೆಲ್ಲೇ ಹೋದರು ಏನು ನೀನನ್ನ ಮರೆತರು ಏನು
ನೀನೇನೆ ಮಾಡಿದರೇನು ನಿನ್ನನ್ನೇ ಮರೆಯುವೆಯೇನು
ನಿನ್ನಲ್ಲೇ ನಾನು ಅವಿತು ಕುಳಿತಿಲ್ಲವೇನು....

ನೀನು ಇರದೇ ಬದುಕುವುದನ್ನು ಕಲಿಯೋ ಸಾಹಸದಲ್ಲಿ
ನಿನ್ನ ನೆನಪೆ ಎದುರು ನಿಂತು ಸೋತಿಹೆ ನಾನು ಇಲ್ಲಿ
ಬಿಟ್ಟು ಹೋದ ಆ ಘಳಿಗೆ ನೆನೆದು ನೆನೆದು ಈ ಘಳಿಗೆ
ಜಾರುವ ಕಂಬನಿ ಜಾರಲು ಬಿಟ್ಟು ಸುಮ್ಮನೆ ಹಾಗೆ ಕೂತಿರುವೆ......

ನನ್ನೆದೆ ಗುಡಿಯ ನಂದಾದೀಪ ಆರಿಸಿ ಹೋದೆ ನೀನು
ಕತ್ತಲೆ ಕೋಣೆಯ ಒಳಗೂ ನಿನ್ನ ನೆನಪಲೆ ಬೆಂದೆ ನಾನು
ದೂರ ಹೋದೆ ನೀನೆಂದು ದೂರಲಾರೆ ನಿನ್ನೆಂದು
ನಿನ್ನ ನೆನಪ ಬಂಧನದಲ್ಲೇ ಸಾಯೋವರೆಗು ಕಾಯುವೆನು.....

ninnindale - milana

ಚಿತ್ರ: ಮಿಲನ
ಗಾಯನ: ಸೋನು ನಿಗಮ್
ನಟರು: ಪುನೀತ್ ರಾಜ್ ಕುಮಾರ್, ಪಾರ್ವತಿ

ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ
ನಿನ್ನಿಂದಲೇ ನಿನ್ನಿಂದಲೇ ಮನಸಿಂದು ಕುಣಿದಾಡಿದೆ
ಈ ಎದೆಯಲ್ಲಿ ಸಿಹಿಯಾದ ಕೋಲಾಹಲ
ನನ್ನೆದುರಲ್ಲೇ ನೀ ಹೀಗೆ ಬಂದಾಗಲೇ
ನಿನ್ನ ತುಟಿಯಲ್ಲಿ ನಗುವಾಗುವ ಹಂಬಲ
ನಾ ನಿಂತಲ್ಲೇ ಹಾಳಾದೆ ನಿನ್ನಿಂದಲೇ....

ಇರುಳಲ್ಲಿ ಜ್ವರದಂತೆ ಕಾಡಿ ಈಗ
ಹಾಯಾಗಿ ನಿಂತಿರುವೆ ಸರಿಯೇನು
ಬೇಕಂತಲೇ ಮಾಡಿ ಏನೋ ಮೋಡಿ
ಇನ್ನೆಲ್ಲೋ ನೋಡುವ ಪರಿಯೇನು
ಈ ಮಾಯೆಗೆ ಈ ಮರುಳಿಗೆ ನಿನ್ನಿಂದ ಕಳೆ ಬಂದಿದೆ.......ನಿನ್ನಿಂದಲೆ....

ಹೋದಲ್ಲಿ ಬಂದಲ್ಲಿ ಎಲ್ಲ ನಿನ್ನ
ಸೊಂಪಾದ ಚೆಲುವಿನ ಗುಣಗಾನ
ಕೇದಿಗೆ ಗರಿಯಂಥ ನಿನ್ನ ನೋಟ
ನನಗೇನೋ ಅಂದಂತೆ ಅನುಮಾನ
ನಿನ್ನಿಂದಲೆ ಸದ್ದಿಲ್ಲದೆ ಮುದ್ದಾದ ಕರೆ ಬಂದಿದೆ....ನಿನ್ನಿಂದಲೆ....

ee sanje yakagide?......neenillade

It was a balmy evening....sun was in a pleasant mood and seemed determined to allow us to enjoy the breezy weather.....as i was walking along the shore, with the cold sand beneath my feet, my mood turned melancholy....the good times we had and the not so good ones crowded my mind....i felt a smile tug through my wet cheeks and i thought.......

ಈ ಸಂಜೆ ಯಾಕಾಗಿದೆ ನೀನಿಲ್ಲದೆ
ಈ ಸಂಜೆ ಯಾಕಾಗಿದೆ
ಈ ಸಂತೆ ಸಾಕಾಗಿದೆ ನೀನಿಲ್ಲದೆ
ಈ ಸಂತೆ ಸಾಕಾಗಿದೆ
ಏಕಾಂತವೆ ಆಲಾಪವು
ಏಕಾಂಗಿಯ ಸಲ್ಲಾಪವು
ಈ ಮೌನ ಬಿಸಿಯಾಗಿದೆ.....ಓ....
ಈ ಮೌನ ಬಿಸಿಯಾಗಿದೆ.....

ಈ ನೋವಿಗೆ ಕಿಡಿ ಸೋಕಿಸಿ ಮಜ ನೋಡಿವೆ ತಾರಾಗಣ
ತಂಗಾಳಿಯ ಪಿಸುಮಾತಿಗೆ ಯುಗವಾಗಿದೆ ನನ್ನ ಕ್ಷಣ
ನೆನಪೆಲ್ಲವು ಹೂವಾಗಿದೆ ಮೈಯೆಲ್ಲವೂ ಮುಳ್ಳಾಗಿದೆ
ಈ ಜೀವ ಕಸಿಯಾಗಿದೆ....ಓ....ಈ ಜೀವ ಕಸಿಯಾಗಿದೆ.....

ನೀನಿಲ್ಲದೆ ಆ ಚಂದಿರಾ ಈ ಕಣ್ಣಲಿ ಕಸವಾಗಿದೆ 
ಅದನೂದುವ ಉಸಿರಿಲ್ಲದೆ ಬೆಳದಿಂಗಳು ಅಸು ನೀಗಿದೆ 
ಆಕಾಶದಿ ಕಲೆಯಾಗಿದೆ ಈ ಸಂಜೆಯ ಕೊಲೆಯಾಗಿದೆ 
ಈ ಗಾಯ ಹಸಿಯಾಗಿದೆ.....ಈ ಗಾಯ ಹಸಿಯಾಗಿದೆ....

jeeva veene - hombisilu

ಚಿತ್ರ: ಹೊಂಬಿಸಿಲು
ಗಾಯನ: ಎಸ್ ಪಿ ಬಾಲು, ಎಸ್ ಜಾನಕಿ
ನಟರು: ವಿಷ್ಣುವರ್ಧನ್, ಆರತಿ

ಜೀವ ವೀಣೆ ನೀಡು ಮಿಡಿತದ ಸಂಗೀತ
ಓ...ಭಾವ ಗೀತೆ ಬಾಳಿನೊಲುಮೆಯ ಸಂಕೇತ
ಇಂದು ಮಿಲನದ ಸಂತೋಷ ಸುಖ ಸಂತೋಷ
ಶುಭ ಸಂದೇಶ ಸಂದೇಶ ಸಂದೇಶವು.....

ಮಿಡಿಯುವ ಮನಗಳು ಎರಡು ಮಿಡಿತದ ರಾಗವು ಒಂದೆ
ಮಿಂಚುವ ಕಣ್ಣಂಚಿನ ಸಂಚು ಇಂದು ಒಂದೇ
ಆ........ಲಲಲ.....ಆ......
ತಪಿಸುವ ಹೃದಯಗಳೆರಡು ತಾಪದ ವೇಗವು ಒಂದೆ
ಸೇರುವ ಶುಭ ಸಮಯದಿ ವಿರಹ ಇರದು ಮುಂದೆ.....

ಭಾವ.......
ಜೀವ.......

ಒಲವಿನ ಬಯಕೆಯು ಅಂದು ಮಿಲನ ಮಹೋತ್ಸವವಿಂದು
ರಚಿಸುವ ನಾವನುದಿನ ಮುದದ ಪ್ರೇಮ ಕವನ.....
ಕನಸಿನ ರಾತ್ರಿಯು ಕಳೆದು ಬಂದಿರೆ ನೆನೆಸಿದ ಹಗಲು
ಕಾಣುವ ಹೊಂಬಿಸಿಲಿನ ಸುಖದ ಸೂರ್ಯ ಕಿರಣ.....

- - - -- - - - - - - -- - - - - --

jeeva veeNe neeDu miDitada sangeeta
bhaava geete baaLinolumeya sanketa
indu milanada santosha sukha santosha
shubha sandesha sandesha sandeshavu....

miDiyuva managaLu eraDu
miDitada raagavu onde
minchuva kaNNanchina sanchu indu onde

aa.....lalala.....

tapisuva hrudayagaLeraDu
taapada vegavu onde
seruva shubha samayadi viraha iradu munde

bhaava.....
jeeva.......

olavina bayakeyu andu
milana mahotsavavindu
rachisuva naavanudina mudadaa prema kavana

kanasina raathriyu kaLedu
bandire nenesida hagalu
kaaNuva hombisilina sukhada soorya kiraNa....

tam nam tam nam - eraDu kanasu

ಚಿತ್ರ: ಎರಡು ಕನಸು
ಗಾಯನ: ಪಿ ಬಿ ಶ್ರೀನಿವಾಸ್, ಎಸ್ ಜಾನಕಿ
ನಟರು: ರಾಜ್ ಕುಮಾರ್, ಕಲ್ಪನಾ, ಮಂಜುಳ

ತಮ್ ನಮ್ ತಮ್ ನಮ್ ತಮ್ ನಮ್ ಮನಸು ಮಿಡಿಯುತಿದೆ
ಹೋ ಸೋತಿದೆ.....
ಕೈಯಲ್ಲಿ ಕುಣಿವ ಈ ಹೊನ್ನ ಬಳೆಯ ಘಲ್ ಘಲ್ ಘಲ್ ಘಲ್ ತಾಳಕೆ
ನನ್ನೆದೆಯ ವೀಣೆ ತನ್ನಂತೆ ತಾನೇ ತಮ್ ನಮ್ ತಮ್ ನಮ್ ಎಂದಿದೆ....
ಘಲ್ ಘಲ್ ಘಲ್ ಘಲ್ ತಾಳಕೆ ತಮ್ ನಮ್ ತಮ್ ನಮ್ ಎಂದಿದೆ.....

ತಮ್ ನಮ್ ತಮ್ ನಮ್ ನನ್ನೀ ಮನಸು ಮಿಡಿಯುತಿದೆ.....
ಹೋ ಸೋತಿದೆ.....
ಕೈಯಲ್ಲಿ ಕುಣಿವ ಈ ಹೊನ್ನ ಬಳೆಯ ಘಲ್ ಘಲ್ ಘಲ್ ಘಲ್ ತಾಳಕೆ
ನನ್ನೆದೆಯ ವೀಣೆ ತನ್ನಂತೆ ತಾನೇ ತಮ್ ನಮ್ ತಮ್ ನಮ್ ಎಂದಿದೆ....
ಘಲ್ ಘಲ್ ಘಲ್ ಘಲ್ ತಾಳಕೆ ತಮ್ ನಮ್ ತಮ್ ನಮ್ ಎಂದಿದೆ.....

ನೀ ಸನಿಹಕೆ ಬಂದರೆ ತನುವಿದು ನಡುಗುತಿದೆ ಏತಕೆ ಎದೆ ಝಲ್ ಎಂದಿದೆ
ಅಹಹ....ಒಲಿದಿಹ ಜೀವವು ಬೆರೆಯಲು ಮನ ಹೂವಾಗಿ ತನು ಕೆಂಪಾಗಿ ನಿನ್ನ ಕಾದಿದೆ.....

ನೀ ನಡೆಯುವ ಹಾದಿಗೆ ಹೂವಿನ ಹಾಸಿಗೆಯ ಹಾಸುವೆ ಕೈ ಹಿಡಿದು ನಡೆಸುವೆ
ಅಹಹ....ಮೆಲ್ಲಗೆ ನಲ್ಲನೆ ನಡೆಸು ಬಾ ಎಂದೂ ಹೀಗೆ ಇರುವ ಆಸೆ ನನ್ನೀ ಮನಸಿಗೆ....

haadonda haaduve - naandi

ಚಿತ್ರ: ನಾಂದಿ
ಗಾಯಕ: ಪಿ ಬಿ ಶ್ರೀನಿವಾಸ್
ನಟರು: ರಾಜ್ ಕುಮಾರ್, ಹರಿಣಿ, ಕಲ್ಪನಾ

ಹಾಡೊಂದ ಹಾಡುವೆ ನೀ ಕೇಳು ಮಗುವೆ
ಬರಿದಾದ ಮನೆ ಬೆಳಗೆ ನೀನೆಂದು ಬರುವೆ...

ಸೀಮಂತದಾನಂದ ನಾ ನೀಡಲಿಲ್ಲ
ನಿನಗಾಗಿ ಮಹಿಳೆಯರು ತಾ ಹಾಡಲಿಲ್ಲ
ಸಿರಿವಂತರ ಭೋಗ ನಿನಗಿಲ್ಲಿ ಇಲ್ಲ
ಸಿರಿಯಾಗಿ ನಿಧಿಯಾಗಿ ನೀ ಬರುವೆಯಲ್ಲ.....

ನಿನ್ನೊಂದು ನುಡಿ ಮುತ್ತು ಸವಿಜೇನಿನಂತೆ
ಆ ಸುಖದಿ ನಾ ಮರೆವೇ ಈ ಬಾಳ ಚಿಂತೆ
ಅದ ಕೇಳೋ ಸೌಭಾಗ್ಯ ಈ ತಾಯಿಗಿಲ್ಲ
ಇವಳಾಸೆ ಆಕಾಂಕ್ಷೆ ನೀನಾದೆಯೆಲ್ಲ......

Sunday, October 11, 2009

omkaaradi kande - nammoora mandaara hoove

ಚಿತ್ರ: ನಮ್ಮೂರ ಮಂದಾರ ಹೂವೆ
ಗಾಯನ: ಚಿತ್ರ ಕೆ ಎಸ್
ನಟರು: ಪ್ರೇಮ, ರಮೇಶ್, ಶಿವರಾಜ್ ಕುಮಾರ್

ಓಂಕಾರದಿ ಕಂಡೆ ಪ್ರೇಮ ನಾದವ
ಈ ತಾಳದಿ ತಂದೆ ನೀ ಶುಭೋದಯ
ಮಂದಾರವಿಲ್ಲಿ ಅರಳಿ ಕಂಪು ಸೂಸಿದೆ
ಸೌಗಂಧಹಾಸ ಚೆಲ್ಲಿ ನಿನ್ನ ಕಾದಿದೆ
ಅರಿಯೋ ಇನಿಯ ಒಲವ ಕರೆಯ.....

ಮಧುರ ತಾನ ಸ್ವರಗಳ ಸೇರಿ......ಒಹೊಹೊಹೊಹೋ ಓಹೊಹೊಹೋಹೋ
ಜಲಲ ಧಾರೆ ಜಲದಲಿ ಜಾರಿ......ಓಹೊಹೊಹೋಹೋ ಒಹೊಹೊಹೊಹೋ
ಆಕಾಶದಾಚೆ ಆ ಮೌನದಿ ಆ ತಾರೆಯೇಕೆ ತಾನ್ ತೇಲಿದೆ
ಬಂದಾಗ ಅರಿವು ಇಲ್ಲಿ ತಂದಿತು ಒಲವು ಅಲ್ಲಿ
ಅರಿಯೋ ಇನಿಯ ಒಲವ ನಿಧಿಯ......

ನಿನದೆ ಗಾನ ಹೃದಯದಿ ತೇಲಿ.....ಒಹೊಹೊಹೊಹೋ ಓಹೊಹೊಹೋಹೋ
ಲಯದಿ ರಾಗ ಅಲೆಗಳ ಬೀರಿ......ಒಹೊಹೊಹೊಹೋ ಓಹೊಹೊಹೋಹೋ
ಈ ಗೀತೆಗಾದೆ ನೀ ಭಾವನ ಈ ಬಾಳಿಗಾದೆ ನೀ ಚೇತನ
ಸಂಗೀತ ಸುಧೆಯ ತುಂಬಿ ಮಾಧುರ್ಯ ಮನದಿ ತಂದೆ  
ಅರಿಯೋ ಇನಿಯ ಒಲವ ಸವಿಯ.....

nammoora mandaara hoove - aalemane

ಚಿತ್ರ: ಆಲೆಮನೆ
ನಟರು: ಸುರೇಶ ಹೆಬ್ಳಿಕರ್, ರೂಪ ಚಕ್ರವರ್ತಿ
ಗಾಯನ: ಎಸ್ ಪಿ ಬಾಲು

ನಮ್ಮೂರ ಮಂದಾರ ಹೂವೆ ನನ್ನೊಲುಮೆ ಬಾಂದಳದ ಚೆಲುವೆ
ಬಳಿ ಬಂದು ಬಾಳನ್ನು ಬೆಳಗು ನನ್ನ ಬರಿದಾದ ಮನದಲ್ಲಿ ಮಿನುಗು

ಕಣ್ಣಲ್ಲೇ ಕರೆದು ಹೊಂಗನಸ ತೆರೆದು ಸಂಗಾತಿ ಸಂಪ್ರೀತಿ ಸೆಳೆದೆ
ಅನುರಾಗ ಹೊಳೆದು ಅನುಬಂಧ ಬೆಳೆದು ಸಮ್ಮೋಹ ಸಂಬಂಧ ಮಿಡಿದೆ
ಮೂಡಿದ ಪ್ರೇಮದ ಸೊಗಸಾದ ಕಾರಂಜಿ ಬಿರಿದೆ, ಸೊಗಸಾದ ಕಾರಂಜಿ ಬಿರಿದೆ.......

ಒಡಲಾಳ ಮೊರೆದು ಒಡನಾಟ ಮೆರೆದು ಒಡನಾಡಿ ಬಾಂಧವ್ಯ ಕಂಡೆ
ಋತುಮಾನ ಮೀರಿ ಹೊಸಗಾನ ತೋರಿ ಹಿತವಾದ ಮಾಧುರ್ಯ ಮಿಂದೆ
ತೀರದ ಮೋಹದ ಇನಿದಾದ ಆನಂದ ತಂದೆ, ಇನಿದಾದ ಆನಂದ ತಂದೆ.......

ee sundara beLadingala - amruthavarshini

ಚಿತ್ರ: ಅಮೃತ ವರ್ಷಿಣಿ
ಗಾಯನ: ಎಸ್ ಪಿ ಬಾಲು, ಚಿತ್ರ
ನಟರು: ರಮೇಶ್, ಸುಹಾಸಿನಿ, ಶರತ್ ಬಾಬು

ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ ನನ್ನ ನಿನ್ನ ನಡುವಿನಲ್ಲಿ
ಈ ಸುಂದರ ಬೆಳದಿಂಗಳ ಈ ಕಂಪಿನ ಅಂಗಳದಲಿ ಹೃದಯದ ತಾಳದಲಿ
ಮೌನವೇ ರಾಗವು ಉಸಿರೇ ಭಾವವು ನಿನ್ನ ಈ ನಗೆಯ ಸವಿ ಶೃತಿಯಲ್ಲಿ ಓಹೋ.....

ದಿನ....ದಿನ.......ಕ್ಷಣ ಕ್ಷಣ ಚಿನ್ನ ನನ್ನ ನಿನ್ನ ಹಾಡಲಿ ಕುಣಿಸಿರುವೆ
ಮನ ಮನ ಮದೋತ್ತರ ಕಣ್ಣ ಅಂಚಲೇ ನಗಿಸಿರುವೆ
ಒಲವೆ........ಒಲವೆ ನಿನ್ನ ನಲಿವೊಂದೆ ವರವೆನ್ನುತ ನಾ ನಲಿವೆ
ಒಲವೆ ನಿನ್ನ ಗೆಲುವೊಂದೆ ಬಲವೆನ್ನುತ ನಾ ಬೆರೆವೆ
ನನ್ನ ಎದೆಯೊಳಗಿನ ಸ್ವರ ನುಡಿಸುವ ಕೈಗಳೇ ನಿನ್ನದು
ನಿನ್ನ ಕೈಗಳ ಜೊತೆ ಕೈ ಸೇರಿಸಿ ಜಗವ ಕೊಳ್ಳೋ ಮನಸು ನನ್ನದು

ಸಮ....ಸಮ......ಸರಿಗಮ ಸಮಾಗಮ ಇಂತ ವಿಸ್ಮಯ ಇದೆ ಮೊದಲು
ಘಮ ಘಮ ಎದೆಯೆಲ್ಲ ಇನ್ನು ಮಾತು ಬರಿ ತೊದಲು
ಉಸಿರೇ.....ಉಸಿರೇ ನಿನ್ನ ಉಸಿರಾಗಿ ಈ ಉಸಿರ ಬರೆದಿರುವೆ 
ನಮ್ಮ ಹಾಡಿಗೆ ಹೆಸರಾಗಲಿ ಕಾವೇರಿ ಕಲರವವೇ...
ನಿನ್ನ ನೆರಳಿನ ಸನಿಸನಿಹಕೆ ನನ್ನ ಕೊರಳಿನ ದನಿ ಹರಿಸಿ ಹರಿಸಿ
ನಿನ್ನ ಕನಸಿಗೆ ಹೊಸ ಹೆಸರನು ಬರೆಸಿ ಮೆರೆಸಿ ನಲಿಸಲಿರುವೆ......ಈ ಸುಂದರ......

manase - amruthavarshini

ಚಿತ್ರ: ಅಮೃತ ವರ್ಷಿಣಿ 
ಗಾಯಕ: ಎಸ್ ಪಿ ಬಾಲು 
ನಟರು: ಸುಹಾಸಿನಿ, ರಮೇಶ್, ಶರತ್ ಬಾಬು 

ಮನಸೇ ಈ ಬದುಕು ನಿನಗಾಗಿ ಬವಣೆ ನಿನಗಾಗಿ 
ನನ್ನ ಪ್ರೀತಿಯೇ ಸುಳ್ಳಾದರೆ ಜಗವೆಲ್ಲ ಸುಳ್ಳು ಅಲ್ಲವೇ 

ನಿನ್ನ ಒಂದು ಮಾತು ಸಾಕು ಮರುಮಾತು ಎಲ್ಲಿ 
ನಿನ್ನ ಒಂದು ಆಣತಿ ಸಾಕು ನಾ ಅಡಿಗಳಲ್ಲಿ 
ನಿನ್ನ ಒಂದು ಹೆಸರೇ ಸಾಕು ಉಸಿರಾಟಕಿಲ್ಲಿ    
ನಿನ್ನ ಒಂದು ಸ್ಪರ್ಶ ಸಾಕು ಈ ಜನುಮದಲ್ಲಿ 
ಮನಸೇ ನಾ ಏನೇ ಮಾಡಿದರು ನಿನ್ನ ಪ್ರೀತಿಗಲ್ಲವೇ
ಮನಸೇ ಮನಸ ಕ್ಷಮಿಸೆ......

ನನ್ನ ಪ್ರೀತಿ ಗಂಗೆ ನೀನು ಮುಡಿಸೇರಲೆಂದೇ
ಸಮಯಗಳ ಸರಪಳಿಯಲ್ಲಿ ಕೈ ಗೊಂಬೆಯಾದೆ 
ನನ್ನ ಬಾಳ ಪುಟಕೆ ನೀನು ಹೊಸ ತಿರುವು ತಂದೆ
ನಿನ್ನ ಮರೆತು ಹೋದರೆ ಈಗ ಬದುಕೇಕೆ ಮುಂದೆ
ಮನಸೇ ನಾ ಏನೇ ಮಾಡಿದರು ನಿನ್ನ ಪ್ರೀತಿಗಲ್ಲವೇ
ಮನಸೇ ಮನಸ ಹರಿಸೆ.....

tunturu alli neera haaDu - amruthavarshini

ಚಿತ್ರ: ಅಮೃತ ವರ್ಷಿಣಿ
ಗಾಯಕಿ: ಕೆ ಎಸ್ ಚಿತ್ರ
ನಟರು: ಸುಹಾಸಿನಿ, ರಮೇಶ್, ಶರತ್ ಬಾಬು

ತುಂತುರು ಅಲ್ಲಿ ನೀರ ಹಾಡು
ಕಂಪನ ಇಲ್ಲಿ ಪ್ರೀತಿ ಹಾಡು
ಹಗಲಿರಲಿ ಇರುಳಿರಲಿ ನೀನಿರದೆ ಹೇಗಿರಲಿ
ನನ್ನ ತುಂಬು ಹೃದಯ ನೀ ತುಂಬಿದೆ
ನಿನ್ನ ಈ ತುಂಬು ಪ್ರೀತಿಯನು
ಕಣ್ಣ ಹಾಡಂತೆ ಕಾಯುವೆನು

ಗಗನದ ಸೂರ್ಯ ಮನೆ ಮೇಲೆ
ನೀ ನನ್ನ ಸೂರ್ಯ ಹಣೆ ಮೇಲೆ
ಚಿಲಿಪಿಲಿ ಹಾಡು ಎಲೆ ಮೇಲೆ
ನಿನ್ನ್ನ ಪ್ರೀತಿ ಹಾಡು ಎದೆ ಮೇಲೆ
ಗಾಳಿ ಗಾಳಿ ತಂಪು ಗಾಳಿ
ಊರ ತುಂಬ ಇದೆಯೋ
ನಿನ್ನ ಹೆಸರ ಗಾಳಿಯೊಂದೆ
ನನ್ನ ಉಸಿರಲ್ಲಿದೆಯೋ
ನಮ್ಮ ಪ್ರೀತಿ ಬೆಳಗೋ ಇತಿಹಾಸವು
ನಿನ್ನ ಸಹಚಾರವೇ ಚೈತ್ರ
ಅಲ್ಲಿ ನನ್ನ ಇಂಚರ ಅಮರ

ಚೆಲುವನೆ ನಿನ್ನ ಮುಗುಳು ನಗೆ
ಹಗಲಲು ಶಶಿಯು ಬೇಡುವನು
ರಸಿಕನೆ ನಿನ್ನ ರಸಿಕತೆಗೆ
ಮದನನು ಮರುಗಿ ಸೊರಗುವನು 
ತಾಯಿ ತಂದೆ ಎಲ್ಲ ನೀನೆ
ಯಾಕೆ ಬೇರೆ ನಂಟು 
ಸಾಕು ಎಲ್ಲ ಸಿರಿಗಳ ಮೀರೋ
ನಿನ್ನ ಪ್ರೀತಿ ಗಂಟು 
ಜಗವೆಲ್ಲ ಮಾದರಿ ಈ ಪ್ರೇಮಕೆ 
ನನ್ನ ಎದೆಯಾಳೋ ಧಣಿ ನೀನೆ
ನಿನ್ನ ಸಹಚಾರಿಣಿ ನಾನೇ

Saturday, October 10, 2009

anuraaga araLo samaya - mussanje maatu

ಚಿತ್ರ: ಮುಸ್ಸಂಜೆ ಮಾತು
ಗಾಯಕ: ಕಾರ್ತಿಕ್
ನಟರು: ಸುದೀಪ್, ರಮ್ಯ

ಅನುರಾಗ ಅರಳೋ ಸಮಯ
ಮನಸುಗಳು ಮಾತಾಡೋ ಸಮಯ
ಯಾರೋ ಯಾರ ದಾರಿಯನ್ನು ಕಾಯೋ ಸಮಯ
ಮೊಗ್ಗು ಮೆಲ್ಲ ಹಿಗ್ಗಿ ಹೂವು ಆಗೋ ಸಮಯ
ಕದ್ದು ಕೊಂಡರು ಯಾರೋ ನನ್ನ ಹೃದಯ
ಹಿಂದೆ ಎಂದು ಕಂಡೆ ಇಲ್ಲ ಇಂಥ ಖುಷಿಯ .....
ಪ್ರೀತಿನ ಇದು......ಪ್ರೀತಿನ ಇದು........
ನನ್ನಲ್ಲೇ ನಾನೇ ಇಲ್ಲ ಈಗ ಯಾಕೋ ಯಾಕೋ ಯಾಕೋ....

ಚಲಿಸೋ ಓ ಬೆಳ್ಳಿ ಮೋಡ ಇಳಿದು ಬಾ ನಿನ್ನ ಕೂಡ
ಕುಳಿತು ಮಾತಾಡೊವಾಸೆ ಆಗಿದೆ
ಅವಳ ಅಂದಾನ ಕುರಿತೆ ಮನಸು ಬರೆದಂತ ಗೀತೆ
ಬಳಿಗೆ ನೀ ಬಂದು ಕೇಳಬಾರದೆ
ಇನ್ನು ಎಂದು ನೆರಳ ಹಾಗೆ ನಾನು ಇವಳ
ಜೊತೆಯಲೇ ಇರಲ ಅನುಗಾಲ
ನಡೆ ನುಡಿ ಸರಳ ಮೆಚ್ಚಿಕೊಂಡೆ ಬಹಳ
ನನಗೆ ಅಂತ ಹುಟ್ಟಿ ಬಂದ ತಾರೆ ಇವಳ 

ಪ್ರೀತಿನ ಇದು......ಪ್ರೀತಿನ ಇದು........
ನನ್ನಲ್ಲೇ ನಾನೇ ಇಲ್ಲ ಈಗ ಯಾಕೋ ಯಾಕೋ ಯಾಕೋ....

ನಮ್ಮ ಈ ಪುಟ್ಟ ಗೂಡು ಇಲ್ಲಿ ಪ್ರೀತಿಯ ಹಾಡು
ಗುನುಗೋ ಈ ಸಮಯ ಹೀಗೆ ಇರಲಿ
ಜೊತೆಗೆ ನಡೆವಾಗ ಹೀಗೆ ಬಾಳು ಒಂದಾದ ಹಾಗೆ
ಅನಿಸೋ ಈ ಸಮಯ ಎಂದು ಸಿಗಲಿ
ಮಾತು ಮರೆತು ಹೋಗಿದೆ ಮನಸು ಕಳೆದು ಹೋಗಿದೆ
ಕಂಗಳಂತೆ ನೋಡಲು ಹೃದಯ ಕಲೆಯಬಾರದೆ
ನಿನ್ನ ನಾನು ನೋಡದೆ ಒಂದು ಕ್ಷಣ ಜಾರದೆ
ಸಮಯ ಮೀರಿ ಹೋಗೊ ಮುನ್ನ ಹೇಳು ಆಸೆಯಾ........

ninna nodalento - mussanje maatu

ಚಿತ್ರ: ಮುಸ್ಸಂಜೆ ಮಾತು
ಹಾಡಿದವರು: ಸೋನು ನಿಗಮ್, ಶ್ರೇಯ ಗೋಶಲ್
ನಟರು: ಸುದೀಪ್, ರಮ್ಯ

ನಿನ್ನ ನೋಡಲೆಂತೋ ಮಾತನಾಡಲೆಂತೋ
ಮನಸ ಕೇಳಲೆಂತೋ ಪ್ರೀತಿ ಹೇಳಲೆಂತೋ
ಆಹಾ ಒಂಥರಾ ಥರಾ ಹೇಳಲೊಂಥರ ಥರ ಕೇಳಲೊಂಥರ ಥರ
ಹೇಳಲೊಂಥರ ಥರ ಕೇಳಲೊಂಥರ ಥರ.......

ಕಣ್ಣಿಗೇನು ಕಾಣದೆ ಸ್ಪರ್ಶವೇನು ಇಲ್ಲದೆ
ಏನೋ ನನ್ನ ಕಾಡಿದೆ ಏನು ಅರ್ಥವಾಗದೆ
ಹಗಲು ರಾತ್ರಿ ನಿನ್ನದೇ ನೂರು ನೆನಪು ಮೂಡಿದೆ
ನನ್ನಲೇನೋ ಆಗಿದೆ ಹೇಳಲೇನು ಆಗದೆ
ಮನಸು ಮಾಯವೆಂತೋ ಮಧುರ ಭಾವವೆಂತೋ
ಪಯಣ ಎಲ್ಲಿಗೆಂತೋ ನಯನ ಸೇರಲೆಂತೋ
ಮಿಲನವಾಗಲೆಂತೋ  ಗಮನ ಎಲ್ಲೋ ಎಂತೋ
ಆಹಾ ಒಂಥರಾ ಥರ ಹೇಳಲೊಂಥರ ಥರ ಕೇಳಲೊಂಥರ ಥರ
ಹೇಳಲೊಂಥರ ಥರ ಕೇಳಲೊಂಥರ ಥರ

ಮೆಲ್ಲ ಮೆಲ್ಲ ಮೆಲ್ಲುವ ಸನ್ನೆಯಲ್ಲೆ ಕೊಲ್ಲುವ 
ಸದ್ದೇ ಇರದ ಉತ್ಸವ ಪ್ರೀತಿಯೊಂದೆ ಅಲ್ಲವ
ಘಲ್ಲು ಘಲ್ಲು ಎನ್ನುವ ಹೃದಯ ಗೆಜ್ಜೆ ನಾದವ
ಪ್ರೀತಿ ತಂದ ರಾಗವ ತಾಳಲೆಂತೋ ಭಾವವ
ಹೃದಯದಲ್ಲಿ ಎಂತೋ ಉದಯವಾಯಿತೆಂತೋ
ಸನಿಹವಾಗಲೆಂತೋ ಕನಸ ಕಾಣಲೆಂತೋ 
ಹರುಷ ಏನೋ ಎಂತೋ ಸೊಗಸ ಹೇಳಲೆಂತೋ

ಆಹಾ ಒಂಥರಾ ಥರ ಹೇಳಲೊಂಥರ ಥರ ಕೇಳಲೊಂಥರ ಥರ
ಹೇಳಲೊಂಥರ ಥರ ಕೇಳಲೊಂಥರ ಥರ
 

ivanu geLeyanalla - mungaru maLe

ಚಿತ್ರ: ಮುಂಗಾರು ಮಳೆ
ಹಾಡಿದವರು: ಶ್ರೇಯ ಘೋಶಾಲ್
ನಟರು: ಗಣೇಶ್, ಪೂಜಾ ಗಾಂಧಿ

ಇವನು ಗೆಳೆಯನಲ್ಲ ಗೆಳತಿ ನಾನು ಮೊದಲೇ ಅಲ್ಲ
ಇವನು ಇನಿಯನಲ್ಲ ತುಂಬಾ ಸನಿಹ ಬಂದಿಹನಲ್ಲ
ನೋವಿನಲ್ಲೂ ನಗುತಿಹನಲ್ಲ ಯಾಕೆ ಈ ಥರ
ಜಾಣ ಮನವೇ ಕೇಳು ಜಾರಬೇಡ ಇವನ ಕಡೆಗೆ
ಯಾಕೆ ನಿನಗೆ ಸಲ್ಲದ ಸಲಿಗೆ, ಇರಲಿ ಅಂತರ

ಒಲವ ಹಾದಿಯಲ್ಲಿ ಇವನು ನನಗೆ ಹೂವೋ ಮುಳ್ಲೋ      
ಮನದ ಕಡಲಿನಲ್ಲಿ ಇವನು ಅಲೆಯೋ ಭೀಕರ ಸುಳಿಯೊ
ಅರಿಯದಂಥ ಹೊಸ ಕಂಪನವೊ ಯಾಕೋ ಕಾಣೆನೊ
ಅರಿತೊ ಮರೆತೊ ಜೀವ ವಾಲದಂತೆ ಇವನ ಕಡೆಗೆ
ಸೋಲದಂತೆ ಕಾಯೇ ಮನವೆ ಉಳಿಸು ನನ್ನನು

ಇವನು ಇನಿಯಲ್ಲ ತುಂಬ ಸನಿಹ ಬಂದಿಹನಲ್ಲ

ತಿಳಿದು ತಿಳಿದು ಇವನು ತನ್ನ ತಾನೇ ಸುಡುತಿಹನಲ್ಲ
ಒಲುಮೆ ಎಂಬ ಸುಳಿಗೆ ಈಜು ಬರದೆ ಇಳಿದಿಹನಲ್ಲ
ಸಾವಿನಲ್ಲು ನಗುವುದ ಬಲ್ಲ ಏನೋ ಕಳವಳ
ಮುಳುಗುವವನ ಕೂಗು ಚಾಚುವಂತೆ ಮಾಡಿದೆ ಕೈಯ
ಜಾರಿ ಬಿಡುವುದೇ ಈ ಹೃದಯ ಏನೋ ತಳಮಳ

ಇವನು ಇನಿಯನಲ್ಲ ತುಂಬ ಸನಿಹ ಬಂದಿಹನಲ್ಲ

aaha ee bedarubombege - gaalipata

ಚಿತ್ರ: ಗಾಳಿಪಟ
ಹಾಡಿದವರು: ಅನುರಾಧ ಶ್ರೀರಾಮ್, ಉದಿತ್ ನಾರಾಯಣ್
ನಟರು: ದಿಗಂತ್, ನೀತು ಮತ್ತು ಇತರರು

ಆಹಾ ಈ ಬೆದರು ಬೊಂಬೆಗೆ ಜೀವ ಬಂದಿರುವ ಹಾಗಿದೆ
ಎಹೆ ಹೆಚ್ಚೇನು ಹೇಳಲಿ ಹುಚ್ಚು ಹೆಚ್ಚಾಗಿ ಹೋಗಿದೆ
ನೆನಪಿನ ಜಾತ್ರೆಯಲಿ ಅಲೆದು, ನಾ ಕನಸಿನ ಕನ್ನಡಿಯ ಕೊಳ್ಳಲೆ
ಹೇ ನಿನ್ನಯ ದಾರಿಯಲಿ ಅನುದಿನ, ಹೃದಯದ ಅಂಗಡಿಯ ತೆರೆಯಲೆ

ಕೆನ್ನೆಯ ಗುಳಿಯೆ ನಿನ್ನ ಕೀರುತಿಯೆ
ಮುಂಗೋಪವೇನು ನಿನ್ನ ಮೂಗುತಿಯೆ
ಸೂರ್ಯನ ಮುಖದಲ್ಲಿ ಮೀಸೆಯ ಬರೆಯುವೆಯ
ಚಂದ್ರನ ಕರೆದಿಲ್ಲಿ ದೋಸೆಯಾ ತಿನಿಸುವೆಯ
ಕುಂಟೋ ಬಿಲ್ಲೆಯಲಿ ಮನಸು ತಲುಪುವೆಯಾ
ಕಳೆದು ಹೋಗಿರುವೆ ದಾರಿ ತಿಳಿಸುವೆಯ

ಪ್ರೀತಿಗೆ ಯಾಕೆ ಈ ಉಪವಾಸ
ಯಾತಕ್ಕು ಇರಲಿ ನಿನ್ನ ಸಹವಾಸ
ಅಂಚೆಯ ಪೆಟ್ಟಿಗೆಗೆ ಹೃದಯವ ಹಾಕಿರುವೆ
ನೆನಪಿನ ಕೊಟ್ಟಿಗೆಗೆ ನಿನ್ನನ್ನೇ ನೂಕಿರುವೆ
ನಂಬಿ ಕೆಟ್ಟಿರುವೆ ಏನು ಪರಿಹಾರ
ನಿನಗೆ ಕಟ್ಟಿರುವೆ ಮನದ ಗಡಿಯಾರ

aakasha ishte yaakideyo - gaalipata

ಚಿತ್ರ: ಗಾಳಿಪಟ
ಹಾಡಿದವರು: ಕುನಾಲ್ ಗಾಂಜಾವಾಲ
ನಟರು: ಗಣೇಶ್, ಡೈಸಿ ಮತ್ತು ಇತರರು

ನನೈ ನನನೈ..... ನನೈ ನನನೈ...... ನನೈ ನನನೈನಿ..... ನನೈ ನನನೈ

ಆಕಾಶ ಇಷ್ಟೇ ಯಾಕಿದೆಯೋ
ಈ ಭೂಮಿ ಕಷ್ಟ ಆಗಿದೆಯೋ
ಹಂಚೋಣ ಈ ಪ್ರೀತಿ ಬೇಕಿಲ್ಲ ರಸೀತಿ
ಮುಗಿಲನ್ನೆ ಮುದ್ದಾಡಿ ರೆಕ್ಕೆ ಬಿಚ್ಚಿ ಹಾರೋ ನಾವೆ.....ಗಾಳಿಪಟ  ಗಾಳಿಪಟ ಗಾಳಿಪಟ

ಕನಸಿನ ನೋಟಿಗೆ ಚಿಲ್ಲರೆ ಬೇಕೇ
ನಗುವನ್ನು ಎಲ್ಲೋ ಮರೆತಿರುವೇಕೆ
ಕಿಸೆಯಲ್ಲಿ ಕದ್ದ ಚಂದ್ರನ ಚೂರು
ನಮ್ಮನ್ನು ಪತ್ತೆ ಮಾಡುವರಾರು
ಹೋಳಾಗಿದೆ ಈ ಭೂಪಟ
ಹಾರಾಟವೇ ನಮ್ಮ ಹಟ.....ಗಾಳಿಪಟ ಗಾಳಿಪಟ ಗಾಳಿಪಟ

ಕಾಮನಬಿಲ್ಲು ಬಾಡಿಗೆಗುಂಟೆ
ಸ್ನೇಹಕ್ಕು ಕೂಡ ರೇಶನ್ ಬಂತೆ
ಸಂಭ್ರಮಕಿಲ್ಲ ಸೀಸನ್ ಟಿಕೇಟು
ಏರಿಸಬೇಕು ನಮ್ಮ ರಿಬೇಟು
ಇದು ಪ್ರೀತಿಯ ಚಿತ್ರಪಟ
ಈ ದೋಸ್ತಿಯೆ ನಮ್ಮ ಚಟ....ಗಾಳಿಪಟ ಗಾಳಿಪಟ ಗಾಳಿಪಟ

ಆಕಾಶ ಇಷ್ಟೇ ಯಾಕಿದೆಯೋ
ಈ ಭೂಮಿ ಕಷ್ಟ ಆಗಿದೆಯೋ
ಇಲ್ಲೇನೋ ಸರಿಯಿಲ್ಲ ಇನ್ನೇನೋ ಬೇಕಲ್ಲ
ನಕ್ಷತ್ರ ಲೋಕಕ್ಕೆ ಲಗ್ಗೆ ಇಟ್ಟು ಹಾರೋ ನಾವೆ.....ಗಾಳಿಪಟ ಗಾಳಿಪಟ ಗಾಳಿಪಟ