ಚಿತ್ರ: ವಂಶಿ
ಗಾಯನ: ರಾಜೇಶ್ ಕೃಷ್ಣನ್, ಹರಿಣಿ
ನಟರು: ಪುನೀತ್ ರಾಜ್ ಕುಮಾರ್, ನಿಕಿತ
ಅಮಲು ಅಮಲು ಅಮಲು
ಗೆಳತಿ ನೀನು ಸಿಗಲು
ಮರುಳೀಗ ಮಿತಿ ಮೀರಿ ನನಗಂತು ದಿಗಿಲು
ಅಮಲು ಅಮಲು ಅಮಲು
ಗೆಳೆಯ ನೀನು ನಗಲು
ನನಗಂತು ಯಾರಿಲ್ಲ ನಿನಗಿಂತ ಮಿಗಿಲು
ಬಾರೆ ಬಳಿ ಬಾರೆ ಏಕೆ ಕಾಲ ಹರಣ
ಎಲ್ಲ ಪಿಸು ಮಾತು ಮುತ್ತಾಗೋ ಲಕ್ಷಣ
ತಿಳಿಯದೆ ತೆರೆದಿದೆ ಕನಸಿನ ಕದ
ಅರಿಯದೆ ಅರಳಿದೆ ಹಸಿ ಬಿಸಿ ಪದ
ಹರೆಯ ನೋಡಿದೆ ಮಾತಾಡಲು......
ನಿನ್ನ ಉಸಿರಿಂದ ನೇರ ಜೀವದಾನ
ಜೀವ ಹಸಿರಾಗಿ ಬದುಕೀಗ ಶ್ರಾವಣ
ಪರದೆಯ ಸರಿಸಿದೆ ಪರವಶ ಮನ
ಹೃದಯವೆ ಅರಿತಿದೆ ಹೃದಯದ ಗುಣ
ಸಮಯ ನಿಂತಿದೆ ಹಾರೈಸಲು.....
send in ur requests for kannada lyrics.... If a song is in kannada script and you need it in English script, just leave a comment. Cheers!!
Monday, October 12, 2009
jote joteyali preeti joteyali - vamshi
ಚಿತ್ರ: ವಂಶಿ
ಗಾಯನ: ಪುನೀತ್ ರಾಜಕುಮಾರ್, ಶ್ರೇಯ ಗೋಶಲ್
ನಟರು: ಪುನೀತ್ ರಾಜಕುಮಾರ್, ನಿಕಿತ
ಜೊತೆ ಜೊತೆಯಲಿ ಪ್ರೀತಿ ಜೊತೆಯಲಿ
ನಡೆದಿದೆ ದಿನ ಬಯಸಿ ಬಯಸಿ
ಸಿಹಿ ಸಿಹಿ ಸಿಹಿ ಮಾತು ಸಿಹಿ ಸಿಹಿ
ನುಡಿದಿದೆ ಮನ ಹರಸಿ ಹರಸಿ
ಹೀಗೆ ಸಾಗಲಿ ನಮ್ಮೀ ಪಯಣ
ಹಾಡಿ ನಲಿದು ಸ ಸ ರಿ ರಿ ಗ ಗ ಮ ಮ
ದಿನ ದಿನ ದಿನ ಏನಾದರು ಚಿನ್ನ ಕರಗದು ಈ ಪ್ರೇಮ
ಕ್ಷಣ ಕ್ಷಣ ಕ್ಷಣ ನೀನಿಲ್ಲದ ಕ್ಷಣ ಸಹಿಸದು ಈ ಪ್ರೇಮ
ಆ ಬಾನಿಗಾದರೆ ಮಿನುಗು ತಾರೆ
ಈ ಬಾಳಿಗಾಸರೆ ನೀನೆ ಬಾರೆ
ನಾವಾಡೋ ಒಲವಿನ ಮಾತು ಕೇಳಿ
ಹಾರಾಡೋ ಗಿಳಿಗಳ ಗಾನ ಸ ಸ ರಿ ರಿ ಗ ಗ ಮ ಮ ......
ಕಣ ಕಣ ಕಣ ಹೊಸ ಹುರುಪಿನ ಚಿಲುಮೆಯು ಈ ಪ್ರೇಮ
ಮಿಣ ಮಿಣ ಮಿಣ ಹೊಸ ಬೆಳಕಿನ ಹೊಳಪಿದು ಈ ಪ್ರೇಮ
ಏಳೇಳು ಜನುಮದಾ ಜೋಡಿಯಾಗಿ
ಹೀಗೇನೆ ಬಾಳುವೆ ಪ್ರೇಮಿಯಾಗಿ
ಈ ನಮ್ಮ ಪ್ರೀತಿಯ ನೋಡಿ ನೋಡಿ
ಲೋಕವೇ ಹಾಡಿದೆ ಹಾಡು ಸ ಸ ರಿ ರಿ ಗ ಗ ಮ ಮ ......
ಗಾಯನ: ಪುನೀತ್ ರಾಜಕುಮಾರ್, ಶ್ರೇಯ ಗೋಶಲ್
ನಟರು: ಪುನೀತ್ ರಾಜಕುಮಾರ್, ನಿಕಿತ
ಜೊತೆ ಜೊತೆಯಲಿ ಪ್ರೀತಿ ಜೊತೆಯಲಿ
ನಡೆದಿದೆ ದಿನ ಬಯಸಿ ಬಯಸಿ
ಸಿಹಿ ಸಿಹಿ ಸಿಹಿ ಮಾತು ಸಿಹಿ ಸಿಹಿ
ನುಡಿದಿದೆ ಮನ ಹರಸಿ ಹರಸಿ
ಹೀಗೆ ಸಾಗಲಿ ನಮ್ಮೀ ಪಯಣ
ಹಾಡಿ ನಲಿದು ಸ ಸ ರಿ ರಿ ಗ ಗ ಮ ಮ
ದಿನ ದಿನ ದಿನ ಏನಾದರು ಚಿನ್ನ ಕರಗದು ಈ ಪ್ರೇಮ
ಕ್ಷಣ ಕ್ಷಣ ಕ್ಷಣ ನೀನಿಲ್ಲದ ಕ್ಷಣ ಸಹಿಸದು ಈ ಪ್ರೇಮ
ಆ ಬಾನಿಗಾದರೆ ಮಿನುಗು ತಾರೆ
ಈ ಬಾಳಿಗಾಸರೆ ನೀನೆ ಬಾರೆ
ನಾವಾಡೋ ಒಲವಿನ ಮಾತು ಕೇಳಿ
ಹಾರಾಡೋ ಗಿಳಿಗಳ ಗಾನ ಸ ಸ ರಿ ರಿ ಗ ಗ ಮ ಮ ......
ಕಣ ಕಣ ಕಣ ಹೊಸ ಹುರುಪಿನ ಚಿಲುಮೆಯು ಈ ಪ್ರೇಮ
ಮಿಣ ಮಿಣ ಮಿಣ ಹೊಸ ಬೆಳಕಿನ ಹೊಳಪಿದು ಈ ಪ್ರೇಮ
ಏಳೇಳು ಜನುಮದಾ ಜೋಡಿಯಾಗಿ
ಹೀಗೇನೆ ಬಾಳುವೆ ಪ್ರೇಮಿಯಾಗಿ
ಈ ನಮ್ಮ ಪ್ರೀತಿಯ ನೋಡಿ ನೋಡಿ
ಲೋಕವೇ ಹಾಡಿದೆ ಹಾಡು ಸ ಸ ರಿ ರಿ ಗ ಗ ಮ ಮ ......
moDada oLage - payaNa
ಚಿತ್ರ: ಪಯಣ
ಗಾಯನ: ಸೋನು ನಿಗಮ್
ನಟರು: ರವಿಶಂಕರ್, ರಮನಿತು ಚೌದರಿ
ಮೋಡದ ಒಳಗೆ ಹನಿಗಳ ಬಳಗ
ಒಂಟಿ ಕಾಲಲಿ ಕಾದು ನಿಂತಿವೆ ಭೂಮಿಗೆ ಬರಲು
ನನ್ನೊಳಗೊಳಗೆ ಒಲವಿನ ಯೋಗ
ತುದಿಗಾಲಲಿ ನಿಂತು ಕಾದಿದೆ ಚಿಮ್ಮುತ ಬರಲು
ಕಾವ್ಯ ಕುಸುರಿ ಗೊತ್ತಿಲ್ಲ ಹಾಡುಗಾರ ನಾನಲ್ಲ
ನಿನ್ನ ಪ್ರೀತಿ ಮಾಡುವೆ ನಾನು ಇಷ್ಟೇ ಹಂಬಲ.....
ನಿಂತಲಿ ನಾ ನಿಲಲಾರೆ ಎಲ್ಲರು ಹೀಗನುತಾರೆ
ಏತಕೋ ನಾ ಕಾಣೆನು ಈ ತಳಮಳ
ಪ್ರೀತಿ ನನ್ನ ಬಲೆಯೊಳಗೊ
ನಾನೆ ಪ್ರೀತಿ ಬಲೆಯೊಳಗೊ
ಕಾಡಿದೆ ಕಂಗೆಡಿಸಿದೆ ಸವಿ ಕಳವಳ
ಖಾಲಿ ಜೇಬಿನ ಮಜುನು ಪ್ರೀತಿ ಒಡೆಯನಾಗುವೆನು
ನಿನ್ನ ಬಿಟ್ಟು ಹೇಗಿರಬೇಕು ಹೇಳೇ ಪ್ರಾಣವೇ
ನಾನು ನಿನ್ನ ಕಣ್ಣೊಳಗೆ ಮಾಯ ಕನ್ನಡಿ ನೋಡಿರುವೆ
ನನ್ನನು ಬರಸೆಳೆಯುವ ಕಲೆ ನಿನ್ನದು
ಯಾವ ಜನುಮದ ಸಂಗಾತಿ ಈಗಲೂ ಸಹ ಜೊತೆಗಾತಿ
ಅದ್ಭುತ ಈ ಅತಿಶಯ ನಾ ತಾಳೆನು
ನಾನು ಬಡವ ಬದುಕಿನಲಿ ಸಾಹುಕಾರ ಪ್ರೀತಿಯಲಿ
ನೀನೆ ನನ್ನ ನಾಡಿಯಲಿ ಜೀವ ಎಂದಿಗೂ......
ಗಾಯನ: ಸೋನು ನಿಗಮ್
ನಟರು: ರವಿಶಂಕರ್, ರಮನಿತು ಚೌದರಿ
ಮೋಡದ ಒಳಗೆ ಹನಿಗಳ ಬಳಗ
ಒಂಟಿ ಕಾಲಲಿ ಕಾದು ನಿಂತಿವೆ ಭೂಮಿಗೆ ಬರಲು
ನನ್ನೊಳಗೊಳಗೆ ಒಲವಿನ ಯೋಗ
ತುದಿಗಾಲಲಿ ನಿಂತು ಕಾದಿದೆ ಚಿಮ್ಮುತ ಬರಲು
ಕಾವ್ಯ ಕುಸುರಿ ಗೊತ್ತಿಲ್ಲ ಹಾಡುಗಾರ ನಾನಲ್ಲ
ನಿನ್ನ ಪ್ರೀತಿ ಮಾಡುವೆ ನಾನು ಇಷ್ಟೇ ಹಂಬಲ.....
ನಿಂತಲಿ ನಾ ನಿಲಲಾರೆ ಎಲ್ಲರು ಹೀಗನುತಾರೆ
ಏತಕೋ ನಾ ಕಾಣೆನು ಈ ತಳಮಳ
ಪ್ರೀತಿ ನನ್ನ ಬಲೆಯೊಳಗೊ
ನಾನೆ ಪ್ರೀತಿ ಬಲೆಯೊಳಗೊ
ಕಾಡಿದೆ ಕಂಗೆಡಿಸಿದೆ ಸವಿ ಕಳವಳ
ಖಾಲಿ ಜೇಬಿನ ಮಜುನು ಪ್ರೀತಿ ಒಡೆಯನಾಗುವೆನು
ನಿನ್ನ ಬಿಟ್ಟು ಹೇಗಿರಬೇಕು ಹೇಳೇ ಪ್ರಾಣವೇ
ನಾನು ನಿನ್ನ ಕಣ್ಣೊಳಗೆ ಮಾಯ ಕನ್ನಡಿ ನೋಡಿರುವೆ
ನನ್ನನು ಬರಸೆಳೆಯುವ ಕಲೆ ನಿನ್ನದು
ಯಾವ ಜನುಮದ ಸಂಗಾತಿ ಈಗಲೂ ಸಹ ಜೊತೆಗಾತಿ
ಅದ್ಭುತ ಈ ಅತಿಶಯ ನಾ ತಾಳೆನು
ನಾನು ಬಡವ ಬದುಕಿನಲಿ ಸಾಹುಕಾರ ಪ್ರೀತಿಯಲಿ
ನೀನೆ ನನ್ನ ನಾಡಿಯಲಿ ಜೀವ ಎಂದಿಗೂ......
kann kanna salige - navagraha
ಚಿತ್ರ: ನವಗ್ರಹ
ಗಾಯನ: ಸೋನು ನಿಗಮ್
ನಟರು: ದರ್ಶನ್ ಮತ್ತು ಇತರರು
ಕಣ್ ಕಣ್ಣ ಸಲಿಗೆ, ಸಲಿಗೆ ಅಲ್ಲ ಸುಲಿಗೆ
ನೀನಿನ್ನು ನನಗೆ, ನನಗೆ ನನ್ನನಗೆ.....
ಥರ ಥರ ಹೊಸ ಥರ, ಒಲವಿನ ಅವಸರ
ಹೃದಯಾನೆ ಜೋಕಾಲಿ.....
ಋತು ಏಳು ಭೂಮಿಯ ಮೇಲೆ
ಪ್ರಣಯಾನೆ ಎಂಟನೆ ಓಲೆ
ತಿಳಿ ತಿಳಿ ಪ್ರೇಮ
ಇರೋದಂತೂ ನಾಲ್ಕೇ ವೇದ
ಪ್ರೀತಿ ತಾನೇ ಪಂಚಮ ವೇದ
ನಿಜ ನಿಜ ಪ್ರೇಮ
ನಾನು ನಿನ್ನಲ್ಲಿ ಮೆಚ್ಚಿದ ಅಂಶವೇ ಪ್ರೀತಿ
ನೀನು ನನ್ನನು ಒಪ್ಪದೆ ಹೋದರೆ ಏನೋ ಭೀತಿ....
ಸಹಿ ಮಾಡು ನನ್ನೆದೆ ತುಂಬ
ನೀನೆ ಅದರ ತುಂಬ ತುಂಬ
ನಂಬು ನನ್ನ ನಲ್ಲೆ
ಒಂದೆ ಒಂದು ಮಾತು ಕೇಳು
ಎಲ್ಲ ಜನುಮ ನನ್ನನೆ ಆಳು
ನೀನೆ ನನ್ನ ಬಾಳು
ಯಾವ ತುದಿಯಲಿ ಇದ್ದರು ಭೂಮಿಯ ಮೇಲೆ
ನಾನು ನಿನ್ನನೆ ಕಾಯುವೆ ಪ್ರೀತಿಸೆ, ಪ್ರೀತಿ ಮಾಡೇ....
ಗಾಯನ: ಸೋನು ನಿಗಮ್
ನಟರು: ದರ್ಶನ್ ಮತ್ತು ಇತರರು
ಕಣ್ ಕಣ್ಣ ಸಲಿಗೆ, ಸಲಿಗೆ ಅಲ್ಲ ಸುಲಿಗೆ
ನೀನಿನ್ನು ನನಗೆ, ನನಗೆ ನನ್ನನಗೆ.....
ಥರ ಥರ ಹೊಸ ಥರ, ಒಲವಿನ ಅವಸರ
ಹೃದಯಾನೆ ಜೋಕಾಲಿ.....
ಋತು ಏಳು ಭೂಮಿಯ ಮೇಲೆ
ಪ್ರಣಯಾನೆ ಎಂಟನೆ ಓಲೆ
ತಿಳಿ ತಿಳಿ ಪ್ರೇಮ
ಇರೋದಂತೂ ನಾಲ್ಕೇ ವೇದ
ಪ್ರೀತಿ ತಾನೇ ಪಂಚಮ ವೇದ
ನಿಜ ನಿಜ ಪ್ರೇಮ
ನಾನು ನಿನ್ನಲ್ಲಿ ಮೆಚ್ಚಿದ ಅಂಶವೇ ಪ್ರೀತಿ
ನೀನು ನನ್ನನು ಒಪ್ಪದೆ ಹೋದರೆ ಏನೋ ಭೀತಿ....
ಸಹಿ ಮಾಡು ನನ್ನೆದೆ ತುಂಬ
ನೀನೆ ಅದರ ತುಂಬ ತುಂಬ
ನಂಬು ನನ್ನ ನಲ್ಲೆ
ಒಂದೆ ಒಂದು ಮಾತು ಕೇಳು
ಎಲ್ಲ ಜನುಮ ನನ್ನನೆ ಆಳು
ನೀನೆ ನನ್ನ ಬಾಳು
ಯಾವ ತುದಿಯಲಿ ಇದ್ದರು ಭೂಮಿಯ ಮೇಲೆ
ನಾನು ನಿನ್ನನೆ ಕಾಯುವೆ ಪ್ರೀತಿಸೆ, ಪ್ರೀತಿ ಮಾಡೇ....
i love you - moggina manassu....
ಚಿತ್ರ: ಮೊಗ್ಗಿನ ಮನಸ್ಸು
ಗಾಯನ: ಸೋನು ನಿಗಮ್
ನಟರು: ಯಶ್, ರಾಧಿಕ ಪಂಡಿತ್
i love you......ಓ....
i love you......
ನೂರಾರು ಪ್ರೀತಿ ಮಾತು ನೂರಾರು ಸಾರಿ ಆಡಿ
ನೀನೇನೆ ಜೀವ ಎಂದು ನೂರಾರು ಆಣೆ ಮಾಡಿ
ಕಾರಣವೇ ಹೇಳದೆ ಏಕೆ ನನ್ನ ಬಿಟ್ಟು ಹೋದೆ
ನೀನೆಲ್ಲೇ ಹೋದರು ಏನು ನೀನನ್ನ ಮರೆತರು ಏನು
ನೀನೇನೆ ಮಾಡಿದರೇನು ನಿನ್ನನ್ನೇ ಮರೆಯುವೆಯೇನು
ನಿನ್ನಲ್ಲೇ ನಾನು ಅವಿತು ಕುಳಿತಿಲ್ಲವೇನು....
ನೀನು ಇರದೇ ಬದುಕುವುದನ್ನು ಕಲಿಯೋ ಸಾಹಸದಲ್ಲಿ
ನಿನ್ನ ನೆನಪೆ ಎದುರು ನಿಂತು ಸೋತಿಹೆ ನಾನು ಇಲ್ಲಿ
ಬಿಟ್ಟು ಹೋದ ಆ ಘಳಿಗೆ ನೆನೆದು ನೆನೆದು ಈ ಘಳಿಗೆ
ಜಾರುವ ಕಂಬನಿ ಜಾರಲು ಬಿಟ್ಟು ಸುಮ್ಮನೆ ಹಾಗೆ ಕೂತಿರುವೆ......
ನನ್ನೆದೆ ಗುಡಿಯ ನಂದಾದೀಪ ಆರಿಸಿ ಹೋದೆ ನೀನು
ಕತ್ತಲೆ ಕೋಣೆಯ ಒಳಗೂ ನಿನ್ನ ನೆನಪಲೆ ಬೆಂದೆ ನಾನು
ದೂರ ಹೋದೆ ನೀನೆಂದು ದೂರಲಾರೆ ನಿನ್ನೆಂದು
ನಿನ್ನ ನೆನಪ ಬಂಧನದಲ್ಲೇ ಸಾಯೋವರೆಗು ಕಾಯುವೆನು.....
ಗಾಯನ: ಸೋನು ನಿಗಮ್
ನಟರು: ಯಶ್, ರಾಧಿಕ ಪಂಡಿತ್
i love you......ಓ....
i love you......
ನೂರಾರು ಪ್ರೀತಿ ಮಾತು ನೂರಾರು ಸಾರಿ ಆಡಿ
ನೀನೇನೆ ಜೀವ ಎಂದು ನೂರಾರು ಆಣೆ ಮಾಡಿ
ಕಾರಣವೇ ಹೇಳದೆ ಏಕೆ ನನ್ನ ಬಿಟ್ಟು ಹೋದೆ
ನೀನೆಲ್ಲೇ ಹೋದರು ಏನು ನೀನನ್ನ ಮರೆತರು ಏನು
ನೀನೇನೆ ಮಾಡಿದರೇನು ನಿನ್ನನ್ನೇ ಮರೆಯುವೆಯೇನು
ನಿನ್ನಲ್ಲೇ ನಾನು ಅವಿತು ಕುಳಿತಿಲ್ಲವೇನು....
ನೀನು ಇರದೇ ಬದುಕುವುದನ್ನು ಕಲಿಯೋ ಸಾಹಸದಲ್ಲಿ
ನಿನ್ನ ನೆನಪೆ ಎದುರು ನಿಂತು ಸೋತಿಹೆ ನಾನು ಇಲ್ಲಿ
ಬಿಟ್ಟು ಹೋದ ಆ ಘಳಿಗೆ ನೆನೆದು ನೆನೆದು ಈ ಘಳಿಗೆ
ಜಾರುವ ಕಂಬನಿ ಜಾರಲು ಬಿಟ್ಟು ಸುಮ್ಮನೆ ಹಾಗೆ ಕೂತಿರುವೆ......
ನನ್ನೆದೆ ಗುಡಿಯ ನಂದಾದೀಪ ಆರಿಸಿ ಹೋದೆ ನೀನು
ಕತ್ತಲೆ ಕೋಣೆಯ ಒಳಗೂ ನಿನ್ನ ನೆನಪಲೆ ಬೆಂದೆ ನಾನು
ದೂರ ಹೋದೆ ನೀನೆಂದು ದೂರಲಾರೆ ನಿನ್ನೆಂದು
ನಿನ್ನ ನೆನಪ ಬಂಧನದಲ್ಲೇ ಸಾಯೋವರೆಗು ಕಾಯುವೆನು.....
ninnindale - milana
ಚಿತ್ರ: ಮಿಲನ
ಗಾಯನ: ಸೋನು ನಿಗಮ್
ನಟರು: ಪುನೀತ್ ರಾಜ್ ಕುಮಾರ್, ಪಾರ್ವತಿ
ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ
ನಿನ್ನಿಂದಲೇ ನಿನ್ನಿಂದಲೇ ಮನಸಿಂದು ಕುಣಿದಾಡಿದೆ
ಈ ಎದೆಯಲ್ಲಿ ಸಿಹಿಯಾದ ಕೋಲಾಹಲ
ನನ್ನೆದುರಲ್ಲೇ ನೀ ಹೀಗೆ ಬಂದಾಗಲೇ
ನಿನ್ನ ತುಟಿಯಲ್ಲಿ ನಗುವಾಗುವ ಹಂಬಲ
ನಾ ನಿಂತಲ್ಲೇ ಹಾಳಾದೆ ನಿನ್ನಿಂದಲೇ....
ಇರುಳಲ್ಲಿ ಜ್ವರದಂತೆ ಕಾಡಿ ಈಗ
ಹಾಯಾಗಿ ನಿಂತಿರುವೆ ಸರಿಯೇನು
ಬೇಕಂತಲೇ ಮಾಡಿ ಏನೋ ಮೋಡಿ
ಇನ್ನೆಲ್ಲೋ ನೋಡುವ ಪರಿಯೇನು
ಈ ಮಾಯೆಗೆ ಈ ಮರುಳಿಗೆ ನಿನ್ನಿಂದ ಕಳೆ ಬಂದಿದೆ.......ನಿನ್ನಿಂದಲೆ....
ಹೋದಲ್ಲಿ ಬಂದಲ್ಲಿ ಎಲ್ಲ ನಿನ್ನ
ಸೊಂಪಾದ ಚೆಲುವಿನ ಗುಣಗಾನ
ಕೇದಿಗೆ ಗರಿಯಂಥ ನಿನ್ನ ನೋಟ
ನನಗೇನೋ ಅಂದಂತೆ ಅನುಮಾನ
ನಿನ್ನಿಂದಲೆ ಸದ್ದಿಲ್ಲದೆ ಮುದ್ದಾದ ಕರೆ ಬಂದಿದೆ....ನಿನ್ನಿಂದಲೆ....
ಗಾಯನ: ಸೋನು ನಿಗಮ್
ನಟರು: ಪುನೀತ್ ರಾಜ್ ಕುಮಾರ್, ಪಾರ್ವತಿ
ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ
ನಿನ್ನಿಂದಲೇ ನಿನ್ನಿಂದಲೇ ಮನಸಿಂದು ಕುಣಿದಾಡಿದೆ
ಈ ಎದೆಯಲ್ಲಿ ಸಿಹಿಯಾದ ಕೋಲಾಹಲ
ನನ್ನೆದುರಲ್ಲೇ ನೀ ಹೀಗೆ ಬಂದಾಗಲೇ
ನಿನ್ನ ತುಟಿಯಲ್ಲಿ ನಗುವಾಗುವ ಹಂಬಲ
ನಾ ನಿಂತಲ್ಲೇ ಹಾಳಾದೆ ನಿನ್ನಿಂದಲೇ....
ಇರುಳಲ್ಲಿ ಜ್ವರದಂತೆ ಕಾಡಿ ಈಗ
ಹಾಯಾಗಿ ನಿಂತಿರುವೆ ಸರಿಯೇನು
ಬೇಕಂತಲೇ ಮಾಡಿ ಏನೋ ಮೋಡಿ
ಇನ್ನೆಲ್ಲೋ ನೋಡುವ ಪರಿಯೇನು
ಈ ಮಾಯೆಗೆ ಈ ಮರುಳಿಗೆ ನಿನ್ನಿಂದ ಕಳೆ ಬಂದಿದೆ.......ನಿನ್ನಿಂದಲೆ....
ಹೋದಲ್ಲಿ ಬಂದಲ್ಲಿ ಎಲ್ಲ ನಿನ್ನ
ಸೊಂಪಾದ ಚೆಲುವಿನ ಗುಣಗಾನ
ಕೇದಿಗೆ ಗರಿಯಂಥ ನಿನ್ನ ನೋಟ
ನನಗೇನೋ ಅಂದಂತೆ ಅನುಮಾನ
ನಿನ್ನಿಂದಲೆ ಸದ್ದಿಲ್ಲದೆ ಮುದ್ದಾದ ಕರೆ ಬಂದಿದೆ....ನಿನ್ನಿಂದಲೆ....
ee sanje yakagide?......neenillade
It was a balmy evening....sun was in a pleasant mood and seemed determined to allow us to enjoy the breezy weather.....as i was walking along the shore, with the cold sand beneath my feet, my mood turned melancholy....the good times we had and the not so good ones crowded my mind....i felt a smile tug through my wet cheeks and i thought.......
ಈ ಸಂಜೆ ಯಾಕಾಗಿದೆ ನೀನಿಲ್ಲದೆ
ಈ ಸಂಜೆ ಯಾಕಾಗಿದೆ
ಈ ಸಂತೆ ಸಾಕಾಗಿದೆ ನೀನಿಲ್ಲದೆ
ಈ ಸಂತೆ ಸಾಕಾಗಿದೆ
ಏಕಾಂತವೆ ಆಲಾಪವು
ಏಕಾಂಗಿಯ ಸಲ್ಲಾಪವು
ಈ ಮೌನ ಬಿಸಿಯಾಗಿದೆ.....ಓ....
ಈ ಮೌನ ಬಿಸಿಯಾಗಿದೆ.....
ಈ ನೋವಿಗೆ ಕಿಡಿ ಸೋಕಿಸಿ ಮಜ ನೋಡಿವೆ ತಾರಾಗಣ
ತಂಗಾಳಿಯ ಪಿಸುಮಾತಿಗೆ ಯುಗವಾಗಿದೆ ನನ್ನ ಕ್ಷಣ
ನೆನಪೆಲ್ಲವು ಹೂವಾಗಿದೆ ಮೈಯೆಲ್ಲವೂ ಮುಳ್ಳಾಗಿದೆ
ಈ ಜೀವ ಕಸಿಯಾಗಿದೆ....ಓ....ಈ ಜೀವ ಕಸಿಯಾಗಿದೆ.....
ನೀನಿಲ್ಲದೆ ಆ ಚಂದಿರಾ ಈ ಕಣ್ಣಲಿ ಕಸವಾಗಿದೆ
ಅದನೂದುವ ಉಸಿರಿಲ್ಲದೆ ಬೆಳದಿಂಗಳು ಅಸು ನೀಗಿದೆ
ಆಕಾಶದಿ ಕಲೆಯಾಗಿದೆ ಈ ಸಂಜೆಯ ಕೊಲೆಯಾಗಿದೆ
ಈ ಗಾಯ ಹಸಿಯಾಗಿದೆ.....ಈ ಗಾಯ ಹಸಿಯಾಗಿದೆ....
ಈ ಸಂಜೆ ಯಾಕಾಗಿದೆ ನೀನಿಲ್ಲದೆ
ಈ ಸಂಜೆ ಯಾಕಾಗಿದೆ
ಈ ಸಂತೆ ಸಾಕಾಗಿದೆ ನೀನಿಲ್ಲದೆ
ಈ ಸಂತೆ ಸಾಕಾಗಿದೆ
ಏಕಾಂತವೆ ಆಲಾಪವು
ಏಕಾಂಗಿಯ ಸಲ್ಲಾಪವು
ಈ ಮೌನ ಬಿಸಿಯಾಗಿದೆ.....ಓ....
ಈ ಮೌನ ಬಿಸಿಯಾಗಿದೆ.....
ಈ ನೋವಿಗೆ ಕಿಡಿ ಸೋಕಿಸಿ ಮಜ ನೋಡಿವೆ ತಾರಾಗಣ
ತಂಗಾಳಿಯ ಪಿಸುಮಾತಿಗೆ ಯುಗವಾಗಿದೆ ನನ್ನ ಕ್ಷಣ
ನೆನಪೆಲ್ಲವು ಹೂವಾಗಿದೆ ಮೈಯೆಲ್ಲವೂ ಮುಳ್ಳಾಗಿದೆ
ಈ ಜೀವ ಕಸಿಯಾಗಿದೆ....ಓ....ಈ ಜೀವ ಕಸಿಯಾಗಿದೆ.....
ನೀನಿಲ್ಲದೆ ಆ ಚಂದಿರಾ ಈ ಕಣ್ಣಲಿ ಕಸವಾಗಿದೆ
ಅದನೂದುವ ಉಸಿರಿಲ್ಲದೆ ಬೆಳದಿಂಗಳು ಅಸು ನೀಗಿದೆ
ಆಕಾಶದಿ ಕಲೆಯಾಗಿದೆ ಈ ಸಂಜೆಯ ಕೊಲೆಯಾಗಿದೆ
ಈ ಗಾಯ ಹಸಿಯಾಗಿದೆ.....ಈ ಗಾಯ ಹಸಿಯಾಗಿದೆ....
jeeva veene - hombisilu
ಚಿತ್ರ: ಹೊಂಬಿಸಿಲು
ಗಾಯನ: ಎಸ್ ಪಿ ಬಾಲು, ಎಸ್ ಜಾನಕಿ
ನಟರು: ವಿಷ್ಣುವರ್ಧನ್, ಆರತಿ
ಜೀವ ವೀಣೆ ನೀಡು ಮಿಡಿತದ ಸಂಗೀತ
ಓ...ಭಾವ ಗೀತೆ ಬಾಳಿನೊಲುಮೆಯ ಸಂಕೇತ
ಇಂದು ಮಿಲನದ ಸಂತೋಷ ಸುಖ ಸಂತೋಷ
ಶುಭ ಸಂದೇಶ ಸಂದೇಶ ಸಂದೇಶವು.....
ಮಿಡಿಯುವ ಮನಗಳು ಎರಡು ಮಿಡಿತದ ರಾಗವು ಒಂದೆ
ಮಿಂಚುವ ಕಣ್ಣಂಚಿನ ಸಂಚು ಇಂದು ಒಂದೇ
ಆ........ಲಲಲ.....ಆ......
ತಪಿಸುವ ಹೃದಯಗಳೆರಡು ತಾಪದ ವೇಗವು ಒಂದೆ
ಸೇರುವ ಶುಭ ಸಮಯದಿ ವಿರಹ ಇರದು ಮುಂದೆ.....
ಭಾವ.......
ಜೀವ.......
ಒಲವಿನ ಬಯಕೆಯು ಅಂದು ಮಿಲನ ಮಹೋತ್ಸವವಿಂದು
ರಚಿಸುವ ನಾವನುದಿನ ಮುದದ ಪ್ರೇಮ ಕವನ.....
ಕನಸಿನ ರಾತ್ರಿಯು ಕಳೆದು ಬಂದಿರೆ ನೆನೆಸಿದ ಹಗಲು
ಕಾಣುವ ಹೊಂಬಿಸಿಲಿನ ಸುಖದ ಸೂರ್ಯ ಕಿರಣ.....
- - - -- - - - - - - -- - - - - --
jeeva veeNe neeDu miDitada sangeeta
bhaava geete baaLinolumeya sanketa
indu milanada santosha sukha santosha
shubha sandesha sandesha sandeshavu....
miDiyuva managaLu eraDu
miDitada raagavu onde
minchuva kaNNanchina sanchu indu onde
aa.....lalala.....
tapisuva hrudayagaLeraDu
taapada vegavu onde
seruva shubha samayadi viraha iradu munde
bhaava.....
jeeva.......
olavina bayakeyu andu
milana mahotsavavindu
rachisuva naavanudina mudadaa prema kavana
kanasina raathriyu kaLedu
bandire nenesida hagalu
kaaNuva hombisilina sukhada soorya kiraNa....
ಗಾಯನ: ಎಸ್ ಪಿ ಬಾಲು, ಎಸ್ ಜಾನಕಿ
ನಟರು: ವಿಷ್ಣುವರ್ಧನ್, ಆರತಿ
ಜೀವ ವೀಣೆ ನೀಡು ಮಿಡಿತದ ಸಂಗೀತ
ಓ...ಭಾವ ಗೀತೆ ಬಾಳಿನೊಲುಮೆಯ ಸಂಕೇತ
ಇಂದು ಮಿಲನದ ಸಂತೋಷ ಸುಖ ಸಂತೋಷ
ಶುಭ ಸಂದೇಶ ಸಂದೇಶ ಸಂದೇಶವು.....
ಮಿಡಿಯುವ ಮನಗಳು ಎರಡು ಮಿಡಿತದ ರಾಗವು ಒಂದೆ
ಮಿಂಚುವ ಕಣ್ಣಂಚಿನ ಸಂಚು ಇಂದು ಒಂದೇ
ಆ........ಲಲಲ.....ಆ......
ತಪಿಸುವ ಹೃದಯಗಳೆರಡು ತಾಪದ ವೇಗವು ಒಂದೆ
ಸೇರುವ ಶುಭ ಸಮಯದಿ ವಿರಹ ಇರದು ಮುಂದೆ.....
ಭಾವ.......
ಜೀವ.......
ಒಲವಿನ ಬಯಕೆಯು ಅಂದು ಮಿಲನ ಮಹೋತ್ಸವವಿಂದು
ರಚಿಸುವ ನಾವನುದಿನ ಮುದದ ಪ್ರೇಮ ಕವನ.....
ಕನಸಿನ ರಾತ್ರಿಯು ಕಳೆದು ಬಂದಿರೆ ನೆನೆಸಿದ ಹಗಲು
ಕಾಣುವ ಹೊಂಬಿಸಿಲಿನ ಸುಖದ ಸೂರ್ಯ ಕಿರಣ.....
- - - -- - - - - - - -- - - - - --
jeeva veeNe neeDu miDitada sangeeta
bhaava geete baaLinolumeya sanketa
indu milanada santosha sukha santosha
shubha sandesha sandesha sandeshavu....
miDiyuva managaLu eraDu
miDitada raagavu onde
minchuva kaNNanchina sanchu indu onde
aa.....lalala.....
tapisuva hrudayagaLeraDu
taapada vegavu onde
seruva shubha samayadi viraha iradu munde
bhaava.....
jeeva.......
olavina bayakeyu andu
milana mahotsavavindu
rachisuva naavanudina mudadaa prema kavana
kanasina raathriyu kaLedu
bandire nenesida hagalu
kaaNuva hombisilina sukhada soorya kiraNa....
tam nam tam nam - eraDu kanasu
ಚಿತ್ರ: ಎರಡು ಕನಸು
ಗಾಯನ: ಪಿ ಬಿ ಶ್ರೀನಿವಾಸ್, ಎಸ್ ಜಾನಕಿ
ನಟರು: ರಾಜ್ ಕುಮಾರ್, ಕಲ್ಪನಾ, ಮಂಜುಳ
ತಮ್ ನಮ್ ತಮ್ ನಮ್ ತಮ್ ನಮ್ ಮನಸು ಮಿಡಿಯುತಿದೆ
ಹೋ ಸೋತಿದೆ.....
ಕೈಯಲ್ಲಿ ಕುಣಿವ ಈ ಹೊನ್ನ ಬಳೆಯ ಘಲ್ ಘಲ್ ಘಲ್ ಘಲ್ ತಾಳಕೆ
ನನ್ನೆದೆಯ ವೀಣೆ ತನ್ನಂತೆ ತಾನೇ ತಮ್ ನಮ್ ತಮ್ ನಮ್ ಎಂದಿದೆ....
ಘಲ್ ಘಲ್ ಘಲ್ ಘಲ್ ತಾಳಕೆ ತಮ್ ನಮ್ ತಮ್ ನಮ್ ಎಂದಿದೆ.....
ತಮ್ ನಮ್ ತಮ್ ನಮ್ ನನ್ನೀ ಮನಸು ಮಿಡಿಯುತಿದೆ.....
ಹೋ ಸೋತಿದೆ.....
ಕೈಯಲ್ಲಿ ಕುಣಿವ ಈ ಹೊನ್ನ ಬಳೆಯ ಘಲ್ ಘಲ್ ಘಲ್ ಘಲ್ ತಾಳಕೆ
ನನ್ನೆದೆಯ ವೀಣೆ ತನ್ನಂತೆ ತಾನೇ ತಮ್ ನಮ್ ತಮ್ ನಮ್ ಎಂದಿದೆ....
ಘಲ್ ಘಲ್ ಘಲ್ ಘಲ್ ತಾಳಕೆ ತಮ್ ನಮ್ ತಮ್ ನಮ್ ಎಂದಿದೆ.....
ನೀ ಸನಿಹಕೆ ಬಂದರೆ ತನುವಿದು ನಡುಗುತಿದೆ ಏತಕೆ ಎದೆ ಝಲ್ ಎಂದಿದೆ
ಅಹಹ....ಒಲಿದಿಹ ಜೀವವು ಬೆರೆಯಲು ಮನ ಹೂವಾಗಿ ತನು ಕೆಂಪಾಗಿ ನಿನ್ನ ಕಾದಿದೆ.....
ನೀ ನಡೆಯುವ ಹಾದಿಗೆ ಹೂವಿನ ಹಾಸಿಗೆಯ ಹಾಸುವೆ ಕೈ ಹಿಡಿದು ನಡೆಸುವೆ
ಅಹಹ....ಮೆಲ್ಲಗೆ ನಲ್ಲನೆ ನಡೆಸು ಬಾ ಎಂದೂ ಹೀಗೆ ಇರುವ ಆಸೆ ನನ್ನೀ ಮನಸಿಗೆ....
ಗಾಯನ: ಪಿ ಬಿ ಶ್ರೀನಿವಾಸ್, ಎಸ್ ಜಾನಕಿ
ನಟರು: ರಾಜ್ ಕುಮಾರ್, ಕಲ್ಪನಾ, ಮಂಜುಳ
ತಮ್ ನಮ್ ತಮ್ ನಮ್ ತಮ್ ನಮ್ ಮನಸು ಮಿಡಿಯುತಿದೆ
ಹೋ ಸೋತಿದೆ.....
ಕೈಯಲ್ಲಿ ಕುಣಿವ ಈ ಹೊನ್ನ ಬಳೆಯ ಘಲ್ ಘಲ್ ಘಲ್ ಘಲ್ ತಾಳಕೆ
ನನ್ನೆದೆಯ ವೀಣೆ ತನ್ನಂತೆ ತಾನೇ ತಮ್ ನಮ್ ತಮ್ ನಮ್ ಎಂದಿದೆ....
ಘಲ್ ಘಲ್ ಘಲ್ ಘಲ್ ತಾಳಕೆ ತಮ್ ನಮ್ ತಮ್ ನಮ್ ಎಂದಿದೆ.....
ತಮ್ ನಮ್ ತಮ್ ನಮ್ ನನ್ನೀ ಮನಸು ಮಿಡಿಯುತಿದೆ.....
ಹೋ ಸೋತಿದೆ.....
ಕೈಯಲ್ಲಿ ಕುಣಿವ ಈ ಹೊನ್ನ ಬಳೆಯ ಘಲ್ ಘಲ್ ಘಲ್ ಘಲ್ ತಾಳಕೆ
ನನ್ನೆದೆಯ ವೀಣೆ ತನ್ನಂತೆ ತಾನೇ ತಮ್ ನಮ್ ತಮ್ ನಮ್ ಎಂದಿದೆ....
ಘಲ್ ಘಲ್ ಘಲ್ ಘಲ್ ತಾಳಕೆ ತಮ್ ನಮ್ ತಮ್ ನಮ್ ಎಂದಿದೆ.....
ನೀ ಸನಿಹಕೆ ಬಂದರೆ ತನುವಿದು ನಡುಗುತಿದೆ ಏತಕೆ ಎದೆ ಝಲ್ ಎಂದಿದೆ
ಅಹಹ....ಒಲಿದಿಹ ಜೀವವು ಬೆರೆಯಲು ಮನ ಹೂವಾಗಿ ತನು ಕೆಂಪಾಗಿ ನಿನ್ನ ಕಾದಿದೆ.....
ನೀ ನಡೆಯುವ ಹಾದಿಗೆ ಹೂವಿನ ಹಾಸಿಗೆಯ ಹಾಸುವೆ ಕೈ ಹಿಡಿದು ನಡೆಸುವೆ
ಅಹಹ....ಮೆಲ್ಲಗೆ ನಲ್ಲನೆ ನಡೆಸು ಬಾ ಎಂದೂ ಹೀಗೆ ಇರುವ ಆಸೆ ನನ್ನೀ ಮನಸಿಗೆ....
haadonda haaduve - naandi
ಚಿತ್ರ: ನಾಂದಿ
ಗಾಯಕ: ಪಿ ಬಿ ಶ್ರೀನಿವಾಸ್
ನಟರು: ರಾಜ್ ಕುಮಾರ್, ಹರಿಣಿ, ಕಲ್ಪನಾ
ಹಾಡೊಂದ ಹಾಡುವೆ ನೀ ಕೇಳು ಮಗುವೆ
ಬರಿದಾದ ಮನೆ ಬೆಳಗೆ ನೀನೆಂದು ಬರುವೆ...
ಸೀಮಂತದಾನಂದ ನಾ ನೀಡಲಿಲ್ಲ
ನಿನಗಾಗಿ ಮಹಿಳೆಯರು ತಾ ಹಾಡಲಿಲ್ಲ
ಸಿರಿವಂತರ ಭೋಗ ನಿನಗಿಲ್ಲಿ ಇಲ್ಲ
ಸಿರಿಯಾಗಿ ನಿಧಿಯಾಗಿ ನೀ ಬರುವೆಯಲ್ಲ.....
ನಿನ್ನೊಂದು ನುಡಿ ಮುತ್ತು ಸವಿಜೇನಿನಂತೆ
ಆ ಸುಖದಿ ನಾ ಮರೆವೇ ಈ ಬಾಳ ಚಿಂತೆ
ಅದ ಕೇಳೋ ಸೌಭಾಗ್ಯ ಈ ತಾಯಿಗಿಲ್ಲ
ಇವಳಾಸೆ ಆಕಾಂಕ್ಷೆ ನೀನಾದೆಯೆಲ್ಲ......
ಗಾಯಕ: ಪಿ ಬಿ ಶ್ರೀನಿವಾಸ್
ನಟರು: ರಾಜ್ ಕುಮಾರ್, ಹರಿಣಿ, ಕಲ್ಪನಾ
ಹಾಡೊಂದ ಹಾಡುವೆ ನೀ ಕೇಳು ಮಗುವೆ
ಬರಿದಾದ ಮನೆ ಬೆಳಗೆ ನೀನೆಂದು ಬರುವೆ...
ಸೀಮಂತದಾನಂದ ನಾ ನೀಡಲಿಲ್ಲ
ನಿನಗಾಗಿ ಮಹಿಳೆಯರು ತಾ ಹಾಡಲಿಲ್ಲ
ಸಿರಿವಂತರ ಭೋಗ ನಿನಗಿಲ್ಲಿ ಇಲ್ಲ
ಸಿರಿಯಾಗಿ ನಿಧಿಯಾಗಿ ನೀ ಬರುವೆಯಲ್ಲ.....
ನಿನ್ನೊಂದು ನುಡಿ ಮುತ್ತು ಸವಿಜೇನಿನಂತೆ
ಆ ಸುಖದಿ ನಾ ಮರೆವೇ ಈ ಬಾಳ ಚಿಂತೆ
ಅದ ಕೇಳೋ ಸೌಭಾಗ್ಯ ಈ ತಾಯಿಗಿಲ್ಲ
ಇವಳಾಸೆ ಆಕಾಂಕ್ಷೆ ನೀನಾದೆಯೆಲ್ಲ......
Sunday, October 11, 2009
omkaaradi kande - nammoora mandaara hoove
ಚಿತ್ರ: ನಮ್ಮೂರ ಮಂದಾರ ಹೂವೆ
ಗಾಯನ: ಚಿತ್ರ ಕೆ ಎಸ್
ನಟರು: ಪ್ರೇಮ, ರಮೇಶ್, ಶಿವರಾಜ್ ಕುಮಾರ್
ಓಂಕಾರದಿ ಕಂಡೆ ಪ್ರೇಮ ನಾದವ
ಈ ತಾಳದಿ ತಂದೆ ನೀ ಶುಭೋದಯ
ಮಂದಾರವಿಲ್ಲಿ ಅರಳಿ ಕಂಪು ಸೂಸಿದೆ
ಸೌಗಂಧಹಾಸ ಚೆಲ್ಲಿ ನಿನ್ನ ಕಾದಿದೆ
ಅರಿಯೋ ಇನಿಯ ಒಲವ ಕರೆಯ.....
ಮಧುರ ತಾನ ಸ್ವರಗಳ ಸೇರಿ......ಒಹೊಹೊಹೊಹೋ ಓಹೊಹೊಹೋಹೋ
ಜಲಲ ಧಾರೆ ಜಲದಲಿ ಜಾರಿ......ಓಹೊಹೊಹೋಹೋ ಒಹೊಹೊಹೊಹೋ
ಆಕಾಶದಾಚೆ ಆ ಮೌನದಿ ಆ ತಾರೆಯೇಕೆ ತಾನ್ ತೇಲಿದೆ
ಬಂದಾಗ ಅರಿವು ಇಲ್ಲಿ ತಂದಿತು ಒಲವು ಅಲ್ಲಿ
ಅರಿಯೋ ಇನಿಯ ಒಲವ ನಿಧಿಯ......
ನಿನದೆ ಗಾನ ಹೃದಯದಿ ತೇಲಿ.....ಒಹೊಹೊಹೊಹೋ ಓಹೊಹೊಹೋಹೋ
ಲಯದಿ ರಾಗ ಅಲೆಗಳ ಬೀರಿ......ಒಹೊಹೊಹೊಹೋ ಓಹೊಹೊಹೋಹೋ
ಈ ಗೀತೆಗಾದೆ ನೀ ಭಾವನ ಈ ಬಾಳಿಗಾದೆ ನೀ ಚೇತನ
ಸಂಗೀತ ಸುಧೆಯ ತುಂಬಿ ಮಾಧುರ್ಯ ಮನದಿ ತಂದೆ
ಅರಿಯೋ ಇನಿಯ ಒಲವ ಸವಿಯ.....
ಗಾಯನ: ಚಿತ್ರ ಕೆ ಎಸ್
ನಟರು: ಪ್ರೇಮ, ರಮೇಶ್, ಶಿವರಾಜ್ ಕುಮಾರ್
ಓಂಕಾರದಿ ಕಂಡೆ ಪ್ರೇಮ ನಾದವ
ಈ ತಾಳದಿ ತಂದೆ ನೀ ಶುಭೋದಯ
ಮಂದಾರವಿಲ್ಲಿ ಅರಳಿ ಕಂಪು ಸೂಸಿದೆ
ಸೌಗಂಧಹಾಸ ಚೆಲ್ಲಿ ನಿನ್ನ ಕಾದಿದೆ
ಅರಿಯೋ ಇನಿಯ ಒಲವ ಕರೆಯ.....
ಮಧುರ ತಾನ ಸ್ವರಗಳ ಸೇರಿ......ಒಹೊಹೊಹೊಹೋ ಓಹೊಹೊಹೋಹೋ
ಜಲಲ ಧಾರೆ ಜಲದಲಿ ಜಾರಿ......ಓಹೊಹೊಹೋಹೋ ಒಹೊಹೊಹೊಹೋ
ಆಕಾಶದಾಚೆ ಆ ಮೌನದಿ ಆ ತಾರೆಯೇಕೆ ತಾನ್ ತೇಲಿದೆ
ಬಂದಾಗ ಅರಿವು ಇಲ್ಲಿ ತಂದಿತು ಒಲವು ಅಲ್ಲಿ
ಅರಿಯೋ ಇನಿಯ ಒಲವ ನಿಧಿಯ......
ನಿನದೆ ಗಾನ ಹೃದಯದಿ ತೇಲಿ.....ಒಹೊಹೊಹೊಹೋ ಓಹೊಹೊಹೋಹೋ
ಲಯದಿ ರಾಗ ಅಲೆಗಳ ಬೀರಿ......ಒಹೊಹೊಹೊಹೋ ಓಹೊಹೊಹೋಹೋ
ಈ ಗೀತೆಗಾದೆ ನೀ ಭಾವನ ಈ ಬಾಳಿಗಾದೆ ನೀ ಚೇತನ
ಸಂಗೀತ ಸುಧೆಯ ತುಂಬಿ ಮಾಧುರ್ಯ ಮನದಿ ತಂದೆ
ಅರಿಯೋ ಇನಿಯ ಒಲವ ಸವಿಯ.....
nammoora mandaara hoove - aalemane
ಚಿತ್ರ: ಆಲೆಮನೆ
ನಟರು: ಸುರೇಶ ಹೆಬ್ಳಿಕರ್, ರೂಪ ಚಕ್ರವರ್ತಿ
ಗಾಯನ: ಎಸ್ ಪಿ ಬಾಲು
ನಮ್ಮೂರ ಮಂದಾರ ಹೂವೆ ನನ್ನೊಲುಮೆ ಬಾಂದಳದ ಚೆಲುವೆ
ಬಳಿ ಬಂದು ಬಾಳನ್ನು ಬೆಳಗು ನನ್ನ ಬರಿದಾದ ಮನದಲ್ಲಿ ಮಿನುಗು
ಕಣ್ಣಲ್ಲೇ ಕರೆದು ಹೊಂಗನಸ ತೆರೆದು ಸಂಗಾತಿ ಸಂಪ್ರೀತಿ ಸೆಳೆದೆ
ಅನುರಾಗ ಹೊಳೆದು ಅನುಬಂಧ ಬೆಳೆದು ಸಮ್ಮೋಹ ಸಂಬಂಧ ಮಿಡಿದೆ
ಮೂಡಿದ ಪ್ರೇಮದ ಸೊಗಸಾದ ಕಾರಂಜಿ ಬಿರಿದೆ, ಸೊಗಸಾದ ಕಾರಂಜಿ ಬಿರಿದೆ.......
ಒಡಲಾಳ ಮೊರೆದು ಒಡನಾಟ ಮೆರೆದು ಒಡನಾಡಿ ಬಾಂಧವ್ಯ ಕಂಡೆ
ಋತುಮಾನ ಮೀರಿ ಹೊಸಗಾನ ತೋರಿ ಹಿತವಾದ ಮಾಧುರ್ಯ ಮಿಂದೆ
ತೀರದ ಮೋಹದ ಇನಿದಾದ ಆನಂದ ತಂದೆ, ಇನಿದಾದ ಆನಂದ ತಂದೆ.......
ನಟರು: ಸುರೇಶ ಹೆಬ್ಳಿಕರ್, ರೂಪ ಚಕ್ರವರ್ತಿ
ಗಾಯನ: ಎಸ್ ಪಿ ಬಾಲು
ನಮ್ಮೂರ ಮಂದಾರ ಹೂವೆ ನನ್ನೊಲುಮೆ ಬಾಂದಳದ ಚೆಲುವೆ
ಬಳಿ ಬಂದು ಬಾಳನ್ನು ಬೆಳಗು ನನ್ನ ಬರಿದಾದ ಮನದಲ್ಲಿ ಮಿನುಗು
ಕಣ್ಣಲ್ಲೇ ಕರೆದು ಹೊಂಗನಸ ತೆರೆದು ಸಂಗಾತಿ ಸಂಪ್ರೀತಿ ಸೆಳೆದೆ
ಅನುರಾಗ ಹೊಳೆದು ಅನುಬಂಧ ಬೆಳೆದು ಸಮ್ಮೋಹ ಸಂಬಂಧ ಮಿಡಿದೆ
ಮೂಡಿದ ಪ್ರೇಮದ ಸೊಗಸಾದ ಕಾರಂಜಿ ಬಿರಿದೆ, ಸೊಗಸಾದ ಕಾರಂಜಿ ಬಿರಿದೆ.......
ಒಡಲಾಳ ಮೊರೆದು ಒಡನಾಟ ಮೆರೆದು ಒಡನಾಡಿ ಬಾಂಧವ್ಯ ಕಂಡೆ
ಋತುಮಾನ ಮೀರಿ ಹೊಸಗಾನ ತೋರಿ ಹಿತವಾದ ಮಾಧುರ್ಯ ಮಿಂದೆ
ತೀರದ ಮೋಹದ ಇನಿದಾದ ಆನಂದ ತಂದೆ, ಇನಿದಾದ ಆನಂದ ತಂದೆ.......
ee sundara beLadingala - amruthavarshini
ಚಿತ್ರ: ಅಮೃತ ವರ್ಷಿಣಿ
ಗಾಯನ: ಎಸ್ ಪಿ ಬಾಲು, ಚಿತ್ರ
ನಟರು: ರಮೇಶ್, ಸುಹಾಸಿನಿ, ಶರತ್ ಬಾಬು
ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ ನನ್ನ ನಿನ್ನ ನಡುವಿನಲ್ಲಿ
ಈ ಸುಂದರ ಬೆಳದಿಂಗಳ ಈ ಕಂಪಿನ ಅಂಗಳದಲಿ ಹೃದಯದ ತಾಳದಲಿ
ಮೌನವೇ ರಾಗವು ಉಸಿರೇ ಭಾವವು ನಿನ್ನ ಈ ನಗೆಯ ಸವಿ ಶೃತಿಯಲ್ಲಿ ಓಹೋ.....
ದಿನ....ದಿನ.......ಕ್ಷಣ ಕ್ಷಣ ಚಿನ್ನ ನನ್ನ ನಿನ್ನ ಹಾಡಲಿ ಕುಣಿಸಿರುವೆ
ಮನ ಮನ ಮದೋತ್ತರ ಕಣ್ಣ ಅಂಚಲೇ ನಗಿಸಿರುವೆ
ಒಲವೆ........ಒಲವೆ ನಿನ್ನ ನಲಿವೊಂದೆ ವರವೆನ್ನುತ ನಾ ನಲಿವೆ
ಒಲವೆ ನಿನ್ನ ಗೆಲುವೊಂದೆ ಬಲವೆನ್ನುತ ನಾ ಬೆರೆವೆ
ನನ್ನ ಎದೆಯೊಳಗಿನ ಸ್ವರ ನುಡಿಸುವ ಕೈಗಳೇ ನಿನ್ನದು
ನಿನ್ನ ಕೈಗಳ ಜೊತೆ ಕೈ ಸೇರಿಸಿ ಜಗವ ಕೊಳ್ಳೋ ಮನಸು ನನ್ನದು
ಸಮ....ಸಮ......ಸರಿಗಮ ಸಮಾಗಮ ಇಂತ ವಿಸ್ಮಯ ಇದೆ ಮೊದಲು
ಘಮ ಘಮ ಎದೆಯೆಲ್ಲ ಇನ್ನು ಮಾತು ಬರಿ ತೊದಲು
ಉಸಿರೇ.....ಉಸಿರೇ ನಿನ್ನ ಉಸಿರಾಗಿ ಈ ಉಸಿರ ಬರೆದಿರುವೆ
ನಮ್ಮ ಹಾಡಿಗೆ ಹೆಸರಾಗಲಿ ಕಾವೇರಿ ಕಲರವವೇ...
ನಿನ್ನ ನೆರಳಿನ ಸನಿಸನಿಹಕೆ ನನ್ನ ಕೊರಳಿನ ದನಿ ಹರಿಸಿ ಹರಿಸಿ
ನಿನ್ನ ಕನಸಿಗೆ ಹೊಸ ಹೆಸರನು ಬರೆಸಿ ಮೆರೆಸಿ ನಲಿಸಲಿರುವೆ......ಈ ಸುಂದರ......
ಗಾಯನ: ಎಸ್ ಪಿ ಬಾಲು, ಚಿತ್ರ
ನಟರು: ರಮೇಶ್, ಸುಹಾಸಿನಿ, ಶರತ್ ಬಾಬು
ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ ನನ್ನ ನಿನ್ನ ನಡುವಿನಲ್ಲಿ
ಈ ಸುಂದರ ಬೆಳದಿಂಗಳ ಈ ಕಂಪಿನ ಅಂಗಳದಲಿ ಹೃದಯದ ತಾಳದಲಿ
ಮೌನವೇ ರಾಗವು ಉಸಿರೇ ಭಾವವು ನಿನ್ನ ಈ ನಗೆಯ ಸವಿ ಶೃತಿಯಲ್ಲಿ ಓಹೋ.....
ದಿನ....ದಿನ.......ಕ್ಷಣ ಕ್ಷಣ ಚಿನ್ನ ನನ್ನ ನಿನ್ನ ಹಾಡಲಿ ಕುಣಿಸಿರುವೆ
ಮನ ಮನ ಮದೋತ್ತರ ಕಣ್ಣ ಅಂಚಲೇ ನಗಿಸಿರುವೆ
ಒಲವೆ........ಒಲವೆ ನಿನ್ನ ನಲಿವೊಂದೆ ವರವೆನ್ನುತ ನಾ ನಲಿವೆ
ಒಲವೆ ನಿನ್ನ ಗೆಲುವೊಂದೆ ಬಲವೆನ್ನುತ ನಾ ಬೆರೆವೆ
ನನ್ನ ಎದೆಯೊಳಗಿನ ಸ್ವರ ನುಡಿಸುವ ಕೈಗಳೇ ನಿನ್ನದು
ನಿನ್ನ ಕೈಗಳ ಜೊತೆ ಕೈ ಸೇರಿಸಿ ಜಗವ ಕೊಳ್ಳೋ ಮನಸು ನನ್ನದು
ಸಮ....ಸಮ......ಸರಿಗಮ ಸಮಾಗಮ ಇಂತ ವಿಸ್ಮಯ ಇದೆ ಮೊದಲು
ಘಮ ಘಮ ಎದೆಯೆಲ್ಲ ಇನ್ನು ಮಾತು ಬರಿ ತೊದಲು
ಉಸಿರೇ.....ಉಸಿರೇ ನಿನ್ನ ಉಸಿರಾಗಿ ಈ ಉಸಿರ ಬರೆದಿರುವೆ
ನಮ್ಮ ಹಾಡಿಗೆ ಹೆಸರಾಗಲಿ ಕಾವೇರಿ ಕಲರವವೇ...
ನಿನ್ನ ನೆರಳಿನ ಸನಿಸನಿಹಕೆ ನನ್ನ ಕೊರಳಿನ ದನಿ ಹರಿಸಿ ಹರಿಸಿ
ನಿನ್ನ ಕನಸಿಗೆ ಹೊಸ ಹೆಸರನು ಬರೆಸಿ ಮೆರೆಸಿ ನಲಿಸಲಿರುವೆ......ಈ ಸುಂದರ......
manase - amruthavarshini
ಚಿತ್ರ: ಅಮೃತ ವರ್ಷಿಣಿ
ಗಾಯಕ: ಎಸ್ ಪಿ ಬಾಲು
ನಟರು: ಸುಹಾಸಿನಿ, ರಮೇಶ್, ಶರತ್ ಬಾಬು
ಮನಸೇ ಈ ಬದುಕು ನಿನಗಾಗಿ ಬವಣೆ ನಿನಗಾಗಿ
ನನ್ನ ಪ್ರೀತಿಯೇ ಸುಳ್ಳಾದರೆ ಜಗವೆಲ್ಲ ಸುಳ್ಳು ಅಲ್ಲವೇ
ನಿನ್ನ ಒಂದು ಮಾತು ಸಾಕು ಮರುಮಾತು ಎಲ್ಲಿ
ನಿನ್ನ ಒಂದು ಆಣತಿ ಸಾಕು ನಾ ಅಡಿಗಳಲ್ಲಿ
ನಿನ್ನ ಒಂದು ಹೆಸರೇ ಸಾಕು ಉಸಿರಾಟಕಿಲ್ಲಿ
ನಿನ್ನ ಒಂದು ಸ್ಪರ್ಶ ಸಾಕು ಈ ಜನುಮದಲ್ಲಿ
ಮನಸೇ ನಾ ಏನೇ ಮಾಡಿದರು ನಿನ್ನ ಪ್ರೀತಿಗಲ್ಲವೇ
ಮನಸೇ ಮನಸ ಕ್ಷಮಿಸೆ......
ನನ್ನ ಪ್ರೀತಿ ಗಂಗೆ ನೀನು ಮುಡಿಸೇರಲೆಂದೇ
ಸಮಯಗಳ ಸರಪಳಿಯಲ್ಲಿ ಕೈ ಗೊಂಬೆಯಾದೆ
ನನ್ನ ಬಾಳ ಪುಟಕೆ ನೀನು ಹೊಸ ತಿರುವು ತಂದೆ
ನಿನ್ನ ಮರೆತು ಹೋದರೆ ಈಗ ಬದುಕೇಕೆ ಮುಂದೆ
ಮನಸೇ ನಾ ಏನೇ ಮಾಡಿದರು ನಿನ್ನ ಪ್ರೀತಿಗಲ್ಲವೇ
ಮನಸೇ ಮನಸ ಹರಿಸೆ.....
ಗಾಯಕ: ಎಸ್ ಪಿ ಬಾಲು
ನಟರು: ಸುಹಾಸಿನಿ, ರಮೇಶ್, ಶರತ್ ಬಾಬು
ಮನಸೇ ಈ ಬದುಕು ನಿನಗಾಗಿ ಬವಣೆ ನಿನಗಾಗಿ
ನನ್ನ ಪ್ರೀತಿಯೇ ಸುಳ್ಳಾದರೆ ಜಗವೆಲ್ಲ ಸುಳ್ಳು ಅಲ್ಲವೇ
ನಿನ್ನ ಒಂದು ಮಾತು ಸಾಕು ಮರುಮಾತು ಎಲ್ಲಿ
ನಿನ್ನ ಒಂದು ಆಣತಿ ಸಾಕು ನಾ ಅಡಿಗಳಲ್ಲಿ
ನಿನ್ನ ಒಂದು ಹೆಸರೇ ಸಾಕು ಉಸಿರಾಟಕಿಲ್ಲಿ
ನಿನ್ನ ಒಂದು ಸ್ಪರ್ಶ ಸಾಕು ಈ ಜನುಮದಲ್ಲಿ
ಮನಸೇ ನಾ ಏನೇ ಮಾಡಿದರು ನಿನ್ನ ಪ್ರೀತಿಗಲ್ಲವೇ
ಮನಸೇ ಮನಸ ಕ್ಷಮಿಸೆ......
ನನ್ನ ಪ್ರೀತಿ ಗಂಗೆ ನೀನು ಮುಡಿಸೇರಲೆಂದೇ
ಸಮಯಗಳ ಸರಪಳಿಯಲ್ಲಿ ಕೈ ಗೊಂಬೆಯಾದೆ
ನನ್ನ ಬಾಳ ಪುಟಕೆ ನೀನು ಹೊಸ ತಿರುವು ತಂದೆ
ನಿನ್ನ ಮರೆತು ಹೋದರೆ ಈಗ ಬದುಕೇಕೆ ಮುಂದೆ
ಮನಸೇ ನಾ ಏನೇ ಮಾಡಿದರು ನಿನ್ನ ಪ್ರೀತಿಗಲ್ಲವೇ
ಮನಸೇ ಮನಸ ಹರಿಸೆ.....
tunturu alli neera haaDu - amruthavarshini
ಚಿತ್ರ: ಅಮೃತ ವರ್ಷಿಣಿ
ಗಾಯಕಿ: ಕೆ ಎಸ್ ಚಿತ್ರ
ನಟರು: ಸುಹಾಸಿನಿ, ರಮೇಶ್, ಶರತ್ ಬಾಬು
ತುಂತುರು ಅಲ್ಲಿ ನೀರ ಹಾಡು
ಕಂಪನ ಇಲ್ಲಿ ಪ್ರೀತಿ ಹಾಡು
ಹಗಲಿರಲಿ ಇರುಳಿರಲಿ ನೀನಿರದೆ ಹೇಗಿರಲಿ
ನನ್ನ ತುಂಬು ಹೃದಯ ನೀ ತುಂಬಿದೆ
ನಿನ್ನ ಈ ತುಂಬು ಪ್ರೀತಿಯನು
ಕಣ್ಣ ಹಾಡಂತೆ ಕಾಯುವೆನು
ಗಗನದ ಸೂರ್ಯ ಮನೆ ಮೇಲೆ
ನೀ ನನ್ನ ಸೂರ್ಯ ಹಣೆ ಮೇಲೆ
ಚಿಲಿಪಿಲಿ ಹಾಡು ಎಲೆ ಮೇಲೆ
ನಿನ್ನ್ನ ಪ್ರೀತಿ ಹಾಡು ಎದೆ ಮೇಲೆ
ಗಾಳಿ ಗಾಳಿ ತಂಪು ಗಾಳಿ
ಊರ ತುಂಬ ಇದೆಯೋ
ನಿನ್ನ ಹೆಸರ ಗಾಳಿಯೊಂದೆ
ನನ್ನ ಉಸಿರಲ್ಲಿದೆಯೋ
ನಮ್ಮ ಪ್ರೀತಿ ಬೆಳಗೋ ಇತಿಹಾಸವು
ನಿನ್ನ ಸಹಚಾರವೇ ಚೈತ್ರ
ಅಲ್ಲಿ ನನ್ನ ಇಂಚರ ಅಮರ
ಚೆಲುವನೆ ನಿನ್ನ ಮುಗುಳು ನಗೆ
ಹಗಲಲು ಶಶಿಯು ಬೇಡುವನು
ರಸಿಕನೆ ನಿನ್ನ ರಸಿಕತೆಗೆ
ಮದನನು ಮರುಗಿ ಸೊರಗುವನು
ತಾಯಿ ತಂದೆ ಎಲ್ಲ ನೀನೆ
ಯಾಕೆ ಬೇರೆ ನಂಟು
ಸಾಕು ಎಲ್ಲ ಸಿರಿಗಳ ಮೀರೋ
ನಿನ್ನ ಪ್ರೀತಿ ಗಂಟು
ಜಗವೆಲ್ಲ ಮಾದರಿ ಈ ಪ್ರೇಮಕೆ
ನನ್ನ ಎದೆಯಾಳೋ ಧಣಿ ನೀನೆ
ನಿನ್ನ ಸಹಚಾರಿಣಿ ನಾನೇ
ಗಾಯಕಿ: ಕೆ ಎಸ್ ಚಿತ್ರ
ನಟರು: ಸುಹಾಸಿನಿ, ರಮೇಶ್, ಶರತ್ ಬಾಬು
ತುಂತುರು ಅಲ್ಲಿ ನೀರ ಹಾಡು
ಕಂಪನ ಇಲ್ಲಿ ಪ್ರೀತಿ ಹಾಡು
ಹಗಲಿರಲಿ ಇರುಳಿರಲಿ ನೀನಿರದೆ ಹೇಗಿರಲಿ
ನನ್ನ ತುಂಬು ಹೃದಯ ನೀ ತುಂಬಿದೆ
ನಿನ್ನ ಈ ತುಂಬು ಪ್ರೀತಿಯನು
ಕಣ್ಣ ಹಾಡಂತೆ ಕಾಯುವೆನು
ಗಗನದ ಸೂರ್ಯ ಮನೆ ಮೇಲೆ
ನೀ ನನ್ನ ಸೂರ್ಯ ಹಣೆ ಮೇಲೆ
ಚಿಲಿಪಿಲಿ ಹಾಡು ಎಲೆ ಮೇಲೆ
ನಿನ್ನ್ನ ಪ್ರೀತಿ ಹಾಡು ಎದೆ ಮೇಲೆ
ಗಾಳಿ ಗಾಳಿ ತಂಪು ಗಾಳಿ
ಊರ ತುಂಬ ಇದೆಯೋ
ನಿನ್ನ ಹೆಸರ ಗಾಳಿಯೊಂದೆ
ನನ್ನ ಉಸಿರಲ್ಲಿದೆಯೋ
ನಮ್ಮ ಪ್ರೀತಿ ಬೆಳಗೋ ಇತಿಹಾಸವು
ನಿನ್ನ ಸಹಚಾರವೇ ಚೈತ್ರ
ಅಲ್ಲಿ ನನ್ನ ಇಂಚರ ಅಮರ
ಚೆಲುವನೆ ನಿನ್ನ ಮುಗುಳು ನಗೆ
ಹಗಲಲು ಶಶಿಯು ಬೇಡುವನು
ರಸಿಕನೆ ನಿನ್ನ ರಸಿಕತೆಗೆ
ಮದನನು ಮರುಗಿ ಸೊರಗುವನು
ತಾಯಿ ತಂದೆ ಎಲ್ಲ ನೀನೆ
ಯಾಕೆ ಬೇರೆ ನಂಟು
ಸಾಕು ಎಲ್ಲ ಸಿರಿಗಳ ಮೀರೋ
ನಿನ್ನ ಪ್ರೀತಿ ಗಂಟು
ಜಗವೆಲ್ಲ ಮಾದರಿ ಈ ಪ್ರೇಮಕೆ
ನನ್ನ ಎದೆಯಾಳೋ ಧಣಿ ನೀನೆ
ನಿನ್ನ ಸಹಚಾರಿಣಿ ನಾನೇ
Saturday, October 10, 2009
anuraaga araLo samaya - mussanje maatu
ಚಿತ್ರ: ಮುಸ್ಸಂಜೆ ಮಾತು
ಗಾಯಕ: ಕಾರ್ತಿಕ್
ನಟರು: ಸುದೀಪ್, ರಮ್ಯ
ಅನುರಾಗ ಅರಳೋ ಸಮಯ
ಮನಸುಗಳು ಮಾತಾಡೋ ಸಮಯ
ಯಾರೋ ಯಾರ ದಾರಿಯನ್ನು ಕಾಯೋ ಸಮಯ
ಮೊಗ್ಗು ಮೆಲ್ಲ ಹಿಗ್ಗಿ ಹೂವು ಆಗೋ ಸಮಯ
ಕದ್ದು ಕೊಂಡರು ಯಾರೋ ನನ್ನ ಹೃದಯ
ಹಿಂದೆ ಎಂದು ಕಂಡೆ ಇಲ್ಲ ಇಂಥ ಖುಷಿಯ .....
ಪ್ರೀತಿನ ಇದು......ಪ್ರೀತಿನ ಇದು........
ನನ್ನಲ್ಲೇ ನಾನೇ ಇಲ್ಲ ಈಗ ಯಾಕೋ ಯಾಕೋ ಯಾಕೋ....
ಚಲಿಸೋ ಓ ಬೆಳ್ಳಿ ಮೋಡ ಇಳಿದು ಬಾ ನಿನ್ನ ಕೂಡ
ಕುಳಿತು ಮಾತಾಡೊವಾಸೆ ಆಗಿದೆ
ಅವಳ ಅಂದಾನ ಕುರಿತೆ ಮನಸು ಬರೆದಂತ ಗೀತೆ
ಬಳಿಗೆ ನೀ ಬಂದು ಕೇಳಬಾರದೆ
ಇನ್ನು ಎಂದು ನೆರಳ ಹಾಗೆ ನಾನು ಇವಳ
ಜೊತೆಯಲೇ ಇರಲ ಅನುಗಾಲ
ನಡೆ ನುಡಿ ಸರಳ ಮೆಚ್ಚಿಕೊಂಡೆ ಬಹಳ
ನನಗೆ ಅಂತ ಹುಟ್ಟಿ ಬಂದ ತಾರೆ ಇವಳ
ಪ್ರೀತಿನ ಇದು......ಪ್ರೀತಿನ ಇದು........
ನನ್ನಲ್ಲೇ ನಾನೇ ಇಲ್ಲ ಈಗ ಯಾಕೋ ಯಾಕೋ ಯಾಕೋ....
ನಮ್ಮ ಈ ಪುಟ್ಟ ಗೂಡು ಇಲ್ಲಿ ಪ್ರೀತಿಯ ಹಾಡು
ಗುನುಗೋ ಈ ಸಮಯ ಹೀಗೆ ಇರಲಿ
ಜೊತೆಗೆ ನಡೆವಾಗ ಹೀಗೆ ಬಾಳು ಒಂದಾದ ಹಾಗೆ
ಅನಿಸೋ ಈ ಸಮಯ ಎಂದು ಸಿಗಲಿ
ಮಾತು ಮರೆತು ಹೋಗಿದೆ ಮನಸು ಕಳೆದು ಹೋಗಿದೆ
ಕಂಗಳಂತೆ ನೋಡಲು ಹೃದಯ ಕಲೆಯಬಾರದೆ
ನಿನ್ನ ನಾನು ನೋಡದೆ ಒಂದು ಕ್ಷಣ ಜಾರದೆ
ಸಮಯ ಮೀರಿ ಹೋಗೊ ಮುನ್ನ ಹೇಳು ಆಸೆಯಾ........
ಗಾಯಕ: ಕಾರ್ತಿಕ್
ನಟರು: ಸುದೀಪ್, ರಮ್ಯ
ಅನುರಾಗ ಅರಳೋ ಸಮಯ
ಮನಸುಗಳು ಮಾತಾಡೋ ಸಮಯ
ಯಾರೋ ಯಾರ ದಾರಿಯನ್ನು ಕಾಯೋ ಸಮಯ
ಮೊಗ್ಗು ಮೆಲ್ಲ ಹಿಗ್ಗಿ ಹೂವು ಆಗೋ ಸಮಯ
ಕದ್ದು ಕೊಂಡರು ಯಾರೋ ನನ್ನ ಹೃದಯ
ಹಿಂದೆ ಎಂದು ಕಂಡೆ ಇಲ್ಲ ಇಂಥ ಖುಷಿಯ .....
ಪ್ರೀತಿನ ಇದು......ಪ್ರೀತಿನ ಇದು........
ನನ್ನಲ್ಲೇ ನಾನೇ ಇಲ್ಲ ಈಗ ಯಾಕೋ ಯಾಕೋ ಯಾಕೋ....
ಚಲಿಸೋ ಓ ಬೆಳ್ಳಿ ಮೋಡ ಇಳಿದು ಬಾ ನಿನ್ನ ಕೂಡ
ಕುಳಿತು ಮಾತಾಡೊವಾಸೆ ಆಗಿದೆ
ಅವಳ ಅಂದಾನ ಕುರಿತೆ ಮನಸು ಬರೆದಂತ ಗೀತೆ
ಬಳಿಗೆ ನೀ ಬಂದು ಕೇಳಬಾರದೆ
ಇನ್ನು ಎಂದು ನೆರಳ ಹಾಗೆ ನಾನು ಇವಳ
ಜೊತೆಯಲೇ ಇರಲ ಅನುಗಾಲ
ನಡೆ ನುಡಿ ಸರಳ ಮೆಚ್ಚಿಕೊಂಡೆ ಬಹಳ
ನನಗೆ ಅಂತ ಹುಟ್ಟಿ ಬಂದ ತಾರೆ ಇವಳ
ಪ್ರೀತಿನ ಇದು......ಪ್ರೀತಿನ ಇದು........
ನನ್ನಲ್ಲೇ ನಾನೇ ಇಲ್ಲ ಈಗ ಯಾಕೋ ಯಾಕೋ ಯಾಕೋ....
ನಮ್ಮ ಈ ಪುಟ್ಟ ಗೂಡು ಇಲ್ಲಿ ಪ್ರೀತಿಯ ಹಾಡು
ಗುನುಗೋ ಈ ಸಮಯ ಹೀಗೆ ಇರಲಿ
ಜೊತೆಗೆ ನಡೆವಾಗ ಹೀಗೆ ಬಾಳು ಒಂದಾದ ಹಾಗೆ
ಅನಿಸೋ ಈ ಸಮಯ ಎಂದು ಸಿಗಲಿ
ಮಾತು ಮರೆತು ಹೋಗಿದೆ ಮನಸು ಕಳೆದು ಹೋಗಿದೆ
ಕಂಗಳಂತೆ ನೋಡಲು ಹೃದಯ ಕಲೆಯಬಾರದೆ
ನಿನ್ನ ನಾನು ನೋಡದೆ ಒಂದು ಕ್ಷಣ ಜಾರದೆ
ಸಮಯ ಮೀರಿ ಹೋಗೊ ಮುನ್ನ ಹೇಳು ಆಸೆಯಾ........
ninna nodalento - mussanje maatu
ಚಿತ್ರ: ಮುಸ್ಸಂಜೆ ಮಾತು
ಹಾಡಿದವರು: ಸೋನು ನಿಗಮ್, ಶ್ರೇಯ ಗೋಶಲ್
ನಟರು: ಸುದೀಪ್, ರಮ್ಯ
ನಿನ್ನ ನೋಡಲೆಂತೋ ಮಾತನಾಡಲೆಂತೋ
ಮನಸ ಕೇಳಲೆಂತೋ ಪ್ರೀತಿ ಹೇಳಲೆಂತೋ
ಆಹಾ ಒಂಥರಾ ಥರಾ ಹೇಳಲೊಂಥರ ಥರ ಕೇಳಲೊಂಥರ ಥರ
ಹೇಳಲೊಂಥರ ಥರ ಕೇಳಲೊಂಥರ ಥರ.......
ಕಣ್ಣಿಗೇನು ಕಾಣದೆ ಸ್ಪರ್ಶವೇನು ಇಲ್ಲದೆ
ಏನೋ ನನ್ನ ಕಾಡಿದೆ ಏನು ಅರ್ಥವಾಗದೆ
ಹಗಲು ರಾತ್ರಿ ನಿನ್ನದೇ ನೂರು ನೆನಪು ಮೂಡಿದೆ
ನನ್ನಲೇನೋ ಆಗಿದೆ ಹೇಳಲೇನು ಆಗದೆ
ಮನಸು ಮಾಯವೆಂತೋ ಮಧುರ ಭಾವವೆಂತೋ
ಪಯಣ ಎಲ್ಲಿಗೆಂತೋ ನಯನ ಸೇರಲೆಂತೋ
ಮಿಲನವಾಗಲೆಂತೋ ಗಮನ ಎಲ್ಲೋ ಎಂತೋ
ಆಹಾ ಒಂಥರಾ ಥರ ಹೇಳಲೊಂಥರ ಥರ ಕೇಳಲೊಂಥರ ಥರ
ಹೇಳಲೊಂಥರ ಥರ ಕೇಳಲೊಂಥರ ಥರ
ಮೆಲ್ಲ ಮೆಲ್ಲ ಮೆಲ್ಲುವ ಸನ್ನೆಯಲ್ಲೆ ಕೊಲ್ಲುವ
ಸದ್ದೇ ಇರದ ಉತ್ಸವ ಪ್ರೀತಿಯೊಂದೆ ಅಲ್ಲವ
ಘಲ್ಲು ಘಲ್ಲು ಎನ್ನುವ ಹೃದಯ ಗೆಜ್ಜೆ ನಾದವ
ಪ್ರೀತಿ ತಂದ ರಾಗವ ತಾಳಲೆಂತೋ ಭಾವವ
ಹೃದಯದಲ್ಲಿ ಎಂತೋ ಉದಯವಾಯಿತೆಂತೋ
ಸನಿಹವಾಗಲೆಂತೋ ಕನಸ ಕಾಣಲೆಂತೋ
ಹರುಷ ಏನೋ ಎಂತೋ ಸೊಗಸ ಹೇಳಲೆಂತೋ
ಆಹಾ ಒಂಥರಾ ಥರ ಹೇಳಲೊಂಥರ ಥರ ಕೇಳಲೊಂಥರ ಥರ
ಹೇಳಲೊಂಥರ ಥರ ಕೇಳಲೊಂಥರ ಥರ
ಹಾಡಿದವರು: ಸೋನು ನಿಗಮ್, ಶ್ರೇಯ ಗೋಶಲ್
ನಟರು: ಸುದೀಪ್, ರಮ್ಯ
ನಿನ್ನ ನೋಡಲೆಂತೋ ಮಾತನಾಡಲೆಂತೋ
ಮನಸ ಕೇಳಲೆಂತೋ ಪ್ರೀತಿ ಹೇಳಲೆಂತೋ
ಆಹಾ ಒಂಥರಾ ಥರಾ ಹೇಳಲೊಂಥರ ಥರ ಕೇಳಲೊಂಥರ ಥರ
ಹೇಳಲೊಂಥರ ಥರ ಕೇಳಲೊಂಥರ ಥರ.......
ಕಣ್ಣಿಗೇನು ಕಾಣದೆ ಸ್ಪರ್ಶವೇನು ಇಲ್ಲದೆ
ಏನೋ ನನ್ನ ಕಾಡಿದೆ ಏನು ಅರ್ಥವಾಗದೆ
ಹಗಲು ರಾತ್ರಿ ನಿನ್ನದೇ ನೂರು ನೆನಪು ಮೂಡಿದೆ
ನನ್ನಲೇನೋ ಆಗಿದೆ ಹೇಳಲೇನು ಆಗದೆ
ಮನಸು ಮಾಯವೆಂತೋ ಮಧುರ ಭಾವವೆಂತೋ
ಪಯಣ ಎಲ್ಲಿಗೆಂತೋ ನಯನ ಸೇರಲೆಂತೋ
ಮಿಲನವಾಗಲೆಂತೋ ಗಮನ ಎಲ್ಲೋ ಎಂತೋ
ಆಹಾ ಒಂಥರಾ ಥರ ಹೇಳಲೊಂಥರ ಥರ ಕೇಳಲೊಂಥರ ಥರ
ಹೇಳಲೊಂಥರ ಥರ ಕೇಳಲೊಂಥರ ಥರ
ಮೆಲ್ಲ ಮೆಲ್ಲ ಮೆಲ್ಲುವ ಸನ್ನೆಯಲ್ಲೆ ಕೊಲ್ಲುವ
ಸದ್ದೇ ಇರದ ಉತ್ಸವ ಪ್ರೀತಿಯೊಂದೆ ಅಲ್ಲವ
ಘಲ್ಲು ಘಲ್ಲು ಎನ್ನುವ ಹೃದಯ ಗೆಜ್ಜೆ ನಾದವ
ಪ್ರೀತಿ ತಂದ ರಾಗವ ತಾಳಲೆಂತೋ ಭಾವವ
ಹೃದಯದಲ್ಲಿ ಎಂತೋ ಉದಯವಾಯಿತೆಂತೋ
ಸನಿಹವಾಗಲೆಂತೋ ಕನಸ ಕಾಣಲೆಂತೋ
ಹರುಷ ಏನೋ ಎಂತೋ ಸೊಗಸ ಹೇಳಲೆಂತೋ
ಆಹಾ ಒಂಥರಾ ಥರ ಹೇಳಲೊಂಥರ ಥರ ಕೇಳಲೊಂಥರ ಥರ
ಹೇಳಲೊಂಥರ ಥರ ಕೇಳಲೊಂಥರ ಥರ
ivanu geLeyanalla - mungaru maLe
ಚಿತ್ರ: ಮುಂಗಾರು ಮಳೆ
ಹಾಡಿದವರು: ಶ್ರೇಯ ಘೋಶಾಲ್
ನಟರು: ಗಣೇಶ್, ಪೂಜಾ ಗಾಂಧಿ
ಇವನು ಗೆಳೆಯನಲ್ಲ ಗೆಳತಿ ನಾನು ಮೊದಲೇ ಅಲ್ಲ
ಇವನು ಇನಿಯನಲ್ಲ ತುಂಬಾ ಸನಿಹ ಬಂದಿಹನಲ್ಲ
ನೋವಿನಲ್ಲೂ ನಗುತಿಹನಲ್ಲ ಯಾಕೆ ಈ ಥರ
ಜಾಣ ಮನವೇ ಕೇಳು ಜಾರಬೇಡ ಇವನ ಕಡೆಗೆ
ಯಾಕೆ ನಿನಗೆ ಸಲ್ಲದ ಸಲಿಗೆ, ಇರಲಿ ಅಂತರ
ಒಲವ ಹಾದಿಯಲ್ಲಿ ಇವನು ನನಗೆ ಹೂವೋ ಮುಳ್ಲೋ
ಮನದ ಕಡಲಿನಲ್ಲಿ ಇವನು ಅಲೆಯೋ ಭೀಕರ ಸುಳಿಯೊ
ಅರಿಯದಂಥ ಹೊಸ ಕಂಪನವೊ ಯಾಕೋ ಕಾಣೆನೊ
ಅರಿತೊ ಮರೆತೊ ಜೀವ ವಾಲದಂತೆ ಇವನ ಕಡೆಗೆ
ಸೋಲದಂತೆ ಕಾಯೇ ಮನವೆ ಉಳಿಸು ನನ್ನನು
ಇವನು ಇನಿಯಲ್ಲ ತುಂಬ ಸನಿಹ ಬಂದಿಹನಲ್ಲ
ತಿಳಿದು ತಿಳಿದು ಇವನು ತನ್ನ ತಾನೇ ಸುಡುತಿಹನಲ್ಲ
ಒಲುಮೆ ಎಂಬ ಸುಳಿಗೆ ಈಜು ಬರದೆ ಇಳಿದಿಹನಲ್ಲ
ಸಾವಿನಲ್ಲು ನಗುವುದ ಬಲ್ಲ ಏನೋ ಕಳವಳ
ಮುಳುಗುವವನ ಕೂಗು ಚಾಚುವಂತೆ ಮಾಡಿದೆ ಕೈಯ
ಜಾರಿ ಬಿಡುವುದೇ ಈ ಹೃದಯ ಏನೋ ತಳಮಳ
ಇವನು ಇನಿಯನಲ್ಲ ತುಂಬ ಸನಿಹ ಬಂದಿಹನಲ್ಲ
ಹಾಡಿದವರು: ಶ್ರೇಯ ಘೋಶಾಲ್
ನಟರು: ಗಣೇಶ್, ಪೂಜಾ ಗಾಂಧಿ
ಇವನು ಗೆಳೆಯನಲ್ಲ ಗೆಳತಿ ನಾನು ಮೊದಲೇ ಅಲ್ಲ
ಇವನು ಇನಿಯನಲ್ಲ ತುಂಬಾ ಸನಿಹ ಬಂದಿಹನಲ್ಲ
ನೋವಿನಲ್ಲೂ ನಗುತಿಹನಲ್ಲ ಯಾಕೆ ಈ ಥರ
ಜಾಣ ಮನವೇ ಕೇಳು ಜಾರಬೇಡ ಇವನ ಕಡೆಗೆ
ಯಾಕೆ ನಿನಗೆ ಸಲ್ಲದ ಸಲಿಗೆ, ಇರಲಿ ಅಂತರ
ಒಲವ ಹಾದಿಯಲ್ಲಿ ಇವನು ನನಗೆ ಹೂವೋ ಮುಳ್ಲೋ
ಮನದ ಕಡಲಿನಲ್ಲಿ ಇವನು ಅಲೆಯೋ ಭೀಕರ ಸುಳಿಯೊ
ಅರಿಯದಂಥ ಹೊಸ ಕಂಪನವೊ ಯಾಕೋ ಕಾಣೆನೊ
ಅರಿತೊ ಮರೆತೊ ಜೀವ ವಾಲದಂತೆ ಇವನ ಕಡೆಗೆ
ಸೋಲದಂತೆ ಕಾಯೇ ಮನವೆ ಉಳಿಸು ನನ್ನನು
ಇವನು ಇನಿಯಲ್ಲ ತುಂಬ ಸನಿಹ ಬಂದಿಹನಲ್ಲ
ತಿಳಿದು ತಿಳಿದು ಇವನು ತನ್ನ ತಾನೇ ಸುಡುತಿಹನಲ್ಲ
ಒಲುಮೆ ಎಂಬ ಸುಳಿಗೆ ಈಜು ಬರದೆ ಇಳಿದಿಹನಲ್ಲ
ಸಾವಿನಲ್ಲು ನಗುವುದ ಬಲ್ಲ ಏನೋ ಕಳವಳ
ಮುಳುಗುವವನ ಕೂಗು ಚಾಚುವಂತೆ ಮಾಡಿದೆ ಕೈಯ
ಜಾರಿ ಬಿಡುವುದೇ ಈ ಹೃದಯ ಏನೋ ತಳಮಳ
ಇವನು ಇನಿಯನಲ್ಲ ತುಂಬ ಸನಿಹ ಬಂದಿಹನಲ್ಲ
aaha ee bedarubombege - gaalipata
ಚಿತ್ರ: ಗಾಳಿಪಟ
ಹಾಡಿದವರು: ಅನುರಾಧ ಶ್ರೀರಾಮ್, ಉದಿತ್ ನಾರಾಯಣ್
ನಟರು: ದಿಗಂತ್, ನೀತು ಮತ್ತು ಇತರರು
ಆಹಾ ಈ ಬೆದರು ಬೊಂಬೆಗೆ ಜೀವ ಬಂದಿರುವ ಹಾಗಿದೆ
ಎಹೆ ಹೆಚ್ಚೇನು ಹೇಳಲಿ ಹುಚ್ಚು ಹೆಚ್ಚಾಗಿ ಹೋಗಿದೆ
ನೆನಪಿನ ಜಾತ್ರೆಯಲಿ ಅಲೆದು, ನಾ ಕನಸಿನ ಕನ್ನಡಿಯ ಕೊಳ್ಳಲೆ
ಹೇ ನಿನ್ನಯ ದಾರಿಯಲಿ ಅನುದಿನ, ಹೃದಯದ ಅಂಗಡಿಯ ತೆರೆಯಲೆ
ಕೆನ್ನೆಯ ಗುಳಿಯೆ ನಿನ್ನ ಕೀರುತಿಯೆ
ಮುಂಗೋಪವೇನು ನಿನ್ನ ಮೂಗುತಿಯೆ
ಸೂರ್ಯನ ಮುಖದಲ್ಲಿ ಮೀಸೆಯ ಬರೆಯುವೆಯ
ಚಂದ್ರನ ಕರೆದಿಲ್ಲಿ ದೋಸೆಯಾ ತಿನಿಸುವೆಯ
ಕುಂಟೋ ಬಿಲ್ಲೆಯಲಿ ಮನಸು ತಲುಪುವೆಯಾ
ಕಳೆದು ಹೋಗಿರುವೆ ದಾರಿ ತಿಳಿಸುವೆಯ
ಪ್ರೀತಿಗೆ ಯಾಕೆ ಈ ಉಪವಾಸ
ಯಾತಕ್ಕು ಇರಲಿ ನಿನ್ನ ಸಹವಾಸ
ಅಂಚೆಯ ಪೆಟ್ಟಿಗೆಗೆ ಹೃದಯವ ಹಾಕಿರುವೆ
ನೆನಪಿನ ಕೊಟ್ಟಿಗೆಗೆ ನಿನ್ನನ್ನೇ ನೂಕಿರುವೆ
ನಂಬಿ ಕೆಟ್ಟಿರುವೆ ಏನು ಪರಿಹಾರ
ನಿನಗೆ ಕಟ್ಟಿರುವೆ ಮನದ ಗಡಿಯಾರ
ಹಾಡಿದವರು: ಅನುರಾಧ ಶ್ರೀರಾಮ್, ಉದಿತ್ ನಾರಾಯಣ್
ನಟರು: ದಿಗಂತ್, ನೀತು ಮತ್ತು ಇತರರು
ಆಹಾ ಈ ಬೆದರು ಬೊಂಬೆಗೆ ಜೀವ ಬಂದಿರುವ ಹಾಗಿದೆ
ಎಹೆ ಹೆಚ್ಚೇನು ಹೇಳಲಿ ಹುಚ್ಚು ಹೆಚ್ಚಾಗಿ ಹೋಗಿದೆ
ನೆನಪಿನ ಜಾತ್ರೆಯಲಿ ಅಲೆದು, ನಾ ಕನಸಿನ ಕನ್ನಡಿಯ ಕೊಳ್ಳಲೆ
ಹೇ ನಿನ್ನಯ ದಾರಿಯಲಿ ಅನುದಿನ, ಹೃದಯದ ಅಂಗಡಿಯ ತೆರೆಯಲೆ
ಕೆನ್ನೆಯ ಗುಳಿಯೆ ನಿನ್ನ ಕೀರುತಿಯೆ
ಮುಂಗೋಪವೇನು ನಿನ್ನ ಮೂಗುತಿಯೆ
ಸೂರ್ಯನ ಮುಖದಲ್ಲಿ ಮೀಸೆಯ ಬರೆಯುವೆಯ
ಚಂದ್ರನ ಕರೆದಿಲ್ಲಿ ದೋಸೆಯಾ ತಿನಿಸುವೆಯ
ಕುಂಟೋ ಬಿಲ್ಲೆಯಲಿ ಮನಸು ತಲುಪುವೆಯಾ
ಕಳೆದು ಹೋಗಿರುವೆ ದಾರಿ ತಿಳಿಸುವೆಯ
ಪ್ರೀತಿಗೆ ಯಾಕೆ ಈ ಉಪವಾಸ
ಯಾತಕ್ಕು ಇರಲಿ ನಿನ್ನ ಸಹವಾಸ
ಅಂಚೆಯ ಪೆಟ್ಟಿಗೆಗೆ ಹೃದಯವ ಹಾಕಿರುವೆ
ನೆನಪಿನ ಕೊಟ್ಟಿಗೆಗೆ ನಿನ್ನನ್ನೇ ನೂಕಿರುವೆ
ನಂಬಿ ಕೆಟ್ಟಿರುವೆ ಏನು ಪರಿಹಾರ
ನಿನಗೆ ಕಟ್ಟಿರುವೆ ಮನದ ಗಡಿಯಾರ
aakasha ishte yaakideyo - gaalipata
ಚಿತ್ರ: ಗಾಳಿಪಟ
ಹಾಡಿದವರು: ಕುನಾಲ್ ಗಾಂಜಾವಾಲ
ನಟರು: ಗಣೇಶ್, ಡೈಸಿ ಮತ್ತು ಇತರರು
ನನೈ ನನನೈ..... ನನೈ ನನನೈ...... ನನೈ ನನನೈನಿ..... ನನೈ ನನನೈ
ಆಕಾಶ ಇಷ್ಟೇ ಯಾಕಿದೆಯೋ
ಈ ಭೂಮಿ ಕಷ್ಟ ಆಗಿದೆಯೋ
ಹಂಚೋಣ ಈ ಪ್ರೀತಿ ಬೇಕಿಲ್ಲ ರಸೀತಿ
ಮುಗಿಲನ್ನೆ ಮುದ್ದಾಡಿ ರೆಕ್ಕೆ ಬಿಚ್ಚಿ ಹಾರೋ ನಾವೆ.....ಗಾಳಿಪಟ ಗಾಳಿಪಟ ಗಾಳಿಪಟ
ಕನಸಿನ ನೋಟಿಗೆ ಚಿಲ್ಲರೆ ಬೇಕೇ
ನಗುವನ್ನು ಎಲ್ಲೋ ಮರೆತಿರುವೇಕೆ
ಕಿಸೆಯಲ್ಲಿ ಕದ್ದ ಚಂದ್ರನ ಚೂರು
ನಮ್ಮನ್ನು ಪತ್ತೆ ಮಾಡುವರಾರು
ಹೋಳಾಗಿದೆ ಈ ಭೂಪಟ
ಹಾರಾಟವೇ ನಮ್ಮ ಹಟ.....ಗಾಳಿಪಟ ಗಾಳಿಪಟ ಗಾಳಿಪಟ
ಕಾಮನಬಿಲ್ಲು ಬಾಡಿಗೆಗುಂಟೆ
ಸ್ನೇಹಕ್ಕು ಕೂಡ ರೇಶನ್ ಬಂತೆ
ಸಂಭ್ರಮಕಿಲ್ಲ ಸೀಸನ್ ಟಿಕೇಟು
ಏರಿಸಬೇಕು ನಮ್ಮ ರಿಬೇಟು
ಇದು ಪ್ರೀತಿಯ ಚಿತ್ರಪಟ
ಈ ದೋಸ್ತಿಯೆ ನಮ್ಮ ಚಟ....ಗಾಳಿಪಟ ಗಾಳಿಪಟ ಗಾಳಿಪಟ
ಆಕಾಶ ಇಷ್ಟೇ ಯಾಕಿದೆಯೋ
ಈ ಭೂಮಿ ಕಷ್ಟ ಆಗಿದೆಯೋ
ಇಲ್ಲೇನೋ ಸರಿಯಿಲ್ಲ ಇನ್ನೇನೋ ಬೇಕಲ್ಲ
ನಕ್ಷತ್ರ ಲೋಕಕ್ಕೆ ಲಗ್ಗೆ ಇಟ್ಟು ಹಾರೋ ನಾವೆ.....ಗಾಳಿಪಟ ಗಾಳಿಪಟ ಗಾಳಿಪಟ
ಹಾಡಿದವರು: ಕುನಾಲ್ ಗಾಂಜಾವಾಲ
ನಟರು: ಗಣೇಶ್, ಡೈಸಿ ಮತ್ತು ಇತರರು
ನನೈ ನನನೈ..... ನನೈ ನನನೈ...... ನನೈ ನನನೈನಿ..... ನನೈ ನನನೈ
ಆಕಾಶ ಇಷ್ಟೇ ಯಾಕಿದೆಯೋ
ಈ ಭೂಮಿ ಕಷ್ಟ ಆಗಿದೆಯೋ
ಹಂಚೋಣ ಈ ಪ್ರೀತಿ ಬೇಕಿಲ್ಲ ರಸೀತಿ
ಮುಗಿಲನ್ನೆ ಮುದ್ದಾಡಿ ರೆಕ್ಕೆ ಬಿಚ್ಚಿ ಹಾರೋ ನಾವೆ.....ಗಾಳಿಪಟ ಗಾಳಿಪಟ ಗಾಳಿಪಟ
ಕನಸಿನ ನೋಟಿಗೆ ಚಿಲ್ಲರೆ ಬೇಕೇ
ನಗುವನ್ನು ಎಲ್ಲೋ ಮರೆತಿರುವೇಕೆ
ಕಿಸೆಯಲ್ಲಿ ಕದ್ದ ಚಂದ್ರನ ಚೂರು
ನಮ್ಮನ್ನು ಪತ್ತೆ ಮಾಡುವರಾರು
ಹೋಳಾಗಿದೆ ಈ ಭೂಪಟ
ಹಾರಾಟವೇ ನಮ್ಮ ಹಟ.....ಗಾಳಿಪಟ ಗಾಳಿಪಟ ಗಾಳಿಪಟ
ಕಾಮನಬಿಲ್ಲು ಬಾಡಿಗೆಗುಂಟೆ
ಸ್ನೇಹಕ್ಕು ಕೂಡ ರೇಶನ್ ಬಂತೆ
ಸಂಭ್ರಮಕಿಲ್ಲ ಸೀಸನ್ ಟಿಕೇಟು
ಏರಿಸಬೇಕು ನಮ್ಮ ರಿಬೇಟು
ಇದು ಪ್ರೀತಿಯ ಚಿತ್ರಪಟ
ಈ ದೋಸ್ತಿಯೆ ನಮ್ಮ ಚಟ....ಗಾಳಿಪಟ ಗಾಳಿಪಟ ಗಾಳಿಪಟ
ಆಕಾಶ ಇಷ್ಟೇ ಯಾಕಿದೆಯೋ
ಈ ಭೂಮಿ ಕಷ್ಟ ಆಗಿದೆಯೋ
ಇಲ್ಲೇನೋ ಸರಿಯಿಲ್ಲ ಇನ್ನೇನೋ ಬೇಕಲ್ಲ
ನಕ್ಷತ್ರ ಲೋಕಕ್ಕೆ ಲಗ್ಗೆ ಇಟ್ಟು ಹಾರೋ ನಾವೆ.....ಗಾಳಿಪಟ ಗಾಳಿಪಟ ಗಾಳಿಪಟ
Subscribe to:
Posts (Atom)